<p><strong>ಹೈದರಾಬಾದ್</strong>: ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಪರಿಣಾಮಕಾರಿ ಅಳವಡಿಕೆಯು ಆಧುನಿಕ ಕಾಲದ ಯುದ್ಧದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಇಲ್ಲಿನ ದುಂಡಿಗಲ್ನಲ್ಲಿರುವ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ನಡೆದ ‘ಕಂಬೈಡ್ ಗ್ರಾಜುಯೇಶನ್ ಪರೇಡ್’ (ಸಿಜಿಪಿ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. </p>.<p>ಆಧುನಿಕ ಯುದ್ಧದ ತಂತ್ರಗಾರಿಕೆಯು ನಿರಂತರವಾಗಿ ವಿಕಸನಗೊಳ್ಳುತ್ತಲೇ ಇದೆ. ಇನ್ನು ಮುಂದೆ ಯುದ್ಧಗಳು ಸಂಕೀರ್ಣ ಡೇಟಾ ನೆಟ್ವರ್ಕ್ಗಳು ಮತ್ತು ಸುಧಾರಿತ ಸೈಬರ್ ತಂತ್ರಜ್ಞಾನಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ ಎಂದು ಹೇಳಿದರು.</p>.<p>ವೃತ್ತಿಪರತೆ, ಆಕ್ರಮಣಶೀಲತೆ ಮತ್ತು ಸಾಮರ್ಥ್ಯವು ಒಬ್ಬ ನಾಯಕನಲ್ಲಿರಬೇಕಾದ ಮೂರು ಮುಖ್ಯ ಗುಣಗಳಾಗಿವೆ. ಅದೇ ರೀತಿ, ಚಿಂತಕರಾಗಿರುವ ನಾಯಕರ ಅಗತ್ಯವೂ ಇದೆ ಎಂದರು. </p>.<p>‘ನಿಮ್ಮ ಜೀವನದಲ್ಲಿ ಈ ಅಸಾಮಾನ್ಯ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ಭಾರತೀಯ ವಾಯುಪಡೆಯ ಪ್ರಮುಖ ಮೌಲ್ಯಗಳಾದ ಗುರಿ ಈಡೇರಿಸುವ ಛಲ, ಸಮಗ್ರತೆ ಮತ್ತು ಉತ್ಕೃಷ್ಟತೆ – ನಿಮಗೆ ದಾರಿದೀಪವಾಗಲಿ’ ಎಂದು ಅವರು ಹೊಸದಾಗಿ ನೇಮಕಗೊಂಡ ಅಧಿಕಾರಿಗಳಿಗೆ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಪರಿಣಾಮಕಾರಿ ಅಳವಡಿಕೆಯು ಆಧುನಿಕ ಕಾಲದ ಯುದ್ಧದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಇಲ್ಲಿನ ದುಂಡಿಗಲ್ನಲ್ಲಿರುವ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ನಡೆದ ‘ಕಂಬೈಡ್ ಗ್ರಾಜುಯೇಶನ್ ಪರೇಡ್’ (ಸಿಜಿಪಿ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. </p>.<p>ಆಧುನಿಕ ಯುದ್ಧದ ತಂತ್ರಗಾರಿಕೆಯು ನಿರಂತರವಾಗಿ ವಿಕಸನಗೊಳ್ಳುತ್ತಲೇ ಇದೆ. ಇನ್ನು ಮುಂದೆ ಯುದ್ಧಗಳು ಸಂಕೀರ್ಣ ಡೇಟಾ ನೆಟ್ವರ್ಕ್ಗಳು ಮತ್ತು ಸುಧಾರಿತ ಸೈಬರ್ ತಂತ್ರಜ್ಞಾನಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ ಎಂದು ಹೇಳಿದರು.</p>.<p>ವೃತ್ತಿಪರತೆ, ಆಕ್ರಮಣಶೀಲತೆ ಮತ್ತು ಸಾಮರ್ಥ್ಯವು ಒಬ್ಬ ನಾಯಕನಲ್ಲಿರಬೇಕಾದ ಮೂರು ಮುಖ್ಯ ಗುಣಗಳಾಗಿವೆ. ಅದೇ ರೀತಿ, ಚಿಂತಕರಾಗಿರುವ ನಾಯಕರ ಅಗತ್ಯವೂ ಇದೆ ಎಂದರು. </p>.<p>‘ನಿಮ್ಮ ಜೀವನದಲ್ಲಿ ಈ ಅಸಾಮಾನ್ಯ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ಭಾರತೀಯ ವಾಯುಪಡೆಯ ಪ್ರಮುಖ ಮೌಲ್ಯಗಳಾದ ಗುರಿ ಈಡೇರಿಸುವ ಛಲ, ಸಮಗ್ರತೆ ಮತ್ತು ಉತ್ಕೃಷ್ಟತೆ – ನಿಮಗೆ ದಾರಿದೀಪವಾಗಲಿ’ ಎಂದು ಅವರು ಹೊಸದಾಗಿ ನೇಮಕಗೊಂಡ ಅಧಿಕಾರಿಗಳಿಗೆ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>