<p><strong>ನವದೆಹಲಿ</strong>: ಮಹಾಕುಂಭಮೇಳಕ್ಕಾಗಿ ಪ್ರಯಾಗರಾಜ್ಗೆ ದೊಡ್ಡ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭೇಟಿ ನೀಡಲಿರುವ ನಿರೀಕ್ಷೆಯಲ್ಲಿ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ದಟ್ಟಣೆ ನಿರ್ವಹಿಸಲು ಕಟ್ಟೆಚ್ಚರ ವಹಿಸಬೇಕು ಎಂದು ರೈಲ್ವೆ ಇಲಾಖೆಯು ಸೂಚಿಸಿದೆ.<br><br> ಮಹಾಕುಂಭಮೇಳವು ನಿಗದಿಯಂತೆ ಶಿವರಾತ್ರಿ ಹಬ್ಬವಾದ ಫೆಬ್ರುವರಿ 26ರಂದು ಅಂತ್ಯವಾಗಲಿದೆ. ಬಾಕಿ ಉಳಿದಿರುವ ದಿನಗಳಲ್ಲಿ ಪ್ರಯಾಗರಾಜ್ಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರಬಹುದು ಎಂದು ಉತ್ತರ ಪ್ರದೇಶ ಸರ್ಕಾರವು ಅಂದಾಜು ಮಾಡಿದೆ.<br><br> ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಕಟ್ಟೆಚ್ಚರ ವಹಿಸಿದೆ. ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ ರಾಜ್ಯಗಳ ನಿಲ್ದಾಣಗಳು ಸೇರಿ ಪ್ರಮುಖ ನಿಲ್ದಾಣಗಳಲ್ಲಿ ದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದೆ.<br><br> ದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ನಡೆದ ಕಾಲ್ತುಳಿತದಲ್ಲಿ 18 ಜನರು ಮೃತಪಟ್ಟ ಹಿಂದೆಯೇ ಈ ನಿರ್ದೇಶನ ನೀಡಲಾಗಿದೆ. ಉತ್ತರ ಪ್ರದೇಶದ ಅಧಿಕಾರಿಗಳ ಪ್ರಕಾರ, ಈವರೆಗೆ 50ಕೋಟಿಗೂ ಅಧಿಕ ಭಕ್ತರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. </p><p>ತಪ್ಪದ ನೂಕುನುಗ್ಗಲು: ದೆಹಲಿ ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ನಂತರವೂ ಉತ್ತರ ಪ್ರದೇಶ ಮತ್ತು ಬಿಹಾರದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಇತ್ತು.</p><p>ನವದೆಹಲಿ ನಿಲ್ದಾಣದಲ್ಲಿ ಪ್ಲಾಟ್ಫಾರಂ 16ರಿಂದಲೇ ಪ್ರಯಾಗರಾಜ್ಗೆ ತೆರಳುವ ರೈಲುಗಳು ನಿರ್ಗಮಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಅಜ್ಮೇರಿ ಗೇಟ್ ಮೂಲಕ ಪ್ರವೇಶಿಸಬೇಕು. ಇತರೆ ಪ್ಲಾಟ್ಫಾರಂಗಳಿಂದ ನಿಗದಿಯಂತೆ ರೈಲು ಸಂಚಾರ ಇರಲಿದೆ ಎಂದಿದ್ದಾರೆ. </p> .ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಭೀಕರತೆ ವಿವರಿಸಿದ ಕೂಲಿಗಳು.ದೆಹಲಿ ಕಾಲ್ತುಳಿತ: ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ.<p><strong>ಪ್ರಯಾಗರಾಜ್ನಲ್ಲಿ ದಟ್ಟಣೆ; ಶಾಲೆಗಳಿಗೆ ರಜೆ ಘೋಷಣೆ</strong></p><p><strong>ಲಖನೌ</strong>: ಮಹಾಕುಂಭಮೇಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು ಪ್ರಯಾಗರಾಜ್ನಲ್ಲಿ ಸಂಚಾರ ದಟ್ಟಣೆ ಮೂಡಿದೆ. ಜಿಲ್ಲಾಡಳಿತವು ಮುಂಜಾಗ್ರತೆಯಾಗಿ ಎಲ್ಲ ಶಾಲೆಗಳಿಗೆ ರಜೆಯನ್ನು ಘೋಷಿಸಿದೆ.</p><p>ದಟ್ಟಣೆ ನಿರ್ವಹಣೆಗೆ ಯೋಧರ ನೆರವು ಪಡೆದಿದ್ದು ನಗರಕ್ಕೆ ವಾಹನಗಳ ಪ್ರವೇಶ ನಿರ್ಬಂಧಿಸಿದ್ದು ಭಕ್ತರು ಕಿಲೋ ಮೀಟರ್ಗಟ್ಟಲೆ ನಡೆಯಬೇಕಾದ ಸ್ಥಿತಿ ಇದೆ. ಅಧಿಕಾರಿಗಳ ಪ್ರಕಾರ ಮಧ್ಯಪ್ರದೇಶ ದೆಹಲಿ ಹರಿಯಾಣ ಹಾಗೂ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ವಾಹನಗಳಲ್ಲಿಯೇ ಬರುತ್ತಿದ್ದಾರೆ.</p><p>3 ಕಿಲೋಮೀಟರ್ ಕ್ರಮಿಸಲು 4 ಗಂಟೆ ಬೇಕಾಗಿದೆ ಎಂದು ಭಕ್ತರೊಬ್ಬರ ಹೇಳಿದರು. ಕಾಲ್ತುಳಿತ ತಡೆಯುವ ಕ್ರಮವಾಗಿ ಸಂಗಮ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಭಕ್ತರು ಅಯೋಧ್ಯೆ ವಾರಣಾಸಿಗೂ ಭೇಟಿ ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿಯೂ ಪಟ್ಟಣದ ಹೊರಗೆ ವಾಹನಗಳಿಗೆ ನಿರ್ಬಂಧ ವಿದಿಸಿದೆ. ಭಕ್ತರು ನಡೆದೇ ಬರಬೇಕಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಹಾಕುಂಭಮೇಳಕ್ಕಾಗಿ ಪ್ರಯಾಗರಾಜ್ಗೆ ದೊಡ್ಡ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭೇಟಿ ನೀಡಲಿರುವ ನಿರೀಕ್ಷೆಯಲ್ಲಿ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ದಟ್ಟಣೆ ನಿರ್ವಹಿಸಲು ಕಟ್ಟೆಚ್ಚರ ವಹಿಸಬೇಕು ಎಂದು ರೈಲ್ವೆ ಇಲಾಖೆಯು ಸೂಚಿಸಿದೆ.<br><br> ಮಹಾಕುಂಭಮೇಳವು ನಿಗದಿಯಂತೆ ಶಿವರಾತ್ರಿ ಹಬ್ಬವಾದ ಫೆಬ್ರುವರಿ 26ರಂದು ಅಂತ್ಯವಾಗಲಿದೆ. ಬಾಕಿ ಉಳಿದಿರುವ ದಿನಗಳಲ್ಲಿ ಪ್ರಯಾಗರಾಜ್ಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರಬಹುದು ಎಂದು ಉತ್ತರ ಪ್ರದೇಶ ಸರ್ಕಾರವು ಅಂದಾಜು ಮಾಡಿದೆ.<br><br> ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಕಟ್ಟೆಚ್ಚರ ವಹಿಸಿದೆ. ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ ರಾಜ್ಯಗಳ ನಿಲ್ದಾಣಗಳು ಸೇರಿ ಪ್ರಮುಖ ನಿಲ್ದಾಣಗಳಲ್ಲಿ ದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದೆ.<br><br> ದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ನಡೆದ ಕಾಲ್ತುಳಿತದಲ್ಲಿ 18 ಜನರು ಮೃತಪಟ್ಟ ಹಿಂದೆಯೇ ಈ ನಿರ್ದೇಶನ ನೀಡಲಾಗಿದೆ. ಉತ್ತರ ಪ್ರದೇಶದ ಅಧಿಕಾರಿಗಳ ಪ್ರಕಾರ, ಈವರೆಗೆ 50ಕೋಟಿಗೂ ಅಧಿಕ ಭಕ್ತರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. </p><p>ತಪ್ಪದ ನೂಕುನುಗ್ಗಲು: ದೆಹಲಿ ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ನಂತರವೂ ಉತ್ತರ ಪ್ರದೇಶ ಮತ್ತು ಬಿಹಾರದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಇತ್ತು.</p><p>ನವದೆಹಲಿ ನಿಲ್ದಾಣದಲ್ಲಿ ಪ್ಲಾಟ್ಫಾರಂ 16ರಿಂದಲೇ ಪ್ರಯಾಗರಾಜ್ಗೆ ತೆರಳುವ ರೈಲುಗಳು ನಿರ್ಗಮಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಅಜ್ಮೇರಿ ಗೇಟ್ ಮೂಲಕ ಪ್ರವೇಶಿಸಬೇಕು. ಇತರೆ ಪ್ಲಾಟ್ಫಾರಂಗಳಿಂದ ನಿಗದಿಯಂತೆ ರೈಲು ಸಂಚಾರ ಇರಲಿದೆ ಎಂದಿದ್ದಾರೆ. </p> .ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಭೀಕರತೆ ವಿವರಿಸಿದ ಕೂಲಿಗಳು.ದೆಹಲಿ ಕಾಲ್ತುಳಿತ: ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ.<p><strong>ಪ್ರಯಾಗರಾಜ್ನಲ್ಲಿ ದಟ್ಟಣೆ; ಶಾಲೆಗಳಿಗೆ ರಜೆ ಘೋಷಣೆ</strong></p><p><strong>ಲಖನೌ</strong>: ಮಹಾಕುಂಭಮೇಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು ಪ್ರಯಾಗರಾಜ್ನಲ್ಲಿ ಸಂಚಾರ ದಟ್ಟಣೆ ಮೂಡಿದೆ. ಜಿಲ್ಲಾಡಳಿತವು ಮುಂಜಾಗ್ರತೆಯಾಗಿ ಎಲ್ಲ ಶಾಲೆಗಳಿಗೆ ರಜೆಯನ್ನು ಘೋಷಿಸಿದೆ.</p><p>ದಟ್ಟಣೆ ನಿರ್ವಹಣೆಗೆ ಯೋಧರ ನೆರವು ಪಡೆದಿದ್ದು ನಗರಕ್ಕೆ ವಾಹನಗಳ ಪ್ರವೇಶ ನಿರ್ಬಂಧಿಸಿದ್ದು ಭಕ್ತರು ಕಿಲೋ ಮೀಟರ್ಗಟ್ಟಲೆ ನಡೆಯಬೇಕಾದ ಸ್ಥಿತಿ ಇದೆ. ಅಧಿಕಾರಿಗಳ ಪ್ರಕಾರ ಮಧ್ಯಪ್ರದೇಶ ದೆಹಲಿ ಹರಿಯಾಣ ಹಾಗೂ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ವಾಹನಗಳಲ್ಲಿಯೇ ಬರುತ್ತಿದ್ದಾರೆ.</p><p>3 ಕಿಲೋಮೀಟರ್ ಕ್ರಮಿಸಲು 4 ಗಂಟೆ ಬೇಕಾಗಿದೆ ಎಂದು ಭಕ್ತರೊಬ್ಬರ ಹೇಳಿದರು. ಕಾಲ್ತುಳಿತ ತಡೆಯುವ ಕ್ರಮವಾಗಿ ಸಂಗಮ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಭಕ್ತರು ಅಯೋಧ್ಯೆ ವಾರಣಾಸಿಗೂ ಭೇಟಿ ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿಯೂ ಪಟ್ಟಣದ ಹೊರಗೆ ವಾಹನಗಳಿಗೆ ನಿರ್ಬಂಧ ವಿದಿಸಿದೆ. ಭಕ್ತರು ನಡೆದೇ ಬರಬೇಕಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>