‘ರಾಜಕಾರಣಿಗಳು ಬೇಕಾದಷ್ಟು ಸೌಲಭ್ಯಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಬ್ಯಾಂಕ್ಗಳು ಶ್ರೀಮಂತ ವ್ಯಕ್ತಿಗಳಿಗೆ ಸಾಲ ಒದಗಿಸುತ್ತಿವೆ. ಹೀಗಿರುವಾಗನಾಗರಿಕರು ಶಿಕ್ಷಣ, ಚಿಕಿತ್ಸೆ, ಔಷಧ ಹಾಗೂ ವಿದ್ಯುತ್ ಅನ್ನು ಏಕೆ ಉಚಿತವಾಗಿ ಪಡೆಯಬಾರದು. ಉಚಿತ ಕೊಡುಗೆ ಸಂಸ್ಕೃತಿ ಎಂದು ಪದೇ ಪದೇ ಉಲ್ಲೇಖಿಸುವ ಮೂಲಕ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಅವಮಾನಿಸಬೇಡಿ’ ಎಂದು ಕೇಜ್ರಿವಾಲ್ ಭಾನುವಾರ ಟ್ವೀಟ್ ಮಾಡಿದ್ದಾರೆ.