ಆದರೆ, 2023–24ನೇ ಸಾಲಿನ ಬಜೆಟ್ ಮಂಡನೆಗೆ ಪೂರ್ವಾನುಮತಿ ನೀಡುವುದನ್ನು ರಾಜ್ಯಪಾಲರು ಮುಂದೂಡಿದ್ದರು. ಸರ್ಕಾರ ಜನವರಿ 21ರಂದೇ ಕರಡು ಪ್ರತಿಯನ್ನು ರಾಜಭವನಕ್ಕೆ ಕಳುಹಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು, ‘ಅಧಿವೇಶನದ ಮೊದಲ ದಿನದ ಕಾರ್ಯಸೂಚಿಯಲ್ಲಿ ನಮ್ಮ ಭಾಷಣವು ಸೇರಿದೆಯೇ’ ಎಂದು ಪ್ರಶ್ನಿಸಿದ್ದರು. ಆದರೆ, ಇದಕ್ಕೆ ಸರ್ಕಾರ ಪ್ರತಿಕ್ರಿಯೆ ನೀಡಿರಲಿಲ್ಲ.