ಈ ಉಗ್ರನ ನಾಯಕ ಮತ್ತು ಕೆಸಿಪಿ–ಪಿಡಬ್ಲ್ಯುಜಿ ಸಂಘಟನೆಯ ಸ್ವಘೋಷಿತ ಮುಖ್ಯಸ್ಥ ಒಯಿನಮ್ ಇಬೊಚೌಬ ಸಿಂಗ್ ಅಲಿಯಾಸ್ ಖೋಯಿರಂಗ್ಬಾ ಎಂಬಾತನನ್ನು ಇದೇ ಆಗಸ್ಟ್ 28ರಂದು ದಕ್ಷಿಣ ದೆಹಲಿಯ ಕೋಟ್ಲಾ ಮುಬಾರಕ್ಪುರದಲ್ಲಿ ಬಂಧಿಸಲಾಗಿತ್ತು. ಖೋಯಿರಂಗ್ಬಾ ನಿರ್ದೇಶನದಂತೆಯೇ ಪೈಖೊಂಬಾ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ. ಇವರು ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮತ್ತು ಕೆಲವು ಸಚಿವರಿಗೂ ಬೆದರಿಕೆ ಹಾಕಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.