<p><strong>ನವದೆಹಲಿ</strong>: ಅತ್ಯಾಚಾರ ಸಂತ್ರಸ್ತೆ, 30 ವಾರಗಳ ಗರ್ಭಿಣಿಯಾದ 14 ವರ್ಷದ ಬಾಲಕಿಯು ಮಗುವಿಗೆ ಜನ್ಮ ನೀಡಲು ಅನುಮತಿ ನೀಡಿದ್ದಾಳೆ. ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಬಾಲಕಿಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಳು.</p>.<p>‘ದತ್ತು ತೆಗೆದುಕೊಳ್ಳುವವರಿಗೆ ಈ ಮಗುವನ್ನು ನೀಡಲಾಗುವುದು’ ಎಂದು ನ್ಯಾಯಾಲಯ ಹೇಳಿದೆ. ಬಾಲಕಿಯ ಪೋಷಕರು ಈಕೆಯನ್ನು ತೊರೆದಿದ್ದಾರೆ. ಸದ್ಯ ಬಾಲಕಿಯು ದೆಹಲಿಯ ಆಶ್ರಯಧಾಮವೊಂದರಲ್ಲಿ ಆಶ್ರಯ ಪಡೆದಿದ್ದಾಳೆ.</p>.<p>ಹತ್ತಿರದ ಸಂಬಂಧಿ ವ್ಯಕ್ತಿಯೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವ್ಯಕ್ತಿಯ ತಾಯಿಯ ಸಹಾಯದಿಂದಲೇ ಬಾಲಕಿಯು ನ್ಯಾಯಾಲಯದ ಮೊರೆಹೋಗಿದ್ದಾಳೆ. ತಾನು ಗರ್ಭಿಣಿ ಎಂದು ಬಾಲಕಿಗೆ ಆಗಸ್ಟ್ ಮೊದಲ ವಾರದಲ್ಲಿ ವೈದ್ಯರ ಮೂಲಕ ತಿಳಿಯಿತು. ಅದಾಗಲೇ ಆಕೆಯು 27 ವಾರಗಳ ಗರ್ಭಿಣಿಯಾಗಿದ್ದಳು. ನ್ಯಾಯಾಲಯಕ್ಕೆ ಹೋಗುವಂತೆ ವೈದ್ಯರೇ ಬಾಲಕಿಗೆ ಸಲಹೆ ನೀಡಿದ್ದರು.</p>.<p>‘ಬಾಲಕಿಗೆ ಬಾಲನ್ಯಾಯ ಕಾಯ್ದೆ ಅನ್ವಯ ರಕ್ಷಣೆ ದೊರೆಯಬೇಕು. ಮಹಿಳಾ ಆಯೋಗವು ಬಾಲಕಿಯೊಂದಿಗೆ ಮಾತುಕತೆ ನಡೆಸಿ, ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು’ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ್ ಶರ್ಮಾ ಆಗಸ್ಟ್ 18ರಂದು ಆದೇಶ ನೀಡಿದ್ದರು.</p>.<p>ಆಯೋಗದ ಆಪ್ತ ಸಮಾಲೋಚನೆ ಬಳಿಕ ಮಗುವಿಗೆ ಜನ್ಮ ನೀಡುವುದಕ್ಕೆ ಬಾಲಕಿ ಹಾಗೂ ಆಕೆಯ ಸಂಬಂಧಿ ಮಹಿಳೆಯು ಒಪ್ಪಿಗೆ ನೀಡಿದ್ದಾರೆ. ‘ಗರ್ಭಪಾತ ಮಾಡುವುದರಿಂದ ಬಾಲಕಿಗೆ ಭವಿಷ್ಯದಲ್ಲಿ ತೀವ್ರ ತೊಂದರೆ ಆಗುತ್ತದೆ. ಮಗುವಿಗೆ ಜನ್ಮ ನೀಡುವುದೇ ಸೂಕ್ತ’ ಎಂದು ವೈದ್ಯರ ತಂಡವೂ ಸಲಹೆ ನೀಡಿತ್ತು.</p>.<p>ಈ ವಿಚಾರವನ್ನು ಆಯೋಗವು ನ್ಯಾಯಾಲಯದ ಗಮನಕ್ಕೆ ತಂದಿತು. ‘ಗರ್ಭಪಾತ ಮಾಡುವುದು ಬೇಡ’ ಎಂದು ಕೋರ್ಟ್ ಕೂಡ ಅಭಿಪ್ರಾಯಪಟ್ಟಿತು. ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ. ಮಕ್ಕಳ ಅಭಿವೃದ್ಧಿ ಸಮಿತಿಯು ಈ ಪ್ರಕರಣದ ಬಗ್ಗೆ ತನ್ನ ವರದಿಯನ್ನು ಇದೇ ದಿನವೇ ನೀಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಅತ್ಯಾಚಾರ ಸಂತ್ರಸ್ತೆ, 30 ವಾರಗಳ ಗರ್ಭಿಣಿಯಾದ 14 ವರ್ಷದ ಬಾಲಕಿಯು ಮಗುವಿಗೆ ಜನ್ಮ ನೀಡಲು ಅನುಮತಿ ನೀಡಿದ್ದಾಳೆ. ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಬಾಲಕಿಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಳು.</p>.<p>‘ದತ್ತು ತೆಗೆದುಕೊಳ್ಳುವವರಿಗೆ ಈ ಮಗುವನ್ನು ನೀಡಲಾಗುವುದು’ ಎಂದು ನ್ಯಾಯಾಲಯ ಹೇಳಿದೆ. ಬಾಲಕಿಯ ಪೋಷಕರು ಈಕೆಯನ್ನು ತೊರೆದಿದ್ದಾರೆ. ಸದ್ಯ ಬಾಲಕಿಯು ದೆಹಲಿಯ ಆಶ್ರಯಧಾಮವೊಂದರಲ್ಲಿ ಆಶ್ರಯ ಪಡೆದಿದ್ದಾಳೆ.</p>.<p>ಹತ್ತಿರದ ಸಂಬಂಧಿ ವ್ಯಕ್ತಿಯೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವ್ಯಕ್ತಿಯ ತಾಯಿಯ ಸಹಾಯದಿಂದಲೇ ಬಾಲಕಿಯು ನ್ಯಾಯಾಲಯದ ಮೊರೆಹೋಗಿದ್ದಾಳೆ. ತಾನು ಗರ್ಭಿಣಿ ಎಂದು ಬಾಲಕಿಗೆ ಆಗಸ್ಟ್ ಮೊದಲ ವಾರದಲ್ಲಿ ವೈದ್ಯರ ಮೂಲಕ ತಿಳಿಯಿತು. ಅದಾಗಲೇ ಆಕೆಯು 27 ವಾರಗಳ ಗರ್ಭಿಣಿಯಾಗಿದ್ದಳು. ನ್ಯಾಯಾಲಯಕ್ಕೆ ಹೋಗುವಂತೆ ವೈದ್ಯರೇ ಬಾಲಕಿಗೆ ಸಲಹೆ ನೀಡಿದ್ದರು.</p>.<p>‘ಬಾಲಕಿಗೆ ಬಾಲನ್ಯಾಯ ಕಾಯ್ದೆ ಅನ್ವಯ ರಕ್ಷಣೆ ದೊರೆಯಬೇಕು. ಮಹಿಳಾ ಆಯೋಗವು ಬಾಲಕಿಯೊಂದಿಗೆ ಮಾತುಕತೆ ನಡೆಸಿ, ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು’ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ್ ಶರ್ಮಾ ಆಗಸ್ಟ್ 18ರಂದು ಆದೇಶ ನೀಡಿದ್ದರು.</p>.<p>ಆಯೋಗದ ಆಪ್ತ ಸಮಾಲೋಚನೆ ಬಳಿಕ ಮಗುವಿಗೆ ಜನ್ಮ ನೀಡುವುದಕ್ಕೆ ಬಾಲಕಿ ಹಾಗೂ ಆಕೆಯ ಸಂಬಂಧಿ ಮಹಿಳೆಯು ಒಪ್ಪಿಗೆ ನೀಡಿದ್ದಾರೆ. ‘ಗರ್ಭಪಾತ ಮಾಡುವುದರಿಂದ ಬಾಲಕಿಗೆ ಭವಿಷ್ಯದಲ್ಲಿ ತೀವ್ರ ತೊಂದರೆ ಆಗುತ್ತದೆ. ಮಗುವಿಗೆ ಜನ್ಮ ನೀಡುವುದೇ ಸೂಕ್ತ’ ಎಂದು ವೈದ್ಯರ ತಂಡವೂ ಸಲಹೆ ನೀಡಿತ್ತು.</p>.<p>ಈ ವಿಚಾರವನ್ನು ಆಯೋಗವು ನ್ಯಾಯಾಲಯದ ಗಮನಕ್ಕೆ ತಂದಿತು. ‘ಗರ್ಭಪಾತ ಮಾಡುವುದು ಬೇಡ’ ಎಂದು ಕೋರ್ಟ್ ಕೂಡ ಅಭಿಪ್ರಾಯಪಟ್ಟಿತು. ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ. ಮಕ್ಕಳ ಅಭಿವೃದ್ಧಿ ಸಮಿತಿಯು ಈ ಪ್ರಕರಣದ ಬಗ್ಗೆ ತನ್ನ ವರದಿಯನ್ನು ಇದೇ ದಿನವೇ ನೀಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>