<p><strong>ನಾಗಪುರ:</strong> ಪೂರ್ವ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ವಾರದ ಹಿಂದೆ ಆಗಸದಿಂದ ಬಿದ್ದಿದೆ ಎನ್ನಲಾದ ಅಪರಿಚಿತ ವಸ್ತುಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ತಂಡವೊಂದು ಶುಕ್ರವಾರ ಪರಿಶೀಲಿಸಿತು.</p>.<p>ಏಪ್ರಿಲ್ 2ರ ಸಂಜೆ ಉತ್ತರ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ಬೆಂಕಿಯ ಉಂಡೆಯೊಂದು ಆಗಸದಲ್ಲಿ ಹಾದು ಹೋಗಿದ್ದನ್ನು ಅನೇಕರು ಕಂಡಿದ್ದರು. ಹೀಗಿರುವಾಗಲೇ, ಚಂದ್ರಾಪುರ ಜಿಲ್ಲೆಯ ಸಿಂಧೇವಾಹಿ ತಾಲೂಕಿನಲ್ಲಿ ಲೋಹದ ವೃತ್ತಾಕಾರದ ವಸ್ತು ಮತ್ತು ಆರು ಸಿಲಿಂಡರ್ ರೀತಿಯ ವಸ್ತುಗಳು ಪತ್ತೆಯಾಗಿವೆ.</p>.<p>ಕೆಲವು ತಜ್ಞರು ಇವು ಸುಟ್ಟುಹೋದ ಬೂಸ್ಟರ್ ರಾಕೆಟ್ನ ಭಾಗಗಳಾಗಿರಬಹುದು ಎಂದು ಊಹಿಸಿದ್ದಾರೆ. ಉಪಗ್ರಹಗಳನ್ನು ಉಡಾವಣೆ ಮಾಡಲು ಬೂಸ್ಟರ್ ರಾಕೆಟ್ಗಳನ್ನು ಬಳಸಲಾಗುತ್ತದೆ.</p>.<p>ಸಂಪೂರ್ಣ ಮಾಹಿತಿಯಿಲ್ಲದೆ ವಸ್ತುಗಳ ಸ್ವರೂಪದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ನಾಗ್ಪುರದ ‘ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ’ ಅಧಿಕಾರಿಗಳು ಹೇಳಿದ್ದಾರೆ.</p>.<p>ಏಪ್ರಿಲ್ 2 ರಂದು ರಾತ್ರಿ 7.50 ರ ಸುಮಾರಿಗೆ ಲಾಡ್ಬೋರಿ ಗ್ರಾಮದ ಜಮೀನಿನಲ್ಲಿ ಕಬ್ಬಿಣದ ವೃತ್ತಾಕಾರದ ವಸ್ತು ಪತ್ತೆಯಾಗಿದೆ. ಮರುದಿನ ಬೆಳಿಗ್ಗೆ ಸಿಂಧೇವಾಹಿ ತಾಲೂಕಿನ ಪವನ್ಪರ್ ಗ್ರಾಮದಲ್ಲಿ ಸಿಲಿಂಡರ್ ರೀತಿಯ ವಸ್ತು ಸಿಕ್ಕಿದೆ. ನಂತರ ಈ ಪ್ರದೇಶದಲ್ಲಿ ಇನ್ನೂ ಐದು ಸಿಲಿಂಡರ್ಗಳು ಪತ್ತೆಯಾಗಿವೆ.</p>.<p>ಖಗೋಳಶಾಸ್ತ್ರದ ಅಧ್ಯಯನದಲ್ಲಿ ತೊಡಗಿರುವ ‘ಸ್ಕೈವಾಚ್’ ಮುಖ್ಯಸ್ಥ ಸುರೇಶ್ ಚೋಪಾನೆ ಎಂಬುವವರು ಮತ್ತು ಇಬ್ಬರು ಇಸ್ರೋ ವಿಜ್ಞಾನಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಸಿಂಧೇವಾಹಿ ಪೊಲೀಸ್ ಠಾಣೆಯಲ್ಲಿ ಇದ್ದ ವಸ್ತುಗಳನ್ನು ಪರಿಶೀಲಿಸಿದರು. ಇಸ್ರೋ ತಂಡವು ಹೆಚ್ಚಿನ ಪರೀಕ್ಷೆಗಾಗಿ ವಸ್ತುಗಳನ್ನು ಸುಪರ್ದಿಗೆ ಪಡೆಯುವುದಾಗಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ:</strong> ಪೂರ್ವ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ವಾರದ ಹಿಂದೆ ಆಗಸದಿಂದ ಬಿದ್ದಿದೆ ಎನ್ನಲಾದ ಅಪರಿಚಿತ ವಸ್ತುಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ತಂಡವೊಂದು ಶುಕ್ರವಾರ ಪರಿಶೀಲಿಸಿತು.</p>.<p>ಏಪ್ರಿಲ್ 2ರ ಸಂಜೆ ಉತ್ತರ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ಬೆಂಕಿಯ ಉಂಡೆಯೊಂದು ಆಗಸದಲ್ಲಿ ಹಾದು ಹೋಗಿದ್ದನ್ನು ಅನೇಕರು ಕಂಡಿದ್ದರು. ಹೀಗಿರುವಾಗಲೇ, ಚಂದ್ರಾಪುರ ಜಿಲ್ಲೆಯ ಸಿಂಧೇವಾಹಿ ತಾಲೂಕಿನಲ್ಲಿ ಲೋಹದ ವೃತ್ತಾಕಾರದ ವಸ್ತು ಮತ್ತು ಆರು ಸಿಲಿಂಡರ್ ರೀತಿಯ ವಸ್ತುಗಳು ಪತ್ತೆಯಾಗಿವೆ.</p>.<p>ಕೆಲವು ತಜ್ಞರು ಇವು ಸುಟ್ಟುಹೋದ ಬೂಸ್ಟರ್ ರಾಕೆಟ್ನ ಭಾಗಗಳಾಗಿರಬಹುದು ಎಂದು ಊಹಿಸಿದ್ದಾರೆ. ಉಪಗ್ರಹಗಳನ್ನು ಉಡಾವಣೆ ಮಾಡಲು ಬೂಸ್ಟರ್ ರಾಕೆಟ್ಗಳನ್ನು ಬಳಸಲಾಗುತ್ತದೆ.</p>.<p>ಸಂಪೂರ್ಣ ಮಾಹಿತಿಯಿಲ್ಲದೆ ವಸ್ತುಗಳ ಸ್ವರೂಪದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ನಾಗ್ಪುರದ ‘ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ’ ಅಧಿಕಾರಿಗಳು ಹೇಳಿದ್ದಾರೆ.</p>.<p>ಏಪ್ರಿಲ್ 2 ರಂದು ರಾತ್ರಿ 7.50 ರ ಸುಮಾರಿಗೆ ಲಾಡ್ಬೋರಿ ಗ್ರಾಮದ ಜಮೀನಿನಲ್ಲಿ ಕಬ್ಬಿಣದ ವೃತ್ತಾಕಾರದ ವಸ್ತು ಪತ್ತೆಯಾಗಿದೆ. ಮರುದಿನ ಬೆಳಿಗ್ಗೆ ಸಿಂಧೇವಾಹಿ ತಾಲೂಕಿನ ಪವನ್ಪರ್ ಗ್ರಾಮದಲ್ಲಿ ಸಿಲಿಂಡರ್ ರೀತಿಯ ವಸ್ತು ಸಿಕ್ಕಿದೆ. ನಂತರ ಈ ಪ್ರದೇಶದಲ್ಲಿ ಇನ್ನೂ ಐದು ಸಿಲಿಂಡರ್ಗಳು ಪತ್ತೆಯಾಗಿವೆ.</p>.<p>ಖಗೋಳಶಾಸ್ತ್ರದ ಅಧ್ಯಯನದಲ್ಲಿ ತೊಡಗಿರುವ ‘ಸ್ಕೈವಾಚ್’ ಮುಖ್ಯಸ್ಥ ಸುರೇಶ್ ಚೋಪಾನೆ ಎಂಬುವವರು ಮತ್ತು ಇಬ್ಬರು ಇಸ್ರೋ ವಿಜ್ಞಾನಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಸಿಂಧೇವಾಹಿ ಪೊಲೀಸ್ ಠಾಣೆಯಲ್ಲಿ ಇದ್ದ ವಸ್ತುಗಳನ್ನು ಪರಿಶೀಲಿಸಿದರು. ಇಸ್ರೋ ತಂಡವು ಹೆಚ್ಚಿನ ಪರೀಕ್ಷೆಗಾಗಿ ವಸ್ತುಗಳನ್ನು ಸುಪರ್ದಿಗೆ ಪಡೆಯುವುದಾಗಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>