‘ಸಮಾರಂಭಕ್ಕೆ ತಾನು ಬರುವುದಾಗಿ ಅಡ್ವಾಣಿ ತಿಳಿಸಿದ್ದಾರೆ. ಅಗತ್ಯವೆನಿಸಿದರೆ, ಅವರಿಗಾಗಿ ನಾವು ವಿಶೇಷ ವ್ಯವಸ್ಥೆಯನ್ನು ಮಾಡಲಿದ್ದೇವೆ‘ ಎಂದು ಅಲೋಕ್ಕುಮಾರ್ ತಿಳಿಸಿದ್ದಾರೆ.
ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಸಮಾರಂಭದಲ್ಲಿ ಭಾಗವಹಿಸುವರೇ ಇಲ್ಲವೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಅಲೋಕ್ಕುಮಾರ್, ‘ಸಮಾರಂಭಕ್ಕೆ ಬರಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ‘ ಎಂದರು.