<p><strong>ಇಂಫಾಲ್</strong>: ಅಂತರರಾಜ್ಯ ಗಡಿಯಾದ ಜಿರೀಬಾಮ್– ಕಛಾರ್ನಲ್ಲಿಯ ಭದ್ರತಾ ಸಮಸ್ಯೆ ಕುರಿತು ಚರ್ಚೆ ನಡೆಸುವ ಸಲುವಾಗಿ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಗುವಾಹಟಿಯಲ್ಲಿ ಭೇಟಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.</p>.<p>ಜೂನ್ ಮೊದಲ ವಾರದಲ್ಲಿ ಮಣಿಪುರದ ಜಿರಿಬಮ್ನಲ್ಲಿ ಹಿಂಸಾಚಾರ ನಡೆದಿತ್ತು. ಆ ವೇಳೆ ಹಲವರು ಪಕ್ಕದ ರಾಜ್ಯ ಅಸ್ಸಾಂನ ಕಾಚರ್ನಲ್ಲಿ ಆಶ್ರಯ ಪಡೆದರು. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸುವ ಸಲುವಾಗಿ ಬಿರೇನ್ ಸಿಂಗ್ ಮತ್ತು ತಮ್ಮ ಸಂಪುಟ ಸಚಿವ ಎಲ್. ಸುಸಿಂದ್ರೊ ಸಿಂಗ್ ಜೊತೆ ಶನಿವಾರ ರಾತ್ರಿ ಗುವಾಹಟಿಗೆ ತೆರಳಿದರು. ಅವರು ಭಾನುವಾರ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ ಎನ್ನಲಾಗಿದೆ.</p>.<p>ಜಿರೀಬಾಮ್ನಿಂದ ಆಶ್ರಯ ಅರಸಿ ಬಂದವರಿಗೆ ಅಗತ್ಯ ಮಾನವೀಯ ನೆರವು ಒದಗಿಸುವಂತೆ ಹಿಮಂತ ಅವರು ಶನಿವಾರವಷ್ಟೇ ಅಧಿಕಾರಿಗಳಿಗೆ ಸೂಚಿಸಿದ್ದರು. ಅಸ್ಸಾಂ ಮತ್ತು ಮಣಿಪುರ ಗಡಿಯಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.</p>.<p>ಮಣಿಪುರದಲ್ಲಿ ಮೈತೇಯಿ ಸಮುದಾಯ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವೆ ಕಳೆದ ವರ್ಷ ಮೇ ತಿಂಗಳಿಂದಲೂ ಘರ್ಷಣೆ ನಡೆಯುತ್ತಿದೆ. ಆದರೆ ಈ ಸಂಘರ್ಷ ಜೂನ್ವರೆಗೆ ಜಿರಿಬಾಮ್ಗೆ ತಲುಪಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಫಾಲ್</strong>: ಅಂತರರಾಜ್ಯ ಗಡಿಯಾದ ಜಿರೀಬಾಮ್– ಕಛಾರ್ನಲ್ಲಿಯ ಭದ್ರತಾ ಸಮಸ್ಯೆ ಕುರಿತು ಚರ್ಚೆ ನಡೆಸುವ ಸಲುವಾಗಿ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಗುವಾಹಟಿಯಲ್ಲಿ ಭೇಟಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.</p>.<p>ಜೂನ್ ಮೊದಲ ವಾರದಲ್ಲಿ ಮಣಿಪುರದ ಜಿರಿಬಮ್ನಲ್ಲಿ ಹಿಂಸಾಚಾರ ನಡೆದಿತ್ತು. ಆ ವೇಳೆ ಹಲವರು ಪಕ್ಕದ ರಾಜ್ಯ ಅಸ್ಸಾಂನ ಕಾಚರ್ನಲ್ಲಿ ಆಶ್ರಯ ಪಡೆದರು. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸುವ ಸಲುವಾಗಿ ಬಿರೇನ್ ಸಿಂಗ್ ಮತ್ತು ತಮ್ಮ ಸಂಪುಟ ಸಚಿವ ಎಲ್. ಸುಸಿಂದ್ರೊ ಸಿಂಗ್ ಜೊತೆ ಶನಿವಾರ ರಾತ್ರಿ ಗುವಾಹಟಿಗೆ ತೆರಳಿದರು. ಅವರು ಭಾನುವಾರ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ ಎನ್ನಲಾಗಿದೆ.</p>.<p>ಜಿರೀಬಾಮ್ನಿಂದ ಆಶ್ರಯ ಅರಸಿ ಬಂದವರಿಗೆ ಅಗತ್ಯ ಮಾನವೀಯ ನೆರವು ಒದಗಿಸುವಂತೆ ಹಿಮಂತ ಅವರು ಶನಿವಾರವಷ್ಟೇ ಅಧಿಕಾರಿಗಳಿಗೆ ಸೂಚಿಸಿದ್ದರು. ಅಸ್ಸಾಂ ಮತ್ತು ಮಣಿಪುರ ಗಡಿಯಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.</p>.<p>ಮಣಿಪುರದಲ್ಲಿ ಮೈತೇಯಿ ಸಮುದಾಯ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವೆ ಕಳೆದ ವರ್ಷ ಮೇ ತಿಂಗಳಿಂದಲೂ ಘರ್ಷಣೆ ನಡೆಯುತ್ತಿದೆ. ಆದರೆ ಈ ಸಂಘರ್ಷ ಜೂನ್ವರೆಗೆ ಜಿರಿಬಾಮ್ಗೆ ತಲುಪಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>