ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಲೋಕಸಭೆಯಲ್ಲಿ ಪ್ರಧಾನಿ ಭಾಷಣ: ಕುಂಭಮೇಳ ಕಾಲ್ತುಳಿತ ಪ್ರಸ್ತಾಪಿಸದ್ದಕ್ಕೆ ಗದ್ದಲ

Published : 18 ಮಾರ್ಚ್ 2025, 14:17 IST
Last Updated : 18 ಮಾರ್ಚ್ 2025, 14:17 IST
ಫಾಲೋ ಮಾಡಿ
Comments
ಮಹಾ ಕುಂಭಮೇಳದಲ್ಲಿ ನಮ್ಮ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಂಡದ್ದನ್ನು ಕಂಡಿದ್ದೇವೆ. ಜಗತ್ತಿನ ಅತಿದೊಡ್ಡ ಮೇಳವು ಇಡೀ ದೇಶವನ್ನು ಒಗ್ಗೂಡಿಸಿದೆ
ನರೇಂದ್ರ ಮೋದಿ, ಪ್ರಧಾನಿ
‘ನವ ಭಾರತದಲ್ಲಿ ಮಾತಿಗೆ ಅವಕಾಶವಿಲ್ಲ’
‘ಮೋದಿ ಅವರು ಹೇಳಿರುವುದನ್ನು ಬೆಂಬಲಿಸಿ ಮಾತನಾಡಲು ಬಯಸಿದ್ದೆ’ ಎಂದು ರಾಹುಲ್‌ ಗಾಂಧಿ ಅವರು ಸಂಸತ್ತಿನ ಹೊರಗೆ ಸುದ್ದಿಗಾರರಲ್ಲಿ ತಿಳಿಸಿದರು. ‘ಕುಂಭ ಮೇಳವು ನಮ್ಮ ಸಂಪ್ರದಾಯ, ಇತಿಹಾಸ ಮತ್ತು ಸಂಸ್ಕೃತಿ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಅವರು ಶ್ರದ್ಧಾಂಜಲಿ ಸಲ್ಲಿಸದ್ದಕ್ಕೆ ನಮ್ಮ ಆಕ್ಷೇಪ ಇದೆ. ನಾನು ಇನ್ನೊಂದು ವಿಷಯ ಹೇಳಲು ಬಯಸಿದ್ದೆ. ಕುಂಭಕ್ಕೆ ಹೋದ ಯುವಕರಲ್ಲಿ ಎಷ್ಟೋ ಮಂದಿ ನಿರುದ್ಯೋಗಿ ಗಳಿದ್ದು, ಅವರಿಗೆ ಉದ್ಯೋಗ ದೊರಕಿಸಿಕೊಡಲು ಪ್ರಧಾನಿ ಕ್ರಮವಹಿಸ ಬೇಕು’ ಎಂದರು. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು. ಆದರೆ ನಮಗೆ ಅನುಮತಿ ನೀಡಲಿಲ್ಲ. ಇದು ನವ ಭಾರತ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT