<p><strong>ನವದೆಹಲಿ:</strong> ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮಾಡುವುದು ಕಡ್ಡಾಯ ಎನ್ನುವುದು ಸಂವಿಧಾನದಲ್ಲಿಲ್ಲ. ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಅಧಿಕಾರ ಇಲ್ಲ ಎಂದು ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಹೇಳಿದ್ದಾರೆ.</p><p>ಲೋಕಸಭೆಯಲ್ಲಿ ಚುನಾವಣಾ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿ ಅವರು ಮಾತನಾಡಿದರು. </p>.ಎಸ್ಐಆರ್ | ತಮಿಳುನಾಡು, ಪ.ಬಂಗಾಳ ಆರೋಪ ರಾಜಕೀಯ ಪ್ರೇರಿತ: ಕೇಂದ್ರ ಚುನಾವಣಾ ಆಯೋಗ.<p>1950ರ ಜನಪ್ರತಿನಿಧಿಗಳ ಕಾಯ್ದೆಯ ಅನ್ವಯ ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಹಕ್ಕು ಇಲ್ಲ ಎಂದು ತಿವಾರಿ ಹೇಳಿದರು. ತಮ್ಮ ವಾದಕ್ಕೆ ಕಾಯ್ದೆಯ ಸೆಕ್ಷನ್ 21ಅನ್ನು ಉಲ್ಲೇಖಿಸಿದರು. </p><p>ಮತದಾರರ ಪಟ್ಟಿಯಲ್ಲಿ ಏನಾದರೂ ದೋಷಗಳಿದ್ದರೆ ಎಸ್ಐಆರ್ ನಡೆಸುವುದು ಚುನಾವಣಾ ಆಯೋಗ ಇರುವ ಆಯ್ಕೆಯಷ್ಟೇ. ಆದರೆ ಅದಕ್ಕೆ ಕಾರಣಗಳನ್ನು ನೀಡಬೇಕು. ರಾಜ್ಯಗಳಲ್ಲಿ ಎಸ್ಐಆರ್ ನಡೆಸಲು ಚುನಾವಣಾ ಆಯೋಗ ಕಾರಣಗಳನ್ನು ಬಹಿರಂಗ ಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.</p><p>ಅಲ್ಲದೆ ಎಸ್ಐಆರ್ ನಡೆಸಿದ ಬಳಿಕ ಯಂತ್ರದ ಮೂಲಕ ಓದುವ ಪಟ್ಟಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.</p>.SIR ಸಿಬ್ಬಂದಿ ಸುರಕ್ಷತೆ ಖಚಿತಪಡಿಸಿ: ಬಂಗಾಳ DGPಗೆ ಚುನಾವಣಾ ಆಯೋಗ ನಿರ್ದೇಶನ.<p>ಭಾಷಣದಲ್ಲಿ ಇವಿಎಂ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಇವಿಎಂಗಳ ಸೋರ್ಸ್ ಕೋಡ್ ಯಾರ ಬಳಿ ಇದೆ? ಕಂಪನಿ ಬಳಿ ಇದೆಯೋ ಅಥವಾ ಚುನಾವಣಾ ಆಯೋಗದ ಬಳಿ ಇದೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಬ್ಯಾಲೆಟ್ ಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.</p><p>ಚುನಾವಣೆಗಿಂತ ಮೊದಲು ನೇರ ನಗದು ವರ್ಗಾವಣೆಯನ್ನು ನಿಲ್ಲಿಸಬೇಕು ಎಂದು ತಿವಾರಿ ಆಗ್ರಹಿಸಿದ್ದಾರೆ. ಬಿಹಾರ ಚುನಾವಣೆಗೂ ಮುನ್ನ ಹಣ ವರ್ಗಾಯಿಸಲು ಎನ್ಡಿಎಗೆ ಅವಕಾಶ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.</p>.ಎಸ್ಐಆರ್ ಚರ್ಚೆಗೆ ಒಪ್ಪಿಗೆ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮಾಡುವುದು ಕಡ್ಡಾಯ ಎನ್ನುವುದು ಸಂವಿಧಾನದಲ್ಲಿಲ್ಲ. ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಅಧಿಕಾರ ಇಲ್ಲ ಎಂದು ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಹೇಳಿದ್ದಾರೆ.</p><p>ಲೋಕಸಭೆಯಲ್ಲಿ ಚುನಾವಣಾ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿ ಅವರು ಮಾತನಾಡಿದರು. </p>.ಎಸ್ಐಆರ್ | ತಮಿಳುನಾಡು, ಪ.ಬಂಗಾಳ ಆರೋಪ ರಾಜಕೀಯ ಪ್ರೇರಿತ: ಕೇಂದ್ರ ಚುನಾವಣಾ ಆಯೋಗ.<p>1950ರ ಜನಪ್ರತಿನಿಧಿಗಳ ಕಾಯ್ದೆಯ ಅನ್ವಯ ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಹಕ್ಕು ಇಲ್ಲ ಎಂದು ತಿವಾರಿ ಹೇಳಿದರು. ತಮ್ಮ ವಾದಕ್ಕೆ ಕಾಯ್ದೆಯ ಸೆಕ್ಷನ್ 21ಅನ್ನು ಉಲ್ಲೇಖಿಸಿದರು. </p><p>ಮತದಾರರ ಪಟ್ಟಿಯಲ್ಲಿ ಏನಾದರೂ ದೋಷಗಳಿದ್ದರೆ ಎಸ್ಐಆರ್ ನಡೆಸುವುದು ಚುನಾವಣಾ ಆಯೋಗ ಇರುವ ಆಯ್ಕೆಯಷ್ಟೇ. ಆದರೆ ಅದಕ್ಕೆ ಕಾರಣಗಳನ್ನು ನೀಡಬೇಕು. ರಾಜ್ಯಗಳಲ್ಲಿ ಎಸ್ಐಆರ್ ನಡೆಸಲು ಚುನಾವಣಾ ಆಯೋಗ ಕಾರಣಗಳನ್ನು ಬಹಿರಂಗ ಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.</p><p>ಅಲ್ಲದೆ ಎಸ್ಐಆರ್ ನಡೆಸಿದ ಬಳಿಕ ಯಂತ್ರದ ಮೂಲಕ ಓದುವ ಪಟ್ಟಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.</p>.SIR ಸಿಬ್ಬಂದಿ ಸುರಕ್ಷತೆ ಖಚಿತಪಡಿಸಿ: ಬಂಗಾಳ DGPಗೆ ಚುನಾವಣಾ ಆಯೋಗ ನಿರ್ದೇಶನ.<p>ಭಾಷಣದಲ್ಲಿ ಇವಿಎಂ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಇವಿಎಂಗಳ ಸೋರ್ಸ್ ಕೋಡ್ ಯಾರ ಬಳಿ ಇದೆ? ಕಂಪನಿ ಬಳಿ ಇದೆಯೋ ಅಥವಾ ಚುನಾವಣಾ ಆಯೋಗದ ಬಳಿ ಇದೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಬ್ಯಾಲೆಟ್ ಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.</p><p>ಚುನಾವಣೆಗಿಂತ ಮೊದಲು ನೇರ ನಗದು ವರ್ಗಾವಣೆಯನ್ನು ನಿಲ್ಲಿಸಬೇಕು ಎಂದು ತಿವಾರಿ ಆಗ್ರಹಿಸಿದ್ದಾರೆ. ಬಿಹಾರ ಚುನಾವಣೆಗೂ ಮುನ್ನ ಹಣ ವರ್ಗಾಯಿಸಲು ಎನ್ಡಿಎಗೆ ಅವಕಾಶ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.</p>.ಎಸ್ಐಆರ್ ಚರ್ಚೆಗೆ ಒಪ್ಪಿಗೆ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>