<p><strong>ಚುರಾಚಾಂದ್ಪುರ:</strong> ಜಿರೀಬಾಮ್ ಜಿಲ್ಲೆಯ ಬೊರುಬೆಕ್ರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಹತರಾದ ಕುಕಿ–ಜೊ ಬುಡಕಟ್ಟು ಸಮುದಾಯದ 10 ಮಂದಿ ಸೇರಿದಂತೆ ಒಟ್ಟು 12 ಜನರ ಅಂತ್ಯಕ್ರಿಯೆ ಡಿಸೆಂಬರ್ 5 ರಂದು ಮಣಿಪುರದ ಚುರಾಚಂದ್ಪುರ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಸಮುದಾಯದ ಪ್ರಮುಖ ಸಂಘಟನೆಯೊಂದು ತಿಳಿಸಿದೆ.</p>.<p>ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್) ಶನಿವಾರ ತುರ್ತು ಸಭೆ ನಡೆಸಿದ್ದು, ಈ ಕುರಿತು ಘೋಷಣೆ ಮಾಡಿದೆ.</p>.<p>ಕುಕಿ–ಜೊ ಬುಡಕಟ್ಟು ಸಮುದಾಯ ಯುವಕರ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವವರೆಗೆ ಅವರ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಐಟಿಎಲ್ಎಫ್ ಈ ಹಿಂದೆ ಹೇಳಿತ್ತು.</p> <p>ಮರಣೋತ್ತರ ಪರೀಕ್ಷೆಯ ವರದಿಗಳನ್ನು ವಿಧಿವಿಜ್ಞಾನ ಮತ್ತು ಕಾನೂನು ತಜ್ಞರು ಪರಿಶೀಲಿಸಿದ್ದಾರೆ. ತಜ್ಞರ ಪ್ರಕಾರ , ಮರಣೋತ್ತರ ಪರೀಕ್ಷೆಯ ವರದಿಗಳು ತೃಪ್ತಿಕರವಾಗಿವೆ ಎಂದು ಐಟಿಎಲ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ, ಮೃತ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟ ಮುಂದುವರಿಸುವುದಾಗಿ ಅದು ಹೇಳಿದೆ.</p>.<p>ಹುತಾತ್ಮರಾದ 12 ಜನರನ್ನು ಡಿಸೆಂಬರ್ 5ರಂದು ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು. ಟುಯಿಬುಂಗ್ನ ಮೈದಾನದಲ್ಲಿ ಸಂತಾಪ ಸೂಚನೆ ಕಾರ್ಯಕ್ರಮ ನಡೆಯಲಿದೆ. ಆ ದಿನ ಬೃಹತ್ ಮೌನ ಮೆರವಣಿಗೆಯನ್ನು ಆಯೋಜಿಸಲಾಗುವುದು ಎಂದು ಐಟಿಎಲ್ಎಫ್ ಹೇಳಿದೆ.</p>.<p>ಮೃತಪಟ್ಟ 12 ಜನರಲ್ಲಿ 10 ಮಂದಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಉಳಿದ ಇಬ್ಬರು ಯುವಕರು ತಮ್ಮ ಕುಟುಂಬದವರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಮೈತೇಯಿ ಉಗ್ರಗಾಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಐಟಿಎಲ್ಎಫ್ ಕಾರ್ಯದರ್ಶಿ ಮುವಾನ್ ಟಾಂಬಿಂಗ್ ಹೇಳಿದ್ದಾರೆ.</p>.<p>ಹತರಾದವರು ಶಂಕಿತ ಉಗ್ರರು ಎಂದು ಮಣಿಪುರ ಸರ್ಕಾರ ಪ್ರತಿಪಾದಿಸಿದೆ. ಆದರೆ ಐಟಿಎಲ್ಎಫ್ ಅವರನ್ನು ಗ್ರಾಮ ಸ್ವಯಂರಕ್ಷಕರು ಎಂದು ಹೇಳಿಕೊಂಡಿದೆ.</p>.<p> ನವೆಂಬರ್ 11ರಂದು ಜಿರೀಬಾಮ್ ಜಿಲ್ಲೆಯ ಬೊರುಬೆಕ್ರಾ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿತ್ತು.</p> .ಮಣಿಪುರದಲ್ಲಿ ಎನ್ಕೌಂಟರ್: 11 ಶಂಕಿತ ಉಗ್ರರ ಹತ್ಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚುರಾಚಾಂದ್ಪುರ:</strong> ಜಿರೀಬಾಮ್ ಜಿಲ್ಲೆಯ ಬೊರುಬೆಕ್ರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಹತರಾದ ಕುಕಿ–ಜೊ ಬುಡಕಟ್ಟು ಸಮುದಾಯದ 10 ಮಂದಿ ಸೇರಿದಂತೆ ಒಟ್ಟು 12 ಜನರ ಅಂತ್ಯಕ್ರಿಯೆ ಡಿಸೆಂಬರ್ 5 ರಂದು ಮಣಿಪುರದ ಚುರಾಚಂದ್ಪುರ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಸಮುದಾಯದ ಪ್ರಮುಖ ಸಂಘಟನೆಯೊಂದು ತಿಳಿಸಿದೆ.</p>.<p>ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್) ಶನಿವಾರ ತುರ್ತು ಸಭೆ ನಡೆಸಿದ್ದು, ಈ ಕುರಿತು ಘೋಷಣೆ ಮಾಡಿದೆ.</p>.<p>ಕುಕಿ–ಜೊ ಬುಡಕಟ್ಟು ಸಮುದಾಯ ಯುವಕರ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವವರೆಗೆ ಅವರ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಐಟಿಎಲ್ಎಫ್ ಈ ಹಿಂದೆ ಹೇಳಿತ್ತು.</p> <p>ಮರಣೋತ್ತರ ಪರೀಕ್ಷೆಯ ವರದಿಗಳನ್ನು ವಿಧಿವಿಜ್ಞಾನ ಮತ್ತು ಕಾನೂನು ತಜ್ಞರು ಪರಿಶೀಲಿಸಿದ್ದಾರೆ. ತಜ್ಞರ ಪ್ರಕಾರ , ಮರಣೋತ್ತರ ಪರೀಕ್ಷೆಯ ವರದಿಗಳು ತೃಪ್ತಿಕರವಾಗಿವೆ ಎಂದು ಐಟಿಎಲ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ, ಮೃತ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟ ಮುಂದುವರಿಸುವುದಾಗಿ ಅದು ಹೇಳಿದೆ.</p>.<p>ಹುತಾತ್ಮರಾದ 12 ಜನರನ್ನು ಡಿಸೆಂಬರ್ 5ರಂದು ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು. ಟುಯಿಬುಂಗ್ನ ಮೈದಾನದಲ್ಲಿ ಸಂತಾಪ ಸೂಚನೆ ಕಾರ್ಯಕ್ರಮ ನಡೆಯಲಿದೆ. ಆ ದಿನ ಬೃಹತ್ ಮೌನ ಮೆರವಣಿಗೆಯನ್ನು ಆಯೋಜಿಸಲಾಗುವುದು ಎಂದು ಐಟಿಎಲ್ಎಫ್ ಹೇಳಿದೆ.</p>.<p>ಮೃತಪಟ್ಟ 12 ಜನರಲ್ಲಿ 10 ಮಂದಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಉಳಿದ ಇಬ್ಬರು ಯುವಕರು ತಮ್ಮ ಕುಟುಂಬದವರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಮೈತೇಯಿ ಉಗ್ರಗಾಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಐಟಿಎಲ್ಎಫ್ ಕಾರ್ಯದರ್ಶಿ ಮುವಾನ್ ಟಾಂಬಿಂಗ್ ಹೇಳಿದ್ದಾರೆ.</p>.<p>ಹತರಾದವರು ಶಂಕಿತ ಉಗ್ರರು ಎಂದು ಮಣಿಪುರ ಸರ್ಕಾರ ಪ್ರತಿಪಾದಿಸಿದೆ. ಆದರೆ ಐಟಿಎಲ್ಎಫ್ ಅವರನ್ನು ಗ್ರಾಮ ಸ್ವಯಂರಕ್ಷಕರು ಎಂದು ಹೇಳಿಕೊಂಡಿದೆ.</p>.<p> ನವೆಂಬರ್ 11ರಂದು ಜಿರೀಬಾಮ್ ಜಿಲ್ಲೆಯ ಬೊರುಬೆಕ್ರಾ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿತ್ತು.</p> .ಮಣಿಪುರದಲ್ಲಿ ಎನ್ಕೌಂಟರ್: 11 ಶಂಕಿತ ಉಗ್ರರ ಹತ್ಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>