<p><strong>ನವದೆಹಲಿ</strong>: ‘ಎಚ್.ಡಿ.ದೇವೇಗೌಡರು ಇಡೀ ಬದುಕನ್ನು ಜಾತ್ಯತೀತತೆ, ಸಮಾಜವಾದಕ್ಕಾಗಿ ಮತ್ತು ರೈತರ ಹಿತಾಸಕ್ತಿ ರಕ್ಷಿಸಲು ಕಳೆದರು. ಈ ಇಳಿ ವಯಸ್ಸಿನಲ್ಲಿ ಏಕಾಏಕಿ ಅವರಿಗೆ ಏನಾಯಿತೋ ತಿಳಿಯದು..’</p>.<p>ರಾಜ್ಯಸಭೆಯ ಅವಧಿಯನ್ನು ಪೂರೈಸುತ್ತಿರುವ 68 ಸದಸ್ಯರಿಗೆ ಗುರುವಾರ ಸದನದಲ್ಲಿ ಬೀಳ್ಕೊಡುಗೆ ಭಾಷಣ ಮಾಡಿದ ವಿರೋಧಪಕ್ಷ ನಾಯಕ, ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಈ ಮಾತು ಹೇಳಿದರು.</p>.<p>ತಮ್ಮ ಭಾಷಣದಲ್ಲಿ ಖರ್ಗೆ ಅವರು ಗೌಡರ ಜೊತೆಗಿನ ಸುದೀರ್ಘ ಅವಧಿಯ ಬಾಂಧವ್ಯವನ್ನು ಮೆಲುಕು ಹಾಕಿದರು. ಖರ್ಗೆ ಅವರ ಮಾತುಗಳು ಒಂದು ಹಂತದಲ್ಲಿ ಸದಸ್ಯರಲ್ಲಿ ನಗು ಮೂಡಿಸಿತು. </p>.<p>‘ಗೌಡರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರನ್ನು ಅತಿಯಾಗಿ ಹೊಗಳುತ್ತಿದ್ದಾರೆ. ಅಪ್ಪಿಕೊಳ್ಳುತ್ತಿದ್ದಾರೆ. ಗೌಡರಿಗೆ ಯಾರನ್ನು ಹೊಗಳುವ ಹವ್ಯಾಸವೇ ಇಲ್ಲ. ಅಂತಹವರಿಗೆ ಈ ಇಳಿವಯಸ್ಸಿನಲ್ಲಿ ಏನಾಯಿತೊ? ಅವರ ಹವ್ಯಾಸ ಬದಲಾಗಲು ಕಾರಣವಾದುದಾದರೂ ಏನು’ ಎಂದೂ ಖರ್ಗೆ ಪ್ರಶ್ನಿಸಿದರು.</p>.<p>ಈ ಮಾತಿಗೆ ಪಕ್ಷಭೇದವಿಲ್ಲದೆ ಸದಸ್ಯರು ನಕ್ಕರು. ಸದನದಲ್ಲಿದ್ದ ಪ್ರಧಾನಿ ಮೋದಿ ಅವರೂ ಈ ನಗುವಿನಲ್ಲಿ ಭಾಗಿಯಾದರು.</p>.<p>ಸದ್ಯ, ಅವಧಿಯನ್ನು ಪೂರೈಸುತ್ತಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ 10 ವರ್ಷಗಳ ಆಡಳಿತಾವಧಿಯ ಸಾಧನೆಗಳನ್ನು ಖರ್ಗೆ ಅವರು ಇದೇ ಸಂದರ್ಭದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದರು. </p>.<p>ಕೆಲ ಸದಸ್ಯರ ಆರ್ಥಿಕ ಸ್ಥಿತಿ ಕುರಿತು ಗಮನಸೆಳೆದ ಖರ್ಗೆ ಅವರು, ನಿವೃತ್ತಿಯ ಬಳಿಕ ಬದುಕು ಸಾಗಿಸಲು ಕೆಲವರಿಗೆ ಹಣದ ಸಮಸ್ಯೆ ಇರುತ್ತದೆ. ಸರ್ಕಾರ ಅಂತಹವರಿಗಾಗಿ ಏನಾದರೂ ಮಾಡಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಎಚ್.ಡಿ.ದೇವೇಗೌಡರು ಇಡೀ ಬದುಕನ್ನು ಜಾತ್ಯತೀತತೆ, ಸಮಾಜವಾದಕ್ಕಾಗಿ ಮತ್ತು ರೈತರ ಹಿತಾಸಕ್ತಿ ರಕ್ಷಿಸಲು ಕಳೆದರು. ಈ ಇಳಿ ವಯಸ್ಸಿನಲ್ಲಿ ಏಕಾಏಕಿ ಅವರಿಗೆ ಏನಾಯಿತೋ ತಿಳಿಯದು..’</p>.<p>ರಾಜ್ಯಸಭೆಯ ಅವಧಿಯನ್ನು ಪೂರೈಸುತ್ತಿರುವ 68 ಸದಸ್ಯರಿಗೆ ಗುರುವಾರ ಸದನದಲ್ಲಿ ಬೀಳ್ಕೊಡುಗೆ ಭಾಷಣ ಮಾಡಿದ ವಿರೋಧಪಕ್ಷ ನಾಯಕ, ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಈ ಮಾತು ಹೇಳಿದರು.</p>.<p>ತಮ್ಮ ಭಾಷಣದಲ್ಲಿ ಖರ್ಗೆ ಅವರು ಗೌಡರ ಜೊತೆಗಿನ ಸುದೀರ್ಘ ಅವಧಿಯ ಬಾಂಧವ್ಯವನ್ನು ಮೆಲುಕು ಹಾಕಿದರು. ಖರ್ಗೆ ಅವರ ಮಾತುಗಳು ಒಂದು ಹಂತದಲ್ಲಿ ಸದಸ್ಯರಲ್ಲಿ ನಗು ಮೂಡಿಸಿತು. </p>.<p>‘ಗೌಡರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರನ್ನು ಅತಿಯಾಗಿ ಹೊಗಳುತ್ತಿದ್ದಾರೆ. ಅಪ್ಪಿಕೊಳ್ಳುತ್ತಿದ್ದಾರೆ. ಗೌಡರಿಗೆ ಯಾರನ್ನು ಹೊಗಳುವ ಹವ್ಯಾಸವೇ ಇಲ್ಲ. ಅಂತಹವರಿಗೆ ಈ ಇಳಿವಯಸ್ಸಿನಲ್ಲಿ ಏನಾಯಿತೊ? ಅವರ ಹವ್ಯಾಸ ಬದಲಾಗಲು ಕಾರಣವಾದುದಾದರೂ ಏನು’ ಎಂದೂ ಖರ್ಗೆ ಪ್ರಶ್ನಿಸಿದರು.</p>.<p>ಈ ಮಾತಿಗೆ ಪಕ್ಷಭೇದವಿಲ್ಲದೆ ಸದಸ್ಯರು ನಕ್ಕರು. ಸದನದಲ್ಲಿದ್ದ ಪ್ರಧಾನಿ ಮೋದಿ ಅವರೂ ಈ ನಗುವಿನಲ್ಲಿ ಭಾಗಿಯಾದರು.</p>.<p>ಸದ್ಯ, ಅವಧಿಯನ್ನು ಪೂರೈಸುತ್ತಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ 10 ವರ್ಷಗಳ ಆಡಳಿತಾವಧಿಯ ಸಾಧನೆಗಳನ್ನು ಖರ್ಗೆ ಅವರು ಇದೇ ಸಂದರ್ಭದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದರು. </p>.<p>ಕೆಲ ಸದಸ್ಯರ ಆರ್ಥಿಕ ಸ್ಥಿತಿ ಕುರಿತು ಗಮನಸೆಳೆದ ಖರ್ಗೆ ಅವರು, ನಿವೃತ್ತಿಯ ಬಳಿಕ ಬದುಕು ಸಾಗಿಸಲು ಕೆಲವರಿಗೆ ಹಣದ ಸಮಸ್ಯೆ ಇರುತ್ತದೆ. ಸರ್ಕಾರ ಅಂತಹವರಿಗಾಗಿ ಏನಾದರೂ ಮಾಡಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>