<p><strong>ವಯನಾಡ್</strong>: ವಯನಾಡ್ನ, ಕೇರಳ–ತಮಿಳುನಾಡು ಗಡಿಯಲ್ಲಿ ಕಾಡಾನೆಯ ದಾಳಿಗೆ, ತಮಿಳುನಾಡು ಮೂಲದ ಬುಡಕಟ್ಟು ಸಮುದಾಯದ 45 ವರ್ಷ ವಯಸ್ಸಿನ ಮನು ಎಂಬುವವರು ಮೃತಪಟ್ಟಿದ್ದಾರೆ. </p>.<p>ವ್ಯಕ್ತಿಯ ಸಾವಿನಿಂದ ಅಕ್ರೋಶಗೊಂಡ ಸ್ಥಳೀಯರು, ‘ಕಾಡಾನೆಗಳು ಸೇರಿದಂತೆ ಈ ಭಾಗದಲ್ಲಿ ವನ್ಯಜೀವಿಗಳ ಪಿಡುಗು ಹೆಚ್ಚಾಗಿದೆ. ಇದನ್ನು ತಡೆಯಬೇಕು’ ಎಂದು ಆಗ್ರಹಿಸಿ ಮಂಗಳವಾರ ಪ್ರತಿಭಟಿಸಿದರು.</p>.<p>‘ಇಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲ. ನೀರಿಗೆ ಹತ್ತಿರದ ಜಲಮೂಲವನ್ನೇ ಆಶ್ರಯಿಸಬೇಕು. ಅಲ್ಲಿಗೆ ಅನೆಗಳು ನೀರು ಕುಡಿಯಲು ಬರುತ್ತವೆ. ಹೊರಹೋಗುವುದೇ ಕಷ್ಟ’ ಎಂದು ನಿವಾಸಿಯೊಬ್ಬರು ಅಳಲು ತೋಡಿಕೊಂಡರು.</p>.<p>ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಶವವನ್ನು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದು ಪ್ರತಿಭಟಿಸಿದರು. ವಯನಾಡ್ ವನ್ಯಜೀವಿ ಅಧಿಕಾರಿಗಳ ಕಚೇರಿ ಬಳಿ ಯುಡಿಎಫ್ ಕಾರ್ಯಕರ್ತರೂ ಪ್ರತಿಭಟಿಸಿದರು.</p>.<p>ಗಡಿ ಭಾಗದಲ್ಲಿ ಭತ್ತದ ಗದ್ದೆಯಲ್ಲಿ ಮೃತನ ಶವ ಪತ್ತೆಯಾಗಿದೆ. ಬಹುಶಃ ಸೋಮವಾರ ಆತ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದರು. ‘ಆನೆ ದಾಳಿಯಿಂದಲೇ ಆತ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯರು ದೂರಿದರು.</p>.<p><strong>ರೈತರ ಸಾವು:</strong> </p><p>ಉತ್ತರ ಪ್ರದೇಶದ ಕತರ್ನಿಯಾಘಾಟ್ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 75 ವರ್ಷದ ರೈತರೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಯನಾಡ್</strong>: ವಯನಾಡ್ನ, ಕೇರಳ–ತಮಿಳುನಾಡು ಗಡಿಯಲ್ಲಿ ಕಾಡಾನೆಯ ದಾಳಿಗೆ, ತಮಿಳುನಾಡು ಮೂಲದ ಬುಡಕಟ್ಟು ಸಮುದಾಯದ 45 ವರ್ಷ ವಯಸ್ಸಿನ ಮನು ಎಂಬುವವರು ಮೃತಪಟ್ಟಿದ್ದಾರೆ. </p>.<p>ವ್ಯಕ್ತಿಯ ಸಾವಿನಿಂದ ಅಕ್ರೋಶಗೊಂಡ ಸ್ಥಳೀಯರು, ‘ಕಾಡಾನೆಗಳು ಸೇರಿದಂತೆ ಈ ಭಾಗದಲ್ಲಿ ವನ್ಯಜೀವಿಗಳ ಪಿಡುಗು ಹೆಚ್ಚಾಗಿದೆ. ಇದನ್ನು ತಡೆಯಬೇಕು’ ಎಂದು ಆಗ್ರಹಿಸಿ ಮಂಗಳವಾರ ಪ್ರತಿಭಟಿಸಿದರು.</p>.<p>‘ಇಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲ. ನೀರಿಗೆ ಹತ್ತಿರದ ಜಲಮೂಲವನ್ನೇ ಆಶ್ರಯಿಸಬೇಕು. ಅಲ್ಲಿಗೆ ಅನೆಗಳು ನೀರು ಕುಡಿಯಲು ಬರುತ್ತವೆ. ಹೊರಹೋಗುವುದೇ ಕಷ್ಟ’ ಎಂದು ನಿವಾಸಿಯೊಬ್ಬರು ಅಳಲು ತೋಡಿಕೊಂಡರು.</p>.<p>ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಶವವನ್ನು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದು ಪ್ರತಿಭಟಿಸಿದರು. ವಯನಾಡ್ ವನ್ಯಜೀವಿ ಅಧಿಕಾರಿಗಳ ಕಚೇರಿ ಬಳಿ ಯುಡಿಎಫ್ ಕಾರ್ಯಕರ್ತರೂ ಪ್ರತಿಭಟಿಸಿದರು.</p>.<p>ಗಡಿ ಭಾಗದಲ್ಲಿ ಭತ್ತದ ಗದ್ದೆಯಲ್ಲಿ ಮೃತನ ಶವ ಪತ್ತೆಯಾಗಿದೆ. ಬಹುಶಃ ಸೋಮವಾರ ಆತ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದರು. ‘ಆನೆ ದಾಳಿಯಿಂದಲೇ ಆತ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯರು ದೂರಿದರು.</p>.<p><strong>ರೈತರ ಸಾವು:</strong> </p><p>ಉತ್ತರ ಪ್ರದೇಶದ ಕತರ್ನಿಯಾಘಾಟ್ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 75 ವರ್ಷದ ರೈತರೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>