ಮಗಳ ನಿಶ್ಚಿತಾರ್ಥ ರದ್ದು ಮಾಡಿ ಆ ಹಣವನ್ನು ಪರಿಹಾರ ನಿಧಿಗೆ ನೀಡಿದ ಅಪ್ಪ
ಸಿಪಿಎಂ ಮುಖವಾಣಿ ದೇಶಾಭಿಮಾನಿ ಪತ್ರಿಕೆಯ ರೆಸಿಡೆಂಟ್ ಎಡಿಟರ್ ಮನೋಜ್, ಮಗಳ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಿ ಆ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಿದ್ದಾರೆ.ನಿನ್ನೆ (ಭಾನುವಾರ) ಮನೋಜ್ ಅವರ ಮಗಳು ದೇವಿ ಅವರ ನಿಶ್ಚಿತಾರ್ಥ ನ್ಯಾಯವಾದಿ ಸುಧಾಕರನ್ ಅವರ ಜತೆ ನಡೆಯಬೇಕಾಗಿತ್ತು. ಆದರೆ ಪ್ರವಾಹದಿಂದಾಗಿ ರಾಜ್ಯದ ಜನರು ಕಷ್ಟ ಅನುಭವಿಸುವಾಗ ಹೀಗೊಂದು ಕಾರ್ಯಕ್ರಮ ಬೇಡ ಎಂದು ಕುಟುಂಬ ನಿರ್ಧರಿಸಿತ್ತು.