<p><strong>ಛತ್ರಪತಿ ಸಂಭಾಜಿನಗರ: </strong>ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿರುವ ಐತಿಹಾಸಿಕ ತಲ್ತಮ್ ಹಾಗೂ ಧರೂರ್ ಕೋಟೆಗಳ ರಕ್ಷಣೆಗೆ ಅಂದಾಜು ₹ 21 ಕೋಟಿ ನೀಡಲಾಗಿದೆ. ಆದಾಗ್ಯೂ, ನಿಯಮಿತ ನಿರ್ವಹಣೆ ಹಾಗೂ ಕಾವಲಿಗೆ ಸಿಬ್ಬಂದಿ ಕೊರತೆಯಿಂದಾಗಿ ಸಂರಕ್ಷಣೆಯ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳ ಪ್ರಕಾರ, ಛತ್ರಪತಿ ಸಂಭಾಜಿನಗರದ ಸಿಲ್ಲೋದ್ನಲ್ಲಿರುವ ತಲ್ತಮ್ ಕೋಟೆಗೆ ₹ 10 ಕೋಟಿ ನೀಡಲಾಗಿದೆ. ಅದೇ ರೀತಿ, ಬೀಡ್ ಜಿಲ್ಲೆಯಲ್ಲಿರುವ ಧರೂರ್ ಕೋಟೆಯ ಸಂರಕ್ಷಣೆಗೆ ₹ 11 ಕೋಟಿ ನೀಡಲಾಗಿದೆ.</p><p>ಈ ಹಣವನ್ನು ಕೋಟೆಯ ಗೋಡೆಗಳು, ರಚನೆಗಳನ್ನು ಮತ್ತೆ ನಿರ್ಮಿಸಲು, ಅತಿಕ್ರಮಣದಿಂದ ಹಾನಿಯಾಗಿರುವ ಭಾಗಗಳನ್ನು ದುರಸ್ತಿಗೊಳಿಸಲು ಬಳಸಲಾಗುತ್ತದೆ. ಅದರ ಹೊರತಾಗಿಯೂ, ಕೋಟೆಯ ರಕ್ಷಣೆಗೆ ಕಾವಲುಗಾರರ ಕೊರತೆ ಹಾಗೂ ವಾರ್ಷಿಕ ನಿರ್ವಹಣೆಗೆ ಬಜೆಟ್ನಲ್ಲಿ ನಿರ್ದಿಷ್ಟ ಅನುದಾನ ನಿಗದಿಯಾಗಿಲ್ಲ ಎಂದು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.</p><p>ಮರಾಠವಾಡ ಪ್ರಾಂತ್ಯದ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 200 ಸಂರಕ್ಷಿತ ಕೋಟೆ ಕೊತ್ತಲಗಳಿವೆ. ಅದರಲ್ಲಿ, 34 ಮಂದಿಯಷ್ಟೇ ಕಾಯಂ ಹಾಗೂ ಗುತ್ತಿಗೆ ಕಾವಲುಗಾರರಿದ್ದಾರೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕಿ ಜಯಾ ವಹಾನೆ ಪಿಟಿಐಗೆ ತಿಳಿಸಿದ್ದಾರೆ.</p><p>ಸರ್ಕಾರವು ಸ್ಮಾರಕಗಳ ರಕ್ಷಣೆಗೆ ಸಾಕಷ್ಟು ವ್ಯಯಿಸುತ್ತಿದೆಯಾದರೂ, ಸಿಬ್ಬಂದಿ ಕೊರತೆ ಹಿನ್ನಡೆಯಾಗಿ ಪರಿಣಮಿಸಿದೆ ಎಂದೂ ಹೇಳಿದ್ದಾರೆ.</p><p>ಇದೇ ಹಿನ್ನೆಲೆಯಲ್ಲಿ ಇಲಾಖೆಯು, ಸಿಬ್ಬಂದಿ ನೇಮಕ ಹಾಗೂ ವಾರ್ಷಿಕ ನಿರ್ವಹಣೆಯ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.</p>
<p><strong>ಛತ್ರಪತಿ ಸಂಭಾಜಿನಗರ: </strong>ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿರುವ ಐತಿಹಾಸಿಕ ತಲ್ತಮ್ ಹಾಗೂ ಧರೂರ್ ಕೋಟೆಗಳ ರಕ್ಷಣೆಗೆ ಅಂದಾಜು ₹ 21 ಕೋಟಿ ನೀಡಲಾಗಿದೆ. ಆದಾಗ್ಯೂ, ನಿಯಮಿತ ನಿರ್ವಹಣೆ ಹಾಗೂ ಕಾವಲಿಗೆ ಸಿಬ್ಬಂದಿ ಕೊರತೆಯಿಂದಾಗಿ ಸಂರಕ್ಷಣೆಯ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳ ಪ್ರಕಾರ, ಛತ್ರಪತಿ ಸಂಭಾಜಿನಗರದ ಸಿಲ್ಲೋದ್ನಲ್ಲಿರುವ ತಲ್ತಮ್ ಕೋಟೆಗೆ ₹ 10 ಕೋಟಿ ನೀಡಲಾಗಿದೆ. ಅದೇ ರೀತಿ, ಬೀಡ್ ಜಿಲ್ಲೆಯಲ್ಲಿರುವ ಧರೂರ್ ಕೋಟೆಯ ಸಂರಕ್ಷಣೆಗೆ ₹ 11 ಕೋಟಿ ನೀಡಲಾಗಿದೆ.</p><p>ಈ ಹಣವನ್ನು ಕೋಟೆಯ ಗೋಡೆಗಳು, ರಚನೆಗಳನ್ನು ಮತ್ತೆ ನಿರ್ಮಿಸಲು, ಅತಿಕ್ರಮಣದಿಂದ ಹಾನಿಯಾಗಿರುವ ಭಾಗಗಳನ್ನು ದುರಸ್ತಿಗೊಳಿಸಲು ಬಳಸಲಾಗುತ್ತದೆ. ಅದರ ಹೊರತಾಗಿಯೂ, ಕೋಟೆಯ ರಕ್ಷಣೆಗೆ ಕಾವಲುಗಾರರ ಕೊರತೆ ಹಾಗೂ ವಾರ್ಷಿಕ ನಿರ್ವಹಣೆಗೆ ಬಜೆಟ್ನಲ್ಲಿ ನಿರ್ದಿಷ್ಟ ಅನುದಾನ ನಿಗದಿಯಾಗಿಲ್ಲ ಎಂದು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.</p><p>ಮರಾಠವಾಡ ಪ್ರಾಂತ್ಯದ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 200 ಸಂರಕ್ಷಿತ ಕೋಟೆ ಕೊತ್ತಲಗಳಿವೆ. ಅದರಲ್ಲಿ, 34 ಮಂದಿಯಷ್ಟೇ ಕಾಯಂ ಹಾಗೂ ಗುತ್ತಿಗೆ ಕಾವಲುಗಾರರಿದ್ದಾರೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕಿ ಜಯಾ ವಹಾನೆ ಪಿಟಿಐಗೆ ತಿಳಿಸಿದ್ದಾರೆ.</p><p>ಸರ್ಕಾರವು ಸ್ಮಾರಕಗಳ ರಕ್ಷಣೆಗೆ ಸಾಕಷ್ಟು ವ್ಯಯಿಸುತ್ತಿದೆಯಾದರೂ, ಸಿಬ್ಬಂದಿ ಕೊರತೆ ಹಿನ್ನಡೆಯಾಗಿ ಪರಿಣಮಿಸಿದೆ ಎಂದೂ ಹೇಳಿದ್ದಾರೆ.</p><p>ಇದೇ ಹಿನ್ನೆಲೆಯಲ್ಲಿ ಇಲಾಖೆಯು, ಸಿಬ್ಬಂದಿ ನೇಮಕ ಹಾಗೂ ವಾರ್ಷಿಕ ನಿರ್ವಹಣೆಯ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.</p>