<p><strong>ಇಂಫಾಲ್</strong>: ಮೈತೇಯಿ ಸಮುದಾಯದ ವ್ಯಕ್ತಿಯನ್ನು ಶಂಕಿತ ಕುಕಿ ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದು, ಮಣಿಪುರದಲ್ಲಿ ಹಿಂಸಾಚಾರ ಗುರುವಾರ ಭುಗಿಲೆದ್ದಿದೆ.</p>.<p>ಮಯಾಂಗ್ಲಂಬಮ್ ರಿಷಿಕಾಂತ ಸಿಂಗ್ ಹತ್ಯೆಯಾದ ವ್ಯಕ್ತಿ.</p>.<p>‘ಚುರಾಚಾಂದಪುರ ಜಿಲ್ಲೆಯ ಟುಯಿಬಾಂಗ್ ಪ್ರದೇಶದಲ್ಲಿನ ಮನೆಯಿಂದ ಬುಧವಾರ ಸಂಜೆ ರಿಷಿಕಾಂತ ದಂಪತಿಯನ್ನು ಅಪಹರಿಸಿದ ಬಂಡುಕೋರರು ನಾಟ್ಜಾಂಗ್ ಕಡೆ ಕರೆದೊಯ್ದರು. ಅಲ್ಲಿ ಸಿಂಗ್ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಂತರ ಆತನ ಪತ್ನಿಯನ್ನು ಬಿಡುಗಡೆ ಮಾಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಶಸ್ತ್ರಸಜ್ಜಿತರಾದ ಮೂವರು ಬಂಡುಕೋರರ ಬಳಿ ರಿಷಿಕಾಂತ ಕೈಮುಗಿದುಕೊಂಡು ಜೀವ ಭಿಕ್ಷೆ ಬೇಡುವ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಿಗೆ ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚಿದೆ.</p>.<p>ರಿಷಿ ಹತ್ಯೆ ಖಂಡಿಸಿ ಕಾಕ್ಚಿಂಗ್ ಜಿಲ್ಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಕಾಕ್ಚಿಂಗ್, ಖುನೌ, ಲಮ್ಖೈ ಪ್ರದೇಶದಲ್ಲಿನ ಜನರು ರಸ್ತೆಗಳಲ್ಲಿ ಟೈರ್ಗಳನ್ನು ಸುಟ್ಟು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಇಂಫಾಲ್ ಪೂರ್ವ ಜಿಲ್ಲೆಯ ವಾಂಗ್ಖೆಯದ ಕೆಲ ಭಾಗದಲ್ಲೂ ಪ್ರತಿಭಟನೆ ನಡೆದವು.</p>.<p>‘ನೇಪಾಳದಿಂದ ಮರಳಿದ್ದ ರಿಷಿಕಾಂತನು ಚುರಾಚಾಂದಪುರ ಜಿಲ್ಲೆಯಲ್ಲಿರುವ ತನ್ನ ಪತ್ನಿ ಜೊತೆ ಉಳಿದಿದ್ದ. ದಂಪತಿಯನ್ನು ಅಪಹರಿಸಿದ್ದ ಮೂವರು ಉಗ್ರರು ಮಗನನ್ನು ಕೊಂದ ಬಳಿಕ ಚಲಿಸುವ ವಾಹನದಿಂದ ಸೊಸೆಯನ್ನು ಕೆಳಗೆ ತಳ್ಳಿದ್ದಾರೆ’ ಎಂದು ಮೃತರ ತಂದೆ ಮಯಾಂಗ್ಲಂಬಮ್ ಟೋಂಬಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<p>ಅಪಹರಣಕಾರರು ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿಯ (ಯುಎನ್ಕೆಎ) ಸದಸ್ಯರಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಶೋಧ ನಡೆದಿದೆ. </p>.<p>ಕುಕಿ– ಜೋ ಬಂಡುಕೋರರ ಹಲವು ಸಂಘಟನೆಗಳ ಜೊತೆ ಕೇಂದ್ರ ಸರ್ಕಾರ, ಮಣಿಪುರ ಸರ್ಕಾರ ಒಪ್ಪಂದ ಮಾಡಿಕೊಂಡಿವೆ. ಆದರೆ, ಯುಎನ್ಕೆಎ ಸಂಘಟನೆಯು ಕಾರ್ಯಾಚರಣೆಗಳ ಅಮಾನತು (ಎಸ್ಒಒ) ಒಪ್ಪಂದಕ್ಕೆ ಸಹಿ ಹಾಕಿಲ್ಲ.</p>.<p>2023ರ ಮೇ ತಿಂಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಕುಕಿಗಳು ಮತ್ತು ಮೈತೇಯಿಗಳು ಪರಸ್ಪರರ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ.</p>.<p>ಹತ್ಯೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ಅಧಿಕಾರಿಮಯೂಮ್ ಶಾರದಾ ದೇವಿ ಅವರು ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದು ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಫಾಲ್</strong>: ಮೈತೇಯಿ ಸಮುದಾಯದ ವ್ಯಕ್ತಿಯನ್ನು ಶಂಕಿತ ಕುಕಿ ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದು, ಮಣಿಪುರದಲ್ಲಿ ಹಿಂಸಾಚಾರ ಗುರುವಾರ ಭುಗಿಲೆದ್ದಿದೆ.</p>.<p>ಮಯಾಂಗ್ಲಂಬಮ್ ರಿಷಿಕಾಂತ ಸಿಂಗ್ ಹತ್ಯೆಯಾದ ವ್ಯಕ್ತಿ.</p>.<p>‘ಚುರಾಚಾಂದಪುರ ಜಿಲ್ಲೆಯ ಟುಯಿಬಾಂಗ್ ಪ್ರದೇಶದಲ್ಲಿನ ಮನೆಯಿಂದ ಬುಧವಾರ ಸಂಜೆ ರಿಷಿಕಾಂತ ದಂಪತಿಯನ್ನು ಅಪಹರಿಸಿದ ಬಂಡುಕೋರರು ನಾಟ್ಜಾಂಗ್ ಕಡೆ ಕರೆದೊಯ್ದರು. ಅಲ್ಲಿ ಸಿಂಗ್ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಂತರ ಆತನ ಪತ್ನಿಯನ್ನು ಬಿಡುಗಡೆ ಮಾಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಶಸ್ತ್ರಸಜ್ಜಿತರಾದ ಮೂವರು ಬಂಡುಕೋರರ ಬಳಿ ರಿಷಿಕಾಂತ ಕೈಮುಗಿದುಕೊಂಡು ಜೀವ ಭಿಕ್ಷೆ ಬೇಡುವ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಿಗೆ ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚಿದೆ.</p>.<p>ರಿಷಿ ಹತ್ಯೆ ಖಂಡಿಸಿ ಕಾಕ್ಚಿಂಗ್ ಜಿಲ್ಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಕಾಕ್ಚಿಂಗ್, ಖುನೌ, ಲಮ್ಖೈ ಪ್ರದೇಶದಲ್ಲಿನ ಜನರು ರಸ್ತೆಗಳಲ್ಲಿ ಟೈರ್ಗಳನ್ನು ಸುಟ್ಟು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಇಂಫಾಲ್ ಪೂರ್ವ ಜಿಲ್ಲೆಯ ವಾಂಗ್ಖೆಯದ ಕೆಲ ಭಾಗದಲ್ಲೂ ಪ್ರತಿಭಟನೆ ನಡೆದವು.</p>.<p>‘ನೇಪಾಳದಿಂದ ಮರಳಿದ್ದ ರಿಷಿಕಾಂತನು ಚುರಾಚಾಂದಪುರ ಜಿಲ್ಲೆಯಲ್ಲಿರುವ ತನ್ನ ಪತ್ನಿ ಜೊತೆ ಉಳಿದಿದ್ದ. ದಂಪತಿಯನ್ನು ಅಪಹರಿಸಿದ್ದ ಮೂವರು ಉಗ್ರರು ಮಗನನ್ನು ಕೊಂದ ಬಳಿಕ ಚಲಿಸುವ ವಾಹನದಿಂದ ಸೊಸೆಯನ್ನು ಕೆಳಗೆ ತಳ್ಳಿದ್ದಾರೆ’ ಎಂದು ಮೃತರ ತಂದೆ ಮಯಾಂಗ್ಲಂಬಮ್ ಟೋಂಬಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<p>ಅಪಹರಣಕಾರರು ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿಯ (ಯುಎನ್ಕೆಎ) ಸದಸ್ಯರಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಶೋಧ ನಡೆದಿದೆ. </p>.<p>ಕುಕಿ– ಜೋ ಬಂಡುಕೋರರ ಹಲವು ಸಂಘಟನೆಗಳ ಜೊತೆ ಕೇಂದ್ರ ಸರ್ಕಾರ, ಮಣಿಪುರ ಸರ್ಕಾರ ಒಪ್ಪಂದ ಮಾಡಿಕೊಂಡಿವೆ. ಆದರೆ, ಯುಎನ್ಕೆಎ ಸಂಘಟನೆಯು ಕಾರ್ಯಾಚರಣೆಗಳ ಅಮಾನತು (ಎಸ್ಒಒ) ಒಪ್ಪಂದಕ್ಕೆ ಸಹಿ ಹಾಕಿಲ್ಲ.</p>.<p>2023ರ ಮೇ ತಿಂಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಕುಕಿಗಳು ಮತ್ತು ಮೈತೇಯಿಗಳು ಪರಸ್ಪರರ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ.</p>.<p>ಹತ್ಯೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ಅಧಿಕಾರಿಮಯೂಮ್ ಶಾರದಾ ದೇವಿ ಅವರು ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದು ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>