<p><strong>ನವದೆಹಲಿ</strong>: ರಾಜಧಾನಿಯ ಮುಸ್ತಾಫಾಬಾದ್ ಬಡಾವಣೆಯಲ್ಲಿ 4 ಮಹಡಿಗಳ ವಸತಿ ಕಟ್ಟಡವೊಂದು ಶನಿವಾರ ಬೆಳಗಿನ ಜಾವ ಕುಸಿದಿದೆ. 11 ಜನರು ಮೃತಪಟ್ಟಿದ್ದು, ಇತರೆ 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಸತತ 12 ಗಂಟೆ ಕಾರ್ಯಾಚರಣೆ ನಡೆಸಿ ಅವಶೇಷಗಳನ್ನು ತೆರವುಗೊಳಿಸಲಾಯಿತು. ಕಟ್ಟಡದಲ್ಲಿ 22 ಮಂದಿ ವಾಸವಿದ್ದರು. ಮೃತರಲ್ಲಿ ಕಟ್ಟಡದ ಮಾಲೀಕ ತೆಹ್ಸೀನ್ ಮತ್ತು ಅವರ ಕುಟುಂಬದ ಆರು ಮಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.</p><p>20 ವರ್ಷ ಹಳೆಯದಾದ ಕಟ್ಟಡ ಕುಸಿದಿರುವ ಮಾಹಿತಿ ಬೆಳಗಿನ ಜಾವ 3 ಗಂಟೆಗೆ ಬಂದಿತ್ತು. ರಕ್ಷಣಾ ಕಾರ್ಯದಲ್ಲಿ ಎನ್ಡಿಆರ್ಎಫ್ ಸಿಬ್ಬಂದಿ, ಅಗ್ನಿಶಾಮಕ ಪಡೆ, ದೆಹಲಿ ಪೊಲೀಸರ ಜೊತೆಗೆ ಸ್ವಯಂಸೇವಕರು ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ. </p><p>ಪಕ್ಕದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇದೂ ಕುಸಿತಕ್ಕೆ ಕಾರಣವಾಗಿರಬಹುದು. ಈ ವಲಯದಲ್ಲಿ ಇದೂ ಸೇರಿ 4–5 ಕಟ್ಟಡಗಳು ಶಿಥಿಲಗೊಂಡಿದ್ದವು. ಹಲವು ವರ್ಷಗಳಿಂದ ನೀರು ಕೊಳವೆಗಳಿಂದ ಕಟ್ಟಡದ ಗೋಡೆಗಳಲ್ಲಿ ಸೋರಿಕೆಯಾಗಿ ಶಿಥಿಲವಾಗಿತ್ತು ಎಂದು ತಿಳಿಸಿದ್ದಾರೆ.</p><p>ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ, ಅವಘಡ ಕುರಿತು ತನಿಖೆಗೆ ಆದೇಶಿಸಿದ್ದಾರೆ.</p>.ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯ ಸರ್ಕಾರಿ ನೌಕರರ ಪಟ್ಟಿ ಪ್ರಕಟ.ಜನಿವಾರದ ಕಾರಣಕ್ಕಾಗಿ ಪರೀಕ್ಷೆಗೆ ನಿರಾಕರಣೆ: ಕ್ರಿಮಿನಲ್ ಪ್ರಕರಣಕ್ಕೆ ಆಗ್ರಹ.ಹಾವೇರಿ | ₹ 50 ಸಾವಿರ ಲಂಚಕ್ಕೆ ಬೇಡಿಕೆ: BEO ಮೌನೇಶ್ ಬಡಿಗೇರ ಲೋಕಾಯುಕ್ತ ಬಲೆಗೆ.ಬೊಗಳಿದ ನಾಯಿ.. 3 ಕಿ.ಮೀ ಕಾರಿಗೆ ಕಟ್ಟಿ ಎಳೆದೊಯ್ದ ವ್ಯಕ್ತಿ; ಬಂಧನ.ಈ ದಿನಾಂಕದಿಂದ ಭಕ್ತಾದಿಗಳಿಗೆ ಕೇದಾರನಾಥ, ಬದ್ರಿನಾಥ ಯಾತ್ರಾ ಸ್ಥಳಗಳು ಪುನಾರಂಭ.ಮುರ್ಶಿದಾಬಾದ್ ಗಲಭೆ | ಮನೆಯಲ್ಲಿದ್ದ ಜನರನ್ನು ಹೊರಗೆಳೆದು ಕೊಂದಿದ್ದಾರೆ; NCW .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ರಾಜಧಾನಿಯ ಮುಸ್ತಾಫಾಬಾದ್ ಬಡಾವಣೆಯಲ್ಲಿ 4 ಮಹಡಿಗಳ ವಸತಿ ಕಟ್ಟಡವೊಂದು ಶನಿವಾರ ಬೆಳಗಿನ ಜಾವ ಕುಸಿದಿದೆ. 11 ಜನರು ಮೃತಪಟ್ಟಿದ್ದು, ಇತರೆ 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಸತತ 12 ಗಂಟೆ ಕಾರ್ಯಾಚರಣೆ ನಡೆಸಿ ಅವಶೇಷಗಳನ್ನು ತೆರವುಗೊಳಿಸಲಾಯಿತು. ಕಟ್ಟಡದಲ್ಲಿ 22 ಮಂದಿ ವಾಸವಿದ್ದರು. ಮೃತರಲ್ಲಿ ಕಟ್ಟಡದ ಮಾಲೀಕ ತೆಹ್ಸೀನ್ ಮತ್ತು ಅವರ ಕುಟುಂಬದ ಆರು ಮಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.</p><p>20 ವರ್ಷ ಹಳೆಯದಾದ ಕಟ್ಟಡ ಕುಸಿದಿರುವ ಮಾಹಿತಿ ಬೆಳಗಿನ ಜಾವ 3 ಗಂಟೆಗೆ ಬಂದಿತ್ತು. ರಕ್ಷಣಾ ಕಾರ್ಯದಲ್ಲಿ ಎನ್ಡಿಆರ್ಎಫ್ ಸಿಬ್ಬಂದಿ, ಅಗ್ನಿಶಾಮಕ ಪಡೆ, ದೆಹಲಿ ಪೊಲೀಸರ ಜೊತೆಗೆ ಸ್ವಯಂಸೇವಕರು ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ. </p><p>ಪಕ್ಕದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇದೂ ಕುಸಿತಕ್ಕೆ ಕಾರಣವಾಗಿರಬಹುದು. ಈ ವಲಯದಲ್ಲಿ ಇದೂ ಸೇರಿ 4–5 ಕಟ್ಟಡಗಳು ಶಿಥಿಲಗೊಂಡಿದ್ದವು. ಹಲವು ವರ್ಷಗಳಿಂದ ನೀರು ಕೊಳವೆಗಳಿಂದ ಕಟ್ಟಡದ ಗೋಡೆಗಳಲ್ಲಿ ಸೋರಿಕೆಯಾಗಿ ಶಿಥಿಲವಾಗಿತ್ತು ಎಂದು ತಿಳಿಸಿದ್ದಾರೆ.</p><p>ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ, ಅವಘಡ ಕುರಿತು ತನಿಖೆಗೆ ಆದೇಶಿಸಿದ್ದಾರೆ.</p>.ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯ ಸರ್ಕಾರಿ ನೌಕರರ ಪಟ್ಟಿ ಪ್ರಕಟ.ಜನಿವಾರದ ಕಾರಣಕ್ಕಾಗಿ ಪರೀಕ್ಷೆಗೆ ನಿರಾಕರಣೆ: ಕ್ರಿಮಿನಲ್ ಪ್ರಕರಣಕ್ಕೆ ಆಗ್ರಹ.ಹಾವೇರಿ | ₹ 50 ಸಾವಿರ ಲಂಚಕ್ಕೆ ಬೇಡಿಕೆ: BEO ಮೌನೇಶ್ ಬಡಿಗೇರ ಲೋಕಾಯುಕ್ತ ಬಲೆಗೆ.ಬೊಗಳಿದ ನಾಯಿ.. 3 ಕಿ.ಮೀ ಕಾರಿಗೆ ಕಟ್ಟಿ ಎಳೆದೊಯ್ದ ವ್ಯಕ್ತಿ; ಬಂಧನ.ಈ ದಿನಾಂಕದಿಂದ ಭಕ್ತಾದಿಗಳಿಗೆ ಕೇದಾರನಾಥ, ಬದ್ರಿನಾಥ ಯಾತ್ರಾ ಸ್ಥಳಗಳು ಪುನಾರಂಭ.ಮುರ್ಶಿದಾಬಾದ್ ಗಲಭೆ | ಮನೆಯಲ್ಲಿದ್ದ ಜನರನ್ನು ಹೊರಗೆಳೆದು ಕೊಂದಿದ್ದಾರೆ; NCW .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>