<p><strong>ಮುಂಬೈ:</strong> 2008ರಲ್ಲಿ ಮಾಲೇಗಾಂವ್ನಲ್ಲಿ ಬಾಂಬ್ ಸ್ಫೋಟಗೊಂಡ ಪ್ರಕರಣದ ವಿಚಾರಣೆ ಸುದೀರ್ಘ 17 ವರ್ಷ ನಡೆದಿದೆ. ಪ್ರಕರಣದ ವಿಚಾರಣೆಯ ವಿವಿಧ ಹಂತಗಳಲ್ಲಿ ಐವರು ನ್ಯಾಯಾಧೀಶರು ಕಲಾಪಗಳನ್ನು ನಡೆಸಿದ್ದಾರೆ. ಅದರೆ, ಒಂದು ಬಾರಿ ಮಾತ್ರ ತನಿಖಾ ಸಂಸ್ಥೆಯನ್ನು ಬದಲಾಯಿಸಲಾಗಿತ್ತು.</p>.<p>ಆರೋಪಿಗಳ ಬಂಧನ, ಆರೋಪ ನಿಗದಿ, ಆರೋಪಪಟ್ಟಿ ಸಲ್ಲಿಕೆ ಹಾಗೂ ವಿಚಾರಣೆ ಆರಂಭ ಒಂದೆಡೆಯಾದರೆ, 2008ರಿಂದ 2025ರ ನಡುವೆ ಐವರು ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದರು. ಇದು, ವಿಚಾರಣೆ ವಿಳಂಬವಾಗಲು ಕಾರಣ ಎಂದು ಪ್ರಕರಣದ ಸಂತ್ರಸ್ತರು ಹಾಗೂ ಆರೋಪಿಗಳ ಅಭಿಪ್ರಾಯವಾಗಿದೆ.</p>.<p>‘ವಿಚಾರಣೆ ತ್ವರಿತವಾಗಿಸುವಲ್ಲಿ ಪ್ರಾಸಿಕ್ಯೂಷನ್ ಹಾಗೂ ಪ್ರತಿವಾದಿಗಳ ಪರ ವಕೀಲರ ವೈಫಲ್ಯವಿದೆ’ ಎಂದು ಆರೋಪಿಗಳಲ್ಲೊಬ್ಬರಾದ ಸಮೀರ್ ಕುಲಕರ್ಣಿ ಹೇಳಿದ್ದಾರೆ. ವಿಚಾರಣೆಯನ್ನು ತ್ವರಿತಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಕುಲಕರ್ಣಿ ಅವರು ಹೈಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದ್ದರು.</p>.<p>‘ನ್ಯಾಯಾಧೀಶರನ್ನು ಪದೇ ಪದೇ ಬದಲಾಯಿಸಿದ್ದು ವಿಚಾರಣೆ ತ್ವರಿತಗೊಳ್ಳುವುದಕ್ಕೆ ಅಡ್ಡಿಯಾಗಿತ್ತು. ಬೃಹತ್ ಪ್ರಮಾಣದ ದಾಖಲೆಗಳನ್ನು ಹೊಸ ನ್ಯಾಯಾಧೀಶರು ಅವಲೋಕಿಸಿಬೇಕಿತ್ತು. ವಿಳಂಬವಾಗಲು ಇದು ಕೂಡ ಒಂದು ಕಾರಣ’ ಎಂದು ಕೆಲ ಸಂತ್ರಸ್ತರ ಪರ ವಾದಿಸಿದ್ದ ವಕೀಲ ಶಹೀದ್ ನದೀಮ್ ಹೇಳುತ್ತಾರೆ.</p>.<p>ವಿಶೇಷ ನ್ಯಾಯಾಧೀಶ ವೈ.ಡಿ.ಶಿಂದೆ ಮೊದಲು ವಿಚಾರಣೆ ಆರಂಭಿಸಿದ್ದರು. ನಂತರದ ದಿನಗಳಲ್ಲಿ ವಿಶೇಷ ನ್ಯಾಯಾಧೀಶರಾದ ಎಸ್.ಡಿ.ಟೆಕಾಲೆ, ವಿ.ಎಸ್.ಪಡಲ್ಕರ್, ನ್ಯಾಯಾಧೀಶ ಪಿ.ಆರ್.ಸಿಟ್ರೆ ವಿಚಾರಣೆ ನಡೆಸಿದರು. ಕೊನೆಗೆ, ವಿಶೇಷ ನ್ಯಾಯಾಧೀಶ ಎ.ಕೆ.ಲಾಹೋಟಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> 2008ರಲ್ಲಿ ಮಾಲೇಗಾಂವ್ನಲ್ಲಿ ಬಾಂಬ್ ಸ್ಫೋಟಗೊಂಡ ಪ್ರಕರಣದ ವಿಚಾರಣೆ ಸುದೀರ್ಘ 17 ವರ್ಷ ನಡೆದಿದೆ. ಪ್ರಕರಣದ ವಿಚಾರಣೆಯ ವಿವಿಧ ಹಂತಗಳಲ್ಲಿ ಐವರು ನ್ಯಾಯಾಧೀಶರು ಕಲಾಪಗಳನ್ನು ನಡೆಸಿದ್ದಾರೆ. ಅದರೆ, ಒಂದು ಬಾರಿ ಮಾತ್ರ ತನಿಖಾ ಸಂಸ್ಥೆಯನ್ನು ಬದಲಾಯಿಸಲಾಗಿತ್ತು.</p>.<p>ಆರೋಪಿಗಳ ಬಂಧನ, ಆರೋಪ ನಿಗದಿ, ಆರೋಪಪಟ್ಟಿ ಸಲ್ಲಿಕೆ ಹಾಗೂ ವಿಚಾರಣೆ ಆರಂಭ ಒಂದೆಡೆಯಾದರೆ, 2008ರಿಂದ 2025ರ ನಡುವೆ ಐವರು ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದರು. ಇದು, ವಿಚಾರಣೆ ವಿಳಂಬವಾಗಲು ಕಾರಣ ಎಂದು ಪ್ರಕರಣದ ಸಂತ್ರಸ್ತರು ಹಾಗೂ ಆರೋಪಿಗಳ ಅಭಿಪ್ರಾಯವಾಗಿದೆ.</p>.<p>‘ವಿಚಾರಣೆ ತ್ವರಿತವಾಗಿಸುವಲ್ಲಿ ಪ್ರಾಸಿಕ್ಯೂಷನ್ ಹಾಗೂ ಪ್ರತಿವಾದಿಗಳ ಪರ ವಕೀಲರ ವೈಫಲ್ಯವಿದೆ’ ಎಂದು ಆರೋಪಿಗಳಲ್ಲೊಬ್ಬರಾದ ಸಮೀರ್ ಕುಲಕರ್ಣಿ ಹೇಳಿದ್ದಾರೆ. ವಿಚಾರಣೆಯನ್ನು ತ್ವರಿತಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಕುಲಕರ್ಣಿ ಅವರು ಹೈಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದ್ದರು.</p>.<p>‘ನ್ಯಾಯಾಧೀಶರನ್ನು ಪದೇ ಪದೇ ಬದಲಾಯಿಸಿದ್ದು ವಿಚಾರಣೆ ತ್ವರಿತಗೊಳ್ಳುವುದಕ್ಕೆ ಅಡ್ಡಿಯಾಗಿತ್ತು. ಬೃಹತ್ ಪ್ರಮಾಣದ ದಾಖಲೆಗಳನ್ನು ಹೊಸ ನ್ಯಾಯಾಧೀಶರು ಅವಲೋಕಿಸಿಬೇಕಿತ್ತು. ವಿಳಂಬವಾಗಲು ಇದು ಕೂಡ ಒಂದು ಕಾರಣ’ ಎಂದು ಕೆಲ ಸಂತ್ರಸ್ತರ ಪರ ವಾದಿಸಿದ್ದ ವಕೀಲ ಶಹೀದ್ ನದೀಮ್ ಹೇಳುತ್ತಾರೆ.</p>.<p>ವಿಶೇಷ ನ್ಯಾಯಾಧೀಶ ವೈ.ಡಿ.ಶಿಂದೆ ಮೊದಲು ವಿಚಾರಣೆ ಆರಂಭಿಸಿದ್ದರು. ನಂತರದ ದಿನಗಳಲ್ಲಿ ವಿಶೇಷ ನ್ಯಾಯಾಧೀಶರಾದ ಎಸ್.ಡಿ.ಟೆಕಾಲೆ, ವಿ.ಎಸ್.ಪಡಲ್ಕರ್, ನ್ಯಾಯಾಧೀಶ ಪಿ.ಆರ್.ಸಿಟ್ರೆ ವಿಚಾರಣೆ ನಡೆಸಿದರು. ಕೊನೆಗೆ, ವಿಶೇಷ ನ್ಯಾಯಾಧೀಶ ಎ.ಕೆ.ಲಾಹೋಟಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>