ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಮತ್ತು ಹಿರಿಯ ವಕೀಲ ವಿವೇಕ್ ಟಂಖಾ, ’ದಿ ಕೇರಳ ಸ್ಟೋರಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿರುವುದನ್ನು ಸರ್ಕಾರ ಹಿಂಪಡೆದಿದೆ ಎಂದು ನನ್ನೊಬ್ಬ ಸ್ನೇಹಿತ ಹೇಳಿದ್ದಾನೆ. ಇದು ಸರ್ಕಾರದ ವಿವೇಕಯುತ ನಡೆಯಾಗಿದ್ದು, ಸಮಾಜದ ಹಿತದೃಷ್ಟಿಯಿಂದಲೂ ಉತ್ತಮವಾಗಿದೆ. ‘ದಿ ಕೇರಳ ಸ್ಟೋರಿ‘ ಯುವ ಜನರು ನೋಡುವಂತಹ ಸಿನಿಮಾವಲ್ಲ‘ ಎಂದು ಹೇಳಿದ್ದಾರೆ.