<p>ಗುವಾಹಟಿ: ಮಣಿಪುರದಿಂದ ದೇಶದ ರಾಜಧಾನಿವರೆಗೆ ವಿಸ್ತರಿಸಿರುವ ಚಿನ್–ಕುಕಿ ಸಮುದಾಯಕ್ಕೆ ಸೇರಿದ ಮಾದಕ ವಸ್ತುಗಳ ಕಳ್ಳಸಾಗಣೆದಾರರ ವಿರುದ್ಧ ಹೋರಾಟ ನಡೆಸಲು ಮೈತೇಯಿ ಸಂಘಟನೆಗಳು ನಿರ್ಧರಿಸಿವೆ.</p><p>ಶನಿವಾರ ಮಣಿಪುರದಲ್ಲಿ ಈ ಸಮುದಾಯದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆದಿತ್ತು. ಈ ಹೋರಾಟವನ್ನು ದೆಹಲಿಗೆ ವಿಸ್ತರಿಸಲು ಮಣಿಪುರ ಏಕತೆ ಸಂಯೋಜನಾ ಸಮಿತಿ (ಸಿಒಸಿಒಎಂಐ) ಹಾಗೂ ಮಣಿಪುರ–ದೆಹಲಿ ಸಂಯೋಜನಾ ಸಮಿತಿ ತೀರ್ಮಾನಿಸಿವೆ. ಹಾಗಾಗಿ, ಆಗಸ್ಟ್ 6ರಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಒಂದು ವಾರದ ಕಾಲ ಧರಣಿ ನಡೆಯಲಿದೆ.</p><p>ಕಣಿವೆ ರಾಜ್ಯದಲ್ಲಿ ಬೇರೂರಿರುವ ಈ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ದೂರಿರುವ ಸಮಿತಿಗಳು, ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಕಲ್ಪಿಸಬಾರದೆಂದು ಆಗ್ರಹಿಸಲಾಗುವುದು ಎಂದು ತಿಳಿಸಿವೆ.</p><p>ಕುಕಿ ಬಂಡುಕೋರರ ವಿರುದ್ಧದ ಕಾರ್ಯಾಚರಣೆಗೆ ರೂಪಿಸಿದ್ದ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿದೆ. ಭಾರತ–ಮ್ಯಾನ್ಮರ್ ಗಡಿ ಭಾಗದ ಭದ್ರತೆಗೆ ಅಸ್ಸಾಂ ರೈಫಲ್ಸ್ ಬದಲಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಪ್ರತ್ಯೇಕ ಪಡೆ ನಿಯೋಜಿಸುವಂತೆ ಒತ್ತಾಯಿಸಲಾಗುವುದು ಎಂದು ವಿವರಿಸಿವೆ.</p><p><strong>ಆರೋಪ ಏನು?: ಚಿನ್–ಕುಕಿ ಬಂಡುಕೋರರು ಮತ್ತು ನೆರೆಯ ಮ್ಯಾನ್ಮರ್ ಭಯೋತ್ಪಾದಕರು ಕುಕಿ ಸಮುದಾಯ ಹೆಚ್ಚಿರುವ ಪ್ರದೇಶಗಳಲ್ಲಿ ಅಫೀಮು ಉತ್ಪಾದನೆಗೆ ಬಳಸುವ ಗಸಗಸೆ ಕೃಷಿಯಲ್ಲಿ ತೊಡಗಿದ್ದಾರೆ ಎಂದು ಮೈತೇಯಿ ಸಮುದಾಯ ಆರೋಪಿಸಿದೆ.</strong></p><p>ಅಕ್ರಮ ವಲಸಿಗರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರವು ತೆರವು ಕಾರ್ಯಾ<br>ಚರಣೆ ಕೈಗೊಂಡಿತು. ಬಳಿಕ ಗಸಗಸೆ ಕೃಷಿ ಚಟುವಟಿಕೆಗೂ ಕಡಿವಾಣ ಹಾಕಲು ಮುಂದಾಯಿತು. ಆ ಬಳಿಕ ನಮ್ಮ ಮೇಲೆ ಕುಕಿ ಜನರಿಂದ ದಾಳಿ ಹೆಚ್ಚಿದೆ ಎಂದು ಮೈತೇಯಿ ಜನರು ದೂರುತ್ತಾರೆ. </p><p>ಅಫೀಮು ತಯಾರಿಕೆಯಲ್ಲಿ ನಾವು ತೊಡಗಿಕೊಂಡಿಲ್ಲ. ಮೈತೇಯಿ ಸಮುದಾಯ ಮತ್ತು ಮಣಿಪುರ ಸರ್ಕಾರವು ನಮಗೆ ಅಕ್ರಮ ವಲಸಿಗರ ಪಟ್ಟ ಕಟ್ಟಲು ಹೊರಟಿದೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಹುನ್ನಾರ ನಡೆದಿದೆ ಎಂಬುದು ಕುಕಿ ಸಮುದಾಯದ ಆರೋಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುವಾಹಟಿ: ಮಣಿಪುರದಿಂದ ದೇಶದ ರಾಜಧಾನಿವರೆಗೆ ವಿಸ್ತರಿಸಿರುವ ಚಿನ್–ಕುಕಿ ಸಮುದಾಯಕ್ಕೆ ಸೇರಿದ ಮಾದಕ ವಸ್ತುಗಳ ಕಳ್ಳಸಾಗಣೆದಾರರ ವಿರುದ್ಧ ಹೋರಾಟ ನಡೆಸಲು ಮೈತೇಯಿ ಸಂಘಟನೆಗಳು ನಿರ್ಧರಿಸಿವೆ.</p><p>ಶನಿವಾರ ಮಣಿಪುರದಲ್ಲಿ ಈ ಸಮುದಾಯದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆದಿತ್ತು. ಈ ಹೋರಾಟವನ್ನು ದೆಹಲಿಗೆ ವಿಸ್ತರಿಸಲು ಮಣಿಪುರ ಏಕತೆ ಸಂಯೋಜನಾ ಸಮಿತಿ (ಸಿಒಸಿಒಎಂಐ) ಹಾಗೂ ಮಣಿಪುರ–ದೆಹಲಿ ಸಂಯೋಜನಾ ಸಮಿತಿ ತೀರ್ಮಾನಿಸಿವೆ. ಹಾಗಾಗಿ, ಆಗಸ್ಟ್ 6ರಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಒಂದು ವಾರದ ಕಾಲ ಧರಣಿ ನಡೆಯಲಿದೆ.</p><p>ಕಣಿವೆ ರಾಜ್ಯದಲ್ಲಿ ಬೇರೂರಿರುವ ಈ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ದೂರಿರುವ ಸಮಿತಿಗಳು, ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಕಲ್ಪಿಸಬಾರದೆಂದು ಆಗ್ರಹಿಸಲಾಗುವುದು ಎಂದು ತಿಳಿಸಿವೆ.</p><p>ಕುಕಿ ಬಂಡುಕೋರರ ವಿರುದ್ಧದ ಕಾರ್ಯಾಚರಣೆಗೆ ರೂಪಿಸಿದ್ದ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿದೆ. ಭಾರತ–ಮ್ಯಾನ್ಮರ್ ಗಡಿ ಭಾಗದ ಭದ್ರತೆಗೆ ಅಸ್ಸಾಂ ರೈಫಲ್ಸ್ ಬದಲಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಪ್ರತ್ಯೇಕ ಪಡೆ ನಿಯೋಜಿಸುವಂತೆ ಒತ್ತಾಯಿಸಲಾಗುವುದು ಎಂದು ವಿವರಿಸಿವೆ.</p><p><strong>ಆರೋಪ ಏನು?: ಚಿನ್–ಕುಕಿ ಬಂಡುಕೋರರು ಮತ್ತು ನೆರೆಯ ಮ್ಯಾನ್ಮರ್ ಭಯೋತ್ಪಾದಕರು ಕುಕಿ ಸಮುದಾಯ ಹೆಚ್ಚಿರುವ ಪ್ರದೇಶಗಳಲ್ಲಿ ಅಫೀಮು ಉತ್ಪಾದನೆಗೆ ಬಳಸುವ ಗಸಗಸೆ ಕೃಷಿಯಲ್ಲಿ ತೊಡಗಿದ್ದಾರೆ ಎಂದು ಮೈತೇಯಿ ಸಮುದಾಯ ಆರೋಪಿಸಿದೆ.</strong></p><p>ಅಕ್ರಮ ವಲಸಿಗರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರವು ತೆರವು ಕಾರ್ಯಾ<br>ಚರಣೆ ಕೈಗೊಂಡಿತು. ಬಳಿಕ ಗಸಗಸೆ ಕೃಷಿ ಚಟುವಟಿಕೆಗೂ ಕಡಿವಾಣ ಹಾಕಲು ಮುಂದಾಯಿತು. ಆ ಬಳಿಕ ನಮ್ಮ ಮೇಲೆ ಕುಕಿ ಜನರಿಂದ ದಾಳಿ ಹೆಚ್ಚಿದೆ ಎಂದು ಮೈತೇಯಿ ಜನರು ದೂರುತ್ತಾರೆ. </p><p>ಅಫೀಮು ತಯಾರಿಕೆಯಲ್ಲಿ ನಾವು ತೊಡಗಿಕೊಂಡಿಲ್ಲ. ಮೈತೇಯಿ ಸಮುದಾಯ ಮತ್ತು ಮಣಿಪುರ ಸರ್ಕಾರವು ನಮಗೆ ಅಕ್ರಮ ವಲಸಿಗರ ಪಟ್ಟ ಕಟ್ಟಲು ಹೊರಟಿದೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಹುನ್ನಾರ ನಡೆದಿದೆ ಎಂಬುದು ಕುಕಿ ಸಮುದಾಯದ ಆರೋಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>