ಸಾವಂತ್ ಅವರು ಇನ್ನೊಂದು ಟ್ವೀಟ್ನಲ್ಲಿ, ‘ಗುಪ್ತೇಶ್ವರ್ ಪಾಂಡೆ (ಬಿಹಾರದ ಮಾಜಿ ಡಿಜಿಪಿ) ಅವರನ್ನು ಬಿಜೆಪಿಯ ಮುಂದಿನ ರಾಜಕೀಯ ಕಾರ್ಯಸೂಚಿಗೆ ಬಳಸಿಕೊಂಡು, ದುರುದ್ದೇಶಪೂರ್ವಕವಾಗಿ ಮುಂಬೈ ಪೊಲೀಸರ ಮೇಲೆ ತಪ್ಪು ಹೊರಿಸಿ, ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ‘ ಎಂದು ದೂರಿದ್ದಾರೆ.