ಕರ್ಣಿಸೇನಾದ ಗೋರಖ್ಪುರ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಮಾತನಾಡಿ, ‘ರಜಪೂತರು, ಮಹಿಳೆಯರು ಅಗೌರವ ಮತ್ತು ಅವಮಾನಕ್ಕೊಳಗಾದಾಗ ಅವರಿಗೆ ಬೆಂಬಲವಾಗಿ ಸದಾ ನಿಲ್ಲುತ್ತಾರೆ. ಸಂಸದರಾಗಿ ಸಂಜಯ್ ರಾವುತ್ ಅವರು ಕಂಗನಾ ವಿರುದ್ಧ ಅಸಂಸದೀಯ ಭಾಷೆ ಬಳಸಿರುವುದು ನಾಚಿಕೆಗೇಡಿನ ಸಂಗತಿ. ಇದನ್ನು ನಾವು ಖಂಡಿಸುತ್ತೇವೆ’ ಎಂದರು.