<p><strong>ನವದೆಹಲಿ</strong>: <a href="https://www.prajavani.net/tags/nirbhaya-rape-convicts" target="_blank">ನಿರ್ಭಯಾ ಅತ್ಯಾಚಾರ</a> ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ದಿನ ಸಮೀಪಿಸುತ್ತಿದ್ದಂತೆ, ಶಿಕ್ಷೆಯಿಂದ ಪಾರಾಗಲು ಅಪರಾಧಿ ವಿನಯ್ ಶರ್ಮಾ ಶತಾಯಗತಾಯ ಪ್ರಯತ್ನಿಸುತ್ತಿದ್ದಾನೆ. ಗುರುವಾರ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ವಿನಯ್ ಶರ್ಮಾಗಾಯ ಮಾಡಿಕೊಂಡಿದ್ದನು.</p>.<p>ಇದೀಗ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಶರ್ಮಾ ಪರ ವಾದಿಸುತ್ತಿರುವ ವಕೀಲ ಎ.ಪಿ. ಸಿಂಗ್ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಹೊತ್ತಲ್ಲಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಅಂದರೆ ಆಗ <a href="https://www.prajavani.net/tags/manish-sisodia" target="_blank">ಮನೀಶ್ ಸಿಸೋಡಿಯಾ</a> ಸಚಿವರಾಗಿರುವುದಿಲ್ಲ, ಕ್ಷಮಾದಾನ ಅರ್ಜಿಯನ್ನು ಅವರು ತಿರಸ್ಕರಿಸಲಾಗುವುದಿಲ್ಲ ಎಂದಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/nirbhaya-convicts-to-be-hanged-on-march-3-706000.html" target="_blank">ನಿರ್ಭಯಾ ಅತ್ಯಾಚಾರಿಗಳಿಗೆ ಮಾರ್ಚ್ 3ರಂದು ಗಲ್ಲು</a></p>.<p>ಜನವರಿ 30ರಂದು ವಿನಯ್ ಶರ್ಮಾನಕ್ಷಮಾದಾನ ಅರ್ಜಿ ದೆಹಲಿ ಸರ್ಕಾರಕ್ಕೆ ತಲುಪಿತ್ತು. ಆ ಹೊತ್ತಲ್ಲಿ ಸರ್ಕಾರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿತ್ತು. ಫೆಬ್ರುವರಿ 8ರಂದು ನಡೆಯುವ ಚುನಾವಣೆಗಾಗಿ ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವಾಗ ಸಿಸೋಡಿಯಾ ದೆಹಲಿ ಸರ್ಕಾರದಲ್ಲಿಗೃಹ ಸಚಿವರು ಅಥವಾ ಶಾಸಕರು ಆಗಿರುವುದಿಲ್ಲ ಎಂದು ಎ.ಪಿ. ಸಿಂಗ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/nirbhaya-gangrape-case-ahead-of-hanging-convict-hits-head-against-wall-to-injure-self-706688.html" target="_blank">ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡ ನಿರ್ಭಯಾ ಅಪರಾಧಿ ವಿನಯ್ ಶರ್ಮಾ</a></p>.<p>ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲುವಾಟ್ಸ್ಆ್ಯಪ್ ಮೂಲಕ ಸಿಸೋಡಿಯಾ ಕಳಿಸಿದ ಡಿಜಿಟಲ್ ಸಹಿಯನ್ನು ಬಳಸಲಾಗಿತ್ತು. ಚುನಾವಣಾ ಆಯೋಗ, ರಾಷ್ಟ್ರಪತಿ , ಸುಪ್ರೀಂಕೋರ್ಟ್ ಮತ್ತು ಗೃಹ ಸಚಿವಾಲಯದ ಘನತೆಯನ್ನುಈ ರೀತಿ ಕಳೆಯಬಾರದು ಎಂದು ನಾನು ಬಯಸುತ್ತಿದ್ದೇನೆ. ಕ್ಷಮಾದಾನ ಅರ್ಜಿ ತಿರಸ್ಕರಿಸುವಾಗ ದೆಹಲಿಯ ಗೃಹ ಸಚಿವರು ಅಧಿಕಾರದಲ್ಲಿರಲಿಲ್ಲ. ಹೀಗಿದ್ದರೂ ಅವರು ಅದನ್ನು ರಾಷ್ಟ್ರಪತಿಯರಿಗೆಕಳುಹಿಸಿಕೊಟ್ಟರು. ಕ್ಷಮಾದಾನ ಅರ್ಜಿ ತಿರಸ್ಕರಿಸಬಾರದಿತ್ತು. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಂಗ್ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: <a href="https://www.prajavani.net/tags/nirbhaya-rape-convicts" target="_blank">ನಿರ್ಭಯಾ ಅತ್ಯಾಚಾರ</a> ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ದಿನ ಸಮೀಪಿಸುತ್ತಿದ್ದಂತೆ, ಶಿಕ್ಷೆಯಿಂದ ಪಾರಾಗಲು ಅಪರಾಧಿ ವಿನಯ್ ಶರ್ಮಾ ಶತಾಯಗತಾಯ ಪ್ರಯತ್ನಿಸುತ್ತಿದ್ದಾನೆ. ಗುರುವಾರ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ವಿನಯ್ ಶರ್ಮಾಗಾಯ ಮಾಡಿಕೊಂಡಿದ್ದನು.</p>.<p>ಇದೀಗ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಶರ್ಮಾ ಪರ ವಾದಿಸುತ್ತಿರುವ ವಕೀಲ ಎ.ಪಿ. ಸಿಂಗ್ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಹೊತ್ತಲ್ಲಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಅಂದರೆ ಆಗ <a href="https://www.prajavani.net/tags/manish-sisodia" target="_blank">ಮನೀಶ್ ಸಿಸೋಡಿಯಾ</a> ಸಚಿವರಾಗಿರುವುದಿಲ್ಲ, ಕ್ಷಮಾದಾನ ಅರ್ಜಿಯನ್ನು ಅವರು ತಿರಸ್ಕರಿಸಲಾಗುವುದಿಲ್ಲ ಎಂದಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/nirbhaya-convicts-to-be-hanged-on-march-3-706000.html" target="_blank">ನಿರ್ಭಯಾ ಅತ್ಯಾಚಾರಿಗಳಿಗೆ ಮಾರ್ಚ್ 3ರಂದು ಗಲ್ಲು</a></p>.<p>ಜನವರಿ 30ರಂದು ವಿನಯ್ ಶರ್ಮಾನಕ್ಷಮಾದಾನ ಅರ್ಜಿ ದೆಹಲಿ ಸರ್ಕಾರಕ್ಕೆ ತಲುಪಿತ್ತು. ಆ ಹೊತ್ತಲ್ಲಿ ಸರ್ಕಾರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿತ್ತು. ಫೆಬ್ರುವರಿ 8ರಂದು ನಡೆಯುವ ಚುನಾವಣೆಗಾಗಿ ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವಾಗ ಸಿಸೋಡಿಯಾ ದೆಹಲಿ ಸರ್ಕಾರದಲ್ಲಿಗೃಹ ಸಚಿವರು ಅಥವಾ ಶಾಸಕರು ಆಗಿರುವುದಿಲ್ಲ ಎಂದು ಎ.ಪಿ. ಸಿಂಗ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/nirbhaya-gangrape-case-ahead-of-hanging-convict-hits-head-against-wall-to-injure-self-706688.html" target="_blank">ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡ ನಿರ್ಭಯಾ ಅಪರಾಧಿ ವಿನಯ್ ಶರ್ಮಾ</a></p>.<p>ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲುವಾಟ್ಸ್ಆ್ಯಪ್ ಮೂಲಕ ಸಿಸೋಡಿಯಾ ಕಳಿಸಿದ ಡಿಜಿಟಲ್ ಸಹಿಯನ್ನು ಬಳಸಲಾಗಿತ್ತು. ಚುನಾವಣಾ ಆಯೋಗ, ರಾಷ್ಟ್ರಪತಿ , ಸುಪ್ರೀಂಕೋರ್ಟ್ ಮತ್ತು ಗೃಹ ಸಚಿವಾಲಯದ ಘನತೆಯನ್ನುಈ ರೀತಿ ಕಳೆಯಬಾರದು ಎಂದು ನಾನು ಬಯಸುತ್ತಿದ್ದೇನೆ. ಕ್ಷಮಾದಾನ ಅರ್ಜಿ ತಿರಸ್ಕರಿಸುವಾಗ ದೆಹಲಿಯ ಗೃಹ ಸಚಿವರು ಅಧಿಕಾರದಲ್ಲಿರಲಿಲ್ಲ. ಹೀಗಿದ್ದರೂ ಅವರು ಅದನ್ನು ರಾಷ್ಟ್ರಪತಿಯರಿಗೆಕಳುಹಿಸಿಕೊಟ್ಟರು. ಕ್ಷಮಾದಾನ ಅರ್ಜಿ ತಿರಸ್ಕರಿಸಬಾರದಿತ್ತು. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಂಗ್ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>