ಕುಟ್ಟನಾಡಿನ ಪ್ರವಾಹ ಪೀಡಿ ಪ್ರದೇಶಗಳಲ್ಲಿ 15 ಸಾವಿರದಷ್ಟು ಮಂದಿ ಇದ್ದಾರೆ, ಇದರಲ್ಲಿ 4 ಸಾವಿರ ಮಂದಿ ಎಡತ್ವಾ ಕಾಲೇಜಿನ ಪರಿಹಾರ ಶಿಬಿರದಲ್ಲಿದ್ದಾರೆ. ಇನ್ನು ಕೆಲವರು ಹೌಸ್ ಬೋಟ್ನಲ್ಲಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ಅಪ್ಪರ್ ಕುಟ್ಟನಾಡು ಪ್ರದೇಶದಲ್ಲಿ ಇನ್ನೂ ನೀರು ಇಳಿದಿಲ್ಲ.ನಿರಣಂ, ಕಡಪ್ರಾ, ಪೆರಿಂಗರ ಪಂಚಾಯತಿನಲ್ಲಿ ಮನೆಗಳು ನೀರಲ್ಲಿ ಮುಳುಗಿವೆ, ಇನ್ನು ಕೆಲವೇ ಕೆಲವು ಜನರನ್ನು ರಕ್ಷಿಸಲು ಬಾಕಿ ಇದೆ.ಅವರನ್ನು ಇಂದು ರಕ್ಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನ ಸರಿಮಾಡಲು ಇನ್ನೂ ಎರಡು ವಾರ ಬೇಕು.