ಮಲಪ್ಪುರಂ: ಮಂಜೇರಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೇರಳದ ಮೊದಲ ಪ್ಲಾಸ್ಮಾ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯಿಂದ ಇಬ್ಬರು ಕೋವಿಡ್–19 ರೋಗಿಗಳು ಗುಣಮುಖರಾಗಿದ್ದಾರೆ.
‘25 ಸ್ವಯಂಸೇವಕರು ದಾನ ಮಾಡಿದ ಪ್ಲಾಸ್ಮಾವನ್ನು ಈವರೆಗೆ ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗಿದೆ. ಇನ್ನೂ 200 ಮಂದಿ ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ’ ಎಂದು ಮಲಪ್ಪುರಂನ ಕೋವಿಡ್–19ರ ಜಿಲ್ಲಾ ಸಂಯೋಜಕ ಡಾ. ಶೈನಾಜ್ ಬಾಬು ಮಾಹಿತಿ ನೀಡಿದರು.