‘ರಾಮ ಮಂದಿರಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೇವಾಲಯದ ಮುಂಭಾಗದ ರಸ್ತೆಯನ್ನು ವಿಸ್ತರಿಸುವುದು ಅಗತ್ಯವಾಗಿದೆ. ಆದರೆ, ಅಯೋಧ್ಯೆಯು ತನ್ನ ಗುರುತನ್ನು ಕಳೆದುಕೊಳ್ಳದಂತೆ ಸರ್ಕಾರವು ನೋಡಿಕೊಳ್ಳಬೇಕಿದೆ. ನೆಲಸಮ ಪಟ್ಟಿಯಲ್ಲಿರುವ ದೇವಾಲಯಗಳು ಅತ್ಯಂತ ಭವ್ಯವಾದ ದೇವಾಲಯಗಳು. ಈ ದೇವಾಲಯಗಳಿಗೂ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದರು’ ಎಂದು ಅಯೊಧ್ಯೆ ಮೂಲದ ಸ್ವಾಮೀಜಿಯೊಬ್ಬರು ಹೇಳಿದರು.