ಎಲ್ಒಸಿಯಲ್ಲಿನ ಸ್ಥಿತಿಯ ಕುರಿತು ಪ್ರಸ್ತಾಪಿಸಿದ ಅವರು, ‘ಪಾಕಿಸ್ತಾನವು ಉಗ್ರರಿಗೆ ಆಶ್ರಯ ನೀಡುವುದನ್ನು ಮುಂದುವರಿಸಿದೆ. ಎಲ್ಒಸಿಯ ಪಾಕಿಸ್ತಾನದ ಕಡೆಯಲ್ಲಿರುವ ಶಿಬಿರಗಳಲ್ಲಿ 300–400 ಉಗ್ರರಿದ್ದು, ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ’ ಎಂದರು. ‘ಕದನ ವಿರಾಮ ಉಲ್ಲಂಘನೆಯು ಶೇ 44 ಹೆಚ್ಚಳವಾಗಿದ್ದು, ಉಗ್ರರು ಒಳನುಸುಳಲು ಸಹಾಯವಾಗುವಂತೆ ಈ ಕೃತ್ಯವನ್ನು ನೆರೆ ರಾಷ್ಟ್ರವು ನಡೆಸುತ್ತಿರುವುದಕ್ಕೆ ಸಾಕ್ಷ್ಯವಾಗಿದೆ. ಡ್ರೋನ್ ಹಾಗೂ ಸುರಂಗದ ಮುಖಾಂತರ ಜಮ್ಮು ಮತ್ತು ಕಾಶ್ಮೀರದೊಳಗೆ ಶಸ್ತ್ರಗಳನ್ನು ಸಾಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ನೀಡುತ್ತಿದೆ. ಎಲ್ಒಸಿಯಲ್ಲಿ ಕಳೆದ ವರ್ಷ, ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ 200ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಲಾಗಿದೆ’ ಎಂದರು.