<p><strong>ಶ್ರೀನಗರ</strong>: ಮೊಹರಂ ಮೆರವಣಿಗೆ ತಡೆಯುವ ಸಲುವಾಗಿ ಶ್ರೀನಗರ ಸೇರಿದಂತೆ ಕಾಶ್ಮಿರದ ಹಲವು ಕಡೆಗಳಲ್ಲಿ ಮಂಗಳವಾರ ಮತ್ತೆ ನಿರ್ಬಂಧಗಳನ್ನು ಹೇರಲಾಗಿದೆ.</p>.<p>ಲಾಲ್ಚೌಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರವೇಶದ್ವಾರಗಳಲ್ಲಿ ಮುಳ್ಳಿನ ತಂತಿಗಳನ್ನು ಹಾಕಲಾಗಿದೆ. ಬೃಹತ್ ಪ್ರಮಾಣದ ಭದ್ರತಾಪಡೆಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಶ್ಮೀರದಲ್ಲಿ 1990ರಿಂದಲೂ ಮೊಹರಂ ಮೆರವಣಿಗೆಗಳ ಮೇಲೆ ನಿರ್ಬಂಧವಿದೆ.</p>.<p><strong>ಪಾಕ್ ಜತೆ ಕೇವಲ ಪಿಒಕೆ ಬಗ್ಗೆ ಚರ್ಚೆ: ಉಪರಾಷ್ಟ್ರಪತಿ</strong></p>.<p><strong>ನವದೆಹಲಿ: </strong>ಪಾಕಿಸ್ತಾದನ ಜತೆ ಮಾತುಕತೆ ನಡೆಯುವುದೇ ಆದಲ್ಲಿ, ಅದು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ಮಾತ್ರವೇ ಆಗಿರುತ್ತದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.</p>.<p>ಜಮ್ಮು ಕಾಶ್ಮೀರದಿಂದ ಬಂದಿದ್ದ ಪಂಚಾಯಿತಿ ಸದಸ್ಯರು ಹಾಗೂ ಸರಪಂಚ್ಗಳ ಜತೆ ಸಂವಾದ ನಡೆಸಿದ ಅವರು,ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡಿರುವ ಕಾರಣ, ರಾಜ್ಯದ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದರು.</p>.<p>ಕಾಯ್ದೆ ರದ್ದತಿ ಬಳಿಕ ಪಂಚಾಯಿತಿಗಳನ್ನು ಇನ್ನಷ್ಟು ಕ್ರಿಯಾತ್ಮಕವಾಗಿ ಕೆಲಸ ಮಾಡಲು ಅವಕಾಶವಿದೆ. ಕೇಂದ್ರ ಸರ್ಕಾರದಿಂದ ಸ್ಥಳೀಯಾಡಳಿತಗಳಿಗೆ ಹಣಕಾಸಿನ ಅನುದಾನ ಹಾಗೂ ವಿವಿಧ ಕಾರ್ಯಕ್ರಮಗಳು ಲಭ್ಯವಾಗಲಿವೆ ಎಂದರು.</p>.<p><strong>ಕಾಶ್ಮೀರ ಸ್ತಬ್ಧಗೊಂಡಿಲ್ಲ, ನಿಷೇಧಾಜ್ಞೆಯೂ ಇಲ್ಲ: ಜಿತೇಂದ್ರ ಸಿಂಗ್</strong></p>.<p class="bodytext">ಜಮ್ಮು ಕಾಶ್ಮೀರ ಸ್ಥಬ್ತಗೊಂಡಿದ್ದು, ನಿಷೇಧಾಜ್ಞೆ ಮುಂದುವರಿದಿದೆ ಎಂಬ ವರದಿಗಳನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಳ್ಳಿಹಾಕಿದ್ದಾರೆ.</p>.<p class="bodytext">‘ಒಂದು ವೇಳೆ ನಿಷೇಧಾಜ್ಞೆ ಜಾರಿಯಿದ್ದರೆ, ಕರ್ಫ್ಯೂ ಪಾಸ್ ಪಡೆದು ಜನರು ಹೊರಗೆ ಬರಬಹುದು. ಆದರೆ ಈವರೆಗೆ ಯಾರೂ ಪಾಸ್ಗಳನ್ನು ಕೇಳಿಲ್ಲ. ಶಾಂತಿಭಂಗ ತಡೆಯಲು ಕೆಲವೊಂದು ನಿರ್ಬಂಧ ವಿಧಿಸಲಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.</p>.<p class="bodytext"><strong>ಸರ್ಕಾರದಿಂದಲೇ ಸೇಬು ಖರೀದಿ</strong></p>.<p><strong>ನವದೆಹಲಿ: </strong>ರೈತರು ಬೆಳೆಯುವ ಸೇಬುಹಣ್ಣುಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವೇ ನೇರವಾಗಿ ಖರೀದಿಸಲಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್ಎಎಫ್ಇಡಿ) ಮೂಲಕ ಡಿಸೆಂಬರ್ 15ರೊಳಗೆ ಖರೀದಿಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಮಾರುಕಟ್ಟೆಯಲ್ಲಿ ಸೇಬು ಮಾರಾಟ ಮಾಡದಂತೆ ಭಯೋತ್ಪಾದಕರಿಂದ ಕೆಲವು ರೈತರಿಗೆ ಬೆದರಿಕೆ ಎದುರಾಗಿರುವ ಕಾರಣ ಸರ್ಕಾರವೇ ಹಣ್ಣಿನ ದಾಸ್ತಾನು ಮಾಡಲು ಮುಂದಾಗಿದೆ. ಕಳೆದ ಶುಕ್ರವಾರ ಹಣ್ಣಿನ ವ್ಯಾಪಾರಿಗಳ ಮೇಲೆ ದಾಳಿ ನಡೆದಿತ್ತು.</p>.<p>ರೈತರ ಕೃಷಿ ಉತ್ಪನ್ನಗಳಿಗೆಸಹಕಾರಿ ಮಾರುಕಟ್ಟೆ ಒದಗಿಸುವುದು ಒಕ್ಕೂಟದ ಉದ್ದೇಶವಾಗಿದೆ. ಹಣವನ್ನು ರೈತರ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಪಾವತಿ ಮಾಡಲಿದೆ.</p>.<p>ಜಮ್ಮು ಕಾಶ್ಮೀರದಲ್ಲಿ ಸೇಬು ಬೆಳೆಯುವ ಎಲ್ಲ ಜಿಲ್ಲೆಗಳು ಹಾಗೂ ಸೋಪುರ್, ಶೋಪಿಯಾನ್ ಹಾಗೂ ಶ್ರೀನಗರದ ಸಗಟು ಮಾರುಕಟ್ಟೆಗಳಿಂದ ಎ, ಬಿ ಹಾಗೂ ಸಿ ದರ್ಜೆಯ ಸೇಬು ಖರೀದಿಸಲು ಸರ್ಕಾರ ಮುಂದಾಗಿದೆ.</p>.<p>ಹಣ್ಣು ತುಂಬಿದ 750 ಲಾರಿಗಳು ಪ್ರತಿನಿತ್ಯವೂ ಕಾಶ್ಮೀರದಿಂದ ದೇಶದ ನಾನಾಕಡೆಗೆ ಸಂಚರಿಸುತ್ತವೆ.</p>.<p><strong>ಎಂಟು ಸಹಚರರ ಬಂಧನ</strong></p>.<p>ಸೋಪೊರ್ನಲ್ಲಿ ಸ್ಥಳೀಯರಿಗೆ ಬೆದರಿಕೆ ಒಡ್ಡುವ ಕರಪತ್ರಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಲಷ್ಕರ್ ಉಗ್ರ ಸಂಘಟನೆಯ ಎಂಟು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಕಾಶ್ಮೀರದ ವಿವಿಧ ಭಾಗಗಳಲ್ಲಿ ಕರಪತ್ರಗಳು ಕಂಡುಬಂದಿವೆ. ನಿಷೇಧಾಜ್ಞೆಯನ್ನು ಭಂಗಗೊಳಿಸುವಂತೆ ಜನರಿಗೆ ಕರೆ ನೀಡಲಾಗಿದೆ.</p>.<p>ಅಯಾಜ್ ಮಿರ್, ಒಮರ್ ಮಿರ್, ತೌಸಿಫ್ ನಜರ್, ಇಮ್ತಿಯಾಜ್ ನಜರ್, ಒಮರ್ ಅಕ್ಬರ್, ಜೈಜನ್ ಲತೀಫ್, ದಾನಿಷ್ ಹಬೀಬ್ ಮತ್ತು ಶೌಕತ್ ಅಹ್ಮದ್ ಮಿರ್ ಎಂಬುವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.ಕಂಪ್ಯೂಟರ್ಗಳನ್ನು ಜಪ್ತಿ ಮಾಡಲಾಗಿದೆ.</p>.<p>ಸ್ಥಳೀಯ ಉಗ್ರ ಸಾಜದ್ ಮಿರ್, ಈತನ ಸಹಚರರಾದ ಮುದಾಸ್ಸಿರ್ ಪಂಡಿತ್ ಮತ್ತು ಅಸಿಫ್ ಮಕ್ಬೂಲ್ ಭಟ್ ಅವರು ನಿಷೇಧಿ ಲಷ್ಕರ್ ಸಂಗಘಟನೆ ಜತೆ ಗುರುತಿಸಿಕೊಂಡಿದ್ದು, ಕಣಿವೆಯಲ್ಲಿ ಕರಪತ್ರಗಳನ್ನು ಹಂಚುವಂತೆ ಪ್ರೋತ್ಸಾಹಿಸಿದ್ದಾರೆ ಎನ್ನಲಾಗಿದೆ.</p>.<p class="Subhead"><strong>ಶೆಲ್ ದಾಳಿ: ಮನೆಗಳು ಜಖಂ</strong></p>.<p>ಪೂಂಛ್ ಜಿಲ್ಲೆಯ ಗಡಿನಿಯಂತ್ರಣ ರೇಖೆಯಲ್ಲಿ ಮಂಗಳವಾರ ಮುಂಜಾನೆ ಭಾರಿ ಪ್ರಮಾಣದ ಶೆಲ್ ದಾಳಿ ನಡೆದಿದ್ದು, ಆರು ಮನೆಗಳು ಜಖಂಗೊಂಡು, ಐದು ಜಾನುವಾರುಗಳು ಮೃತಪಟ್ಟಿವೆ. ಗಡಿ ಠಾಣೆಗಳ ಮೇಲೂ ಪಾಕ್ ಪಡೆಗಳು ದಾಳಿ ನಡೆಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಮೊಹರಂ ಮೆರವಣಿಗೆ ತಡೆಯುವ ಸಲುವಾಗಿ ಶ್ರೀನಗರ ಸೇರಿದಂತೆ ಕಾಶ್ಮಿರದ ಹಲವು ಕಡೆಗಳಲ್ಲಿ ಮಂಗಳವಾರ ಮತ್ತೆ ನಿರ್ಬಂಧಗಳನ್ನು ಹೇರಲಾಗಿದೆ.</p>.<p>ಲಾಲ್ಚೌಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರವೇಶದ್ವಾರಗಳಲ್ಲಿ ಮುಳ್ಳಿನ ತಂತಿಗಳನ್ನು ಹಾಕಲಾಗಿದೆ. ಬೃಹತ್ ಪ್ರಮಾಣದ ಭದ್ರತಾಪಡೆಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಶ್ಮೀರದಲ್ಲಿ 1990ರಿಂದಲೂ ಮೊಹರಂ ಮೆರವಣಿಗೆಗಳ ಮೇಲೆ ನಿರ್ಬಂಧವಿದೆ.</p>.<p><strong>ಪಾಕ್ ಜತೆ ಕೇವಲ ಪಿಒಕೆ ಬಗ್ಗೆ ಚರ್ಚೆ: ಉಪರಾಷ್ಟ್ರಪತಿ</strong></p>.<p><strong>ನವದೆಹಲಿ: </strong>ಪಾಕಿಸ್ತಾದನ ಜತೆ ಮಾತುಕತೆ ನಡೆಯುವುದೇ ಆದಲ್ಲಿ, ಅದು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ಮಾತ್ರವೇ ಆಗಿರುತ್ತದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.</p>.<p>ಜಮ್ಮು ಕಾಶ್ಮೀರದಿಂದ ಬಂದಿದ್ದ ಪಂಚಾಯಿತಿ ಸದಸ್ಯರು ಹಾಗೂ ಸರಪಂಚ್ಗಳ ಜತೆ ಸಂವಾದ ನಡೆಸಿದ ಅವರು,ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡಿರುವ ಕಾರಣ, ರಾಜ್ಯದ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದರು.</p>.<p>ಕಾಯ್ದೆ ರದ್ದತಿ ಬಳಿಕ ಪಂಚಾಯಿತಿಗಳನ್ನು ಇನ್ನಷ್ಟು ಕ್ರಿಯಾತ್ಮಕವಾಗಿ ಕೆಲಸ ಮಾಡಲು ಅವಕಾಶವಿದೆ. ಕೇಂದ್ರ ಸರ್ಕಾರದಿಂದ ಸ್ಥಳೀಯಾಡಳಿತಗಳಿಗೆ ಹಣಕಾಸಿನ ಅನುದಾನ ಹಾಗೂ ವಿವಿಧ ಕಾರ್ಯಕ್ರಮಗಳು ಲಭ್ಯವಾಗಲಿವೆ ಎಂದರು.</p>.<p><strong>ಕಾಶ್ಮೀರ ಸ್ತಬ್ಧಗೊಂಡಿಲ್ಲ, ನಿಷೇಧಾಜ್ಞೆಯೂ ಇಲ್ಲ: ಜಿತೇಂದ್ರ ಸಿಂಗ್</strong></p>.<p class="bodytext">ಜಮ್ಮು ಕಾಶ್ಮೀರ ಸ್ಥಬ್ತಗೊಂಡಿದ್ದು, ನಿಷೇಧಾಜ್ಞೆ ಮುಂದುವರಿದಿದೆ ಎಂಬ ವರದಿಗಳನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಳ್ಳಿಹಾಕಿದ್ದಾರೆ.</p>.<p class="bodytext">‘ಒಂದು ವೇಳೆ ನಿಷೇಧಾಜ್ಞೆ ಜಾರಿಯಿದ್ದರೆ, ಕರ್ಫ್ಯೂ ಪಾಸ್ ಪಡೆದು ಜನರು ಹೊರಗೆ ಬರಬಹುದು. ಆದರೆ ಈವರೆಗೆ ಯಾರೂ ಪಾಸ್ಗಳನ್ನು ಕೇಳಿಲ್ಲ. ಶಾಂತಿಭಂಗ ತಡೆಯಲು ಕೆಲವೊಂದು ನಿರ್ಬಂಧ ವಿಧಿಸಲಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.</p>.<p class="bodytext"><strong>ಸರ್ಕಾರದಿಂದಲೇ ಸೇಬು ಖರೀದಿ</strong></p>.<p><strong>ನವದೆಹಲಿ: </strong>ರೈತರು ಬೆಳೆಯುವ ಸೇಬುಹಣ್ಣುಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವೇ ನೇರವಾಗಿ ಖರೀದಿಸಲಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್ಎಎಫ್ಇಡಿ) ಮೂಲಕ ಡಿಸೆಂಬರ್ 15ರೊಳಗೆ ಖರೀದಿಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಮಾರುಕಟ್ಟೆಯಲ್ಲಿ ಸೇಬು ಮಾರಾಟ ಮಾಡದಂತೆ ಭಯೋತ್ಪಾದಕರಿಂದ ಕೆಲವು ರೈತರಿಗೆ ಬೆದರಿಕೆ ಎದುರಾಗಿರುವ ಕಾರಣ ಸರ್ಕಾರವೇ ಹಣ್ಣಿನ ದಾಸ್ತಾನು ಮಾಡಲು ಮುಂದಾಗಿದೆ. ಕಳೆದ ಶುಕ್ರವಾರ ಹಣ್ಣಿನ ವ್ಯಾಪಾರಿಗಳ ಮೇಲೆ ದಾಳಿ ನಡೆದಿತ್ತು.</p>.<p>ರೈತರ ಕೃಷಿ ಉತ್ಪನ್ನಗಳಿಗೆಸಹಕಾರಿ ಮಾರುಕಟ್ಟೆ ಒದಗಿಸುವುದು ಒಕ್ಕೂಟದ ಉದ್ದೇಶವಾಗಿದೆ. ಹಣವನ್ನು ರೈತರ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಪಾವತಿ ಮಾಡಲಿದೆ.</p>.<p>ಜಮ್ಮು ಕಾಶ್ಮೀರದಲ್ಲಿ ಸೇಬು ಬೆಳೆಯುವ ಎಲ್ಲ ಜಿಲ್ಲೆಗಳು ಹಾಗೂ ಸೋಪುರ್, ಶೋಪಿಯಾನ್ ಹಾಗೂ ಶ್ರೀನಗರದ ಸಗಟು ಮಾರುಕಟ್ಟೆಗಳಿಂದ ಎ, ಬಿ ಹಾಗೂ ಸಿ ದರ್ಜೆಯ ಸೇಬು ಖರೀದಿಸಲು ಸರ್ಕಾರ ಮುಂದಾಗಿದೆ.</p>.<p>ಹಣ್ಣು ತುಂಬಿದ 750 ಲಾರಿಗಳು ಪ್ರತಿನಿತ್ಯವೂ ಕಾಶ್ಮೀರದಿಂದ ದೇಶದ ನಾನಾಕಡೆಗೆ ಸಂಚರಿಸುತ್ತವೆ.</p>.<p><strong>ಎಂಟು ಸಹಚರರ ಬಂಧನ</strong></p>.<p>ಸೋಪೊರ್ನಲ್ಲಿ ಸ್ಥಳೀಯರಿಗೆ ಬೆದರಿಕೆ ಒಡ್ಡುವ ಕರಪತ್ರಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಲಷ್ಕರ್ ಉಗ್ರ ಸಂಘಟನೆಯ ಎಂಟು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಕಾಶ್ಮೀರದ ವಿವಿಧ ಭಾಗಗಳಲ್ಲಿ ಕರಪತ್ರಗಳು ಕಂಡುಬಂದಿವೆ. ನಿಷೇಧಾಜ್ಞೆಯನ್ನು ಭಂಗಗೊಳಿಸುವಂತೆ ಜನರಿಗೆ ಕರೆ ನೀಡಲಾಗಿದೆ.</p>.<p>ಅಯಾಜ್ ಮಿರ್, ಒಮರ್ ಮಿರ್, ತೌಸಿಫ್ ನಜರ್, ಇಮ್ತಿಯಾಜ್ ನಜರ್, ಒಮರ್ ಅಕ್ಬರ್, ಜೈಜನ್ ಲತೀಫ್, ದಾನಿಷ್ ಹಬೀಬ್ ಮತ್ತು ಶೌಕತ್ ಅಹ್ಮದ್ ಮಿರ್ ಎಂಬುವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.ಕಂಪ್ಯೂಟರ್ಗಳನ್ನು ಜಪ್ತಿ ಮಾಡಲಾಗಿದೆ.</p>.<p>ಸ್ಥಳೀಯ ಉಗ್ರ ಸಾಜದ್ ಮಿರ್, ಈತನ ಸಹಚರರಾದ ಮುದಾಸ್ಸಿರ್ ಪಂಡಿತ್ ಮತ್ತು ಅಸಿಫ್ ಮಕ್ಬೂಲ್ ಭಟ್ ಅವರು ನಿಷೇಧಿ ಲಷ್ಕರ್ ಸಂಗಘಟನೆ ಜತೆ ಗುರುತಿಸಿಕೊಂಡಿದ್ದು, ಕಣಿವೆಯಲ್ಲಿ ಕರಪತ್ರಗಳನ್ನು ಹಂಚುವಂತೆ ಪ್ರೋತ್ಸಾಹಿಸಿದ್ದಾರೆ ಎನ್ನಲಾಗಿದೆ.</p>.<p class="Subhead"><strong>ಶೆಲ್ ದಾಳಿ: ಮನೆಗಳು ಜಖಂ</strong></p>.<p>ಪೂಂಛ್ ಜಿಲ್ಲೆಯ ಗಡಿನಿಯಂತ್ರಣ ರೇಖೆಯಲ್ಲಿ ಮಂಗಳವಾರ ಮುಂಜಾನೆ ಭಾರಿ ಪ್ರಮಾಣದ ಶೆಲ್ ದಾಳಿ ನಡೆದಿದ್ದು, ಆರು ಮನೆಗಳು ಜಖಂಗೊಂಡು, ಐದು ಜಾನುವಾರುಗಳು ಮೃತಪಟ್ಟಿವೆ. ಗಡಿ ಠಾಣೆಗಳ ಮೇಲೂ ಪಾಕ್ ಪಡೆಗಳು ದಾಳಿ ನಡೆಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>