ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಎದುರು ಸೋಮವಾರ ಈ ವಿಚಾರ ಬಂದಾಗ, ಸರ್ಕಾರದ ಪರ ಹಿರಿಯ ವಕೀಲ ವಾಸೀಂ ಖಾದ್ರಿ ಅವರು ಕೇಂದ್ರ ಜಲ ಶಕ್ತಿ ಸಚಿವಾಲಯದಿಂದ ಸೂಚನೆ ಪಡೆಯಲು ಎರಡು ವಾರ ಬೇಕು ಎಂದರು. ಈ ವಿಷಯ ಸರ್ಕಾರದ ಪರಿಗಣನೆಯಲ್ಲಿದೆ ಎಂದು ಅವರು ತಿಳಿಸಿದರು. ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಡಿ.13ಕ್ಕೆ ಮುಂದೂಡಿತು.