<p><strong>ಕೋಯಿಕ್ಕೋಡ್:</strong> ‘ಗುರು ಪೂಜೆ, ಭಾರತ ಮಾತೆಯನ್ನು ವಿಮರ್ಶಿಸುವವರು ತೋರಿಕೆಗಷ್ಟೇ ಶಬರಿಮಲೆಯ ಭಕ್ತರಂತೆ ನಟಿಸುತ್ತಿದ್ದಾರೆ’ ಎಂದು ಕೇರಳ ಸರ್ಕಾರದ ವಿರುದ್ಧ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪರೋಕ್ಷ ವಾಗ್ದಾಳಿ ನಡೆಸಿದರು.</p>.<p>‘ಶಬರಿಮಲೆಯ ಈ ನಕಲಿ ಭಕ್ತರು ತಮ್ಮ ಮನಸ್ಸಿನೊಳಗಿರುವ ಪವಿತ್ರತೆ, ಆದರ್ಶ ಮತ್ತು ಭಾವನೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಬೇಕು’ ಎಂದು ನವರಾತ್ರಿ ಸಂಬಂಧಿತ ಕಾರ್ಯಕ್ರಮವೊಂದರಲ್ಲಿ ಹೇಳಿದರು.</p>.<p>‘ಅವರೆಲ್ಲರೂ ಏಕೆ ಹೀಗೆ ಮಾಡುತ್ತಿದ್ದಾರೆ. ರಾಜಕೀಯ ಅನುಕೂಲಕ್ಕಾಗಿ ಮಾತ್ರವಾ? ಭಾರತ ಮಾತೆ, ಗುರು ಪೂಜೆ ಮತ್ತು ಅಂತಹ ಎಲ್ಲ ವಿಷಯಗಳು ರಾಜಕೀಯವಾಗಿ ಯಾರಿಗೂ ಅನುಕೂಲಕರವಲ್ಲ. ಇದು ನಮ್ಮ ರಕ್ತ, ಚಿಂತನೆ ಮತ್ತು ಎಲ್ಲದರಲ್ಲೂ ಅಡಕವಾಗಿದೆ. ನಾವು ರಾಜಕೀಯ ಪ್ರೇರಿತರಲ್ಲ’ ಎಂದರು.</p>.<p>‘ಭಾರತೀಯ ಸಂಸ್ಕೃತಿ ಭಾಗವಾಗಿರುವ ಇವೆಲ್ಲವನ್ನೂ ನಿರ್ಲಕ್ಷಿಸಲಾಗುವುದಿಲ್ಲ’ ಎಂದೂ ಹೇಳಿದರು.</p>.<p>‘ಶಾಲೆಗಳಲ್ಲಿ ಗುರು ಪೂಜೆ ವೇಳೆ ವಿದ್ಯಾರ್ಥಿಗಳು ಪಾದ ತೊಳೆಯುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಹಲವು ಶಿಕ್ಷಕರು, ಪ್ರಾಂಶುಪಾಲರೇ ತಮ್ಮ ಬಳಿ ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದರು.</p>.<p>‘ಸಾಂಸ್ಕೃತಿಕವಾಗಿ ಅತ್ಯುನ್ನತ ಮಟ್ಟದಲ್ಲಿರುವ ರಾಜ್ಯದಲ್ಲಿ ಇದು ಹೇಗೆ ನಡೆಯುತ್ತಿದೆ ಎಂಬ ಆಶ್ಚರ್ಯ ನನ್ನದಾಗಿದೆ. ಕೇರಳವು ಸಾಂಸ್ಕೃತಿಕವಾಗಿ ಸಿರಿವಂತವಾಗಿದೆ. ಆದರೆ ಈ ಎಲ್ಲಾ ವಿಷಯಗಳೂ ಇಲ್ಲಿಯೇ ನಡೆಯುತ್ತಿವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಯಿಕ್ಕೋಡ್:</strong> ‘ಗುರು ಪೂಜೆ, ಭಾರತ ಮಾತೆಯನ್ನು ವಿಮರ್ಶಿಸುವವರು ತೋರಿಕೆಗಷ್ಟೇ ಶಬರಿಮಲೆಯ ಭಕ್ತರಂತೆ ನಟಿಸುತ್ತಿದ್ದಾರೆ’ ಎಂದು ಕೇರಳ ಸರ್ಕಾರದ ವಿರುದ್ಧ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪರೋಕ್ಷ ವಾಗ್ದಾಳಿ ನಡೆಸಿದರು.</p>.<p>‘ಶಬರಿಮಲೆಯ ಈ ನಕಲಿ ಭಕ್ತರು ತಮ್ಮ ಮನಸ್ಸಿನೊಳಗಿರುವ ಪವಿತ್ರತೆ, ಆದರ್ಶ ಮತ್ತು ಭಾವನೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಬೇಕು’ ಎಂದು ನವರಾತ್ರಿ ಸಂಬಂಧಿತ ಕಾರ್ಯಕ್ರಮವೊಂದರಲ್ಲಿ ಹೇಳಿದರು.</p>.<p>‘ಅವರೆಲ್ಲರೂ ಏಕೆ ಹೀಗೆ ಮಾಡುತ್ತಿದ್ದಾರೆ. ರಾಜಕೀಯ ಅನುಕೂಲಕ್ಕಾಗಿ ಮಾತ್ರವಾ? ಭಾರತ ಮಾತೆ, ಗುರು ಪೂಜೆ ಮತ್ತು ಅಂತಹ ಎಲ್ಲ ವಿಷಯಗಳು ರಾಜಕೀಯವಾಗಿ ಯಾರಿಗೂ ಅನುಕೂಲಕರವಲ್ಲ. ಇದು ನಮ್ಮ ರಕ್ತ, ಚಿಂತನೆ ಮತ್ತು ಎಲ್ಲದರಲ್ಲೂ ಅಡಕವಾಗಿದೆ. ನಾವು ರಾಜಕೀಯ ಪ್ರೇರಿತರಲ್ಲ’ ಎಂದರು.</p>.<p>‘ಭಾರತೀಯ ಸಂಸ್ಕೃತಿ ಭಾಗವಾಗಿರುವ ಇವೆಲ್ಲವನ್ನೂ ನಿರ್ಲಕ್ಷಿಸಲಾಗುವುದಿಲ್ಲ’ ಎಂದೂ ಹೇಳಿದರು.</p>.<p>‘ಶಾಲೆಗಳಲ್ಲಿ ಗುರು ಪೂಜೆ ವೇಳೆ ವಿದ್ಯಾರ್ಥಿಗಳು ಪಾದ ತೊಳೆಯುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಹಲವು ಶಿಕ್ಷಕರು, ಪ್ರಾಂಶುಪಾಲರೇ ತಮ್ಮ ಬಳಿ ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದರು.</p>.<p>‘ಸಾಂಸ್ಕೃತಿಕವಾಗಿ ಅತ್ಯುನ್ನತ ಮಟ್ಟದಲ್ಲಿರುವ ರಾಜ್ಯದಲ್ಲಿ ಇದು ಹೇಗೆ ನಡೆಯುತ್ತಿದೆ ಎಂಬ ಆಶ್ಚರ್ಯ ನನ್ನದಾಗಿದೆ. ಕೇರಳವು ಸಾಂಸ್ಕೃತಿಕವಾಗಿ ಸಿರಿವಂತವಾಗಿದೆ. ಆದರೆ ಈ ಎಲ್ಲಾ ವಿಷಯಗಳೂ ಇಲ್ಲಿಯೇ ನಡೆಯುತ್ತಿವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>