<p><strong>ನವದೆಹಲಿ</strong>: ‘ಭಾರತವು ಜಗತ್ತಿನ ದಕ್ಷಿಣ ಭಾಗದ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದೆ. ಇದರ ಪರಿಣಾಮ ವಿಶ್ವವು ಭಾರತದ ಕಡೆಗೆ ವಾಲುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು. </p>.<p>ರಾಷ್ಟ್ರಪತಿ ಅವರ ಭಾಷಣದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, ‘ಜಗತ್ತು ದಕ್ಷಿಣದ ಬಗ್ಗೆ ಮಾತನಾಡುತ್ತಿದ್ದು, ಭಾರತವು ದಕ್ಷಿಣದ ಗಟ್ಟಿಧ್ವನಿಯಾಗಿ ಬೆಳೆದಿದೆ’ ಎಂದು ಪ್ರತಿಪಾದಿಸಿದರು. </p>.<p>ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಈ ವೇಳೆ ಘೋಷಣೆಗಳನ್ನು ಕೂಗಿದರು. ಅದರ ನಡುವೆಯೇ ಪ್ರಧಾನಿ ಉತ್ತರ ನೀಡಲು ಆರಂಭಿಸಿದರು. </p>.<p>ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ, ‘ನೀವು ಕುಳಿತಲ್ಲಿನಿಂದಲೇ ಘೋಷಣೆಗಳನ್ನು ಕೂಗಬಹುದು’ ಎಂದು ಮೋದಿ ಹೇಳಿದರು. ಆದರೆ ವಿರೋಧ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು. </p>.<p>ಕೋವಿಡ್ ಬಳಿಕ ಜಗತ್ತು ಹೊಸ ದಿಕ್ಕಿನತ್ತ ಸಾಗುತ್ತಿದೆ. ಅದನ್ನು ಸ್ವತಂತ್ರವಾಗಿ ವಿಶ್ಲೇಷಿಸಿದರೆ, ವಿಶ್ವವು ಭಾರತದ ಕಡೆಗೆ ವಾಲುತ್ತಿದೆ ಎಂದು ಹೇಳಬಹುದು ಎಂದರು. </p>.<p>ವಿವಿಧ ದೇಶಗಳ ಜತೆ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದ ಅವರು, ‘ಕೆಲ ದಿನಗಳಲ್ಲಿ ನಾವು ಒಂಬತ್ತು ಪ್ರಮುಖ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಇದರಲ್ಲಿ ಐರೋಪ್ಯ ಒಕ್ಕೂಟದ (ಇ.ಯು) ಜತೆಗಿನ ಒಪ್ಪಂದವು ‘ಎಲ್ಲ ಒಪ್ಪಂದಗಳ ತಾಯಿ’ಯಾಗಿದೆ’ ಎಂದು ಬಣ್ಣಿಸಿದರು. </p>.<p>ಭಾರತ– ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಇದರಿಂದ ಭಾರತೀಯ ಯುವ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಅವರು ಹೇಳಿದರು. </p>.<p>‘ಇ.ಯು ಜತೆ ಭಾರತದ ಒಪ್ಪಂದ ಮಾಡಿಕೊಂಡಾಗ ಜಗತ್ತಿನಲ್ಲಿ ಸ್ಥಿರತೆಯ ವಿಶ್ವಾಸ ಮೂಡಿತು. ಬಳಿಕ ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ವಿಶ್ವಕ್ಕೆ ಹೆಚ್ಚಿನ ವಿಶ್ವಾಸ ಮೂಡಿದೆ’ ಎಂದು ಅವರು ತಿಳಿಸಿದರು. </p>.<p><strong>ವಿರೋಧ ಪಕ್ಷಗಳ ವಿರುದ್ಧ ಟೀಕೆ: </strong></p>.<p>‘ವಿರೋಧ ಪಕ್ಷದ ಸದಸ್ಯರು ಸುಸ್ತಾಗಿ ಸಭಾತ್ಯಾಗ ಮಾಡಿದ್ದಾರೆ. ಆದರೆ ಅವರು ಇದಕ್ಕೆ ಒಂದು ದಿನ ಉತ್ತರಿಸಬೇಕಾಗುತ್ತದೆ. ಯಾವುದೇ ದೇಶಗಳು ನಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಾರದ ಹಂತಕ್ಕೆ ಅವರು ಭಾರತವನ್ನು ಹೇಗೆ ತಂದರು ಎಂಬುದನ್ನು ಹೇಳಬೇಕಾಗುತ್ತದೆ’ ಎಂದರು. </p>.<p>ಕಾಂಗ್ರೆಸ್ ನೇತೃತ್ವದಲ್ಲಿದ್ದ ಹಿಂದಿನ ಸರ್ಕಾರಗಳು ಭಾರತದ ಪ್ರತಿಷ್ಠೆಯನ್ನು ನಾಶಮಾಡಿವೆ ಎಂದೂ ದೂರಿದರು. </p>.<p>ಲೋಕಸಭೆಯಲ್ಲಿ ವಿರೋಧ ಪಕ್ಷಗಳಿಂದ ಉಂಟಾದ ಅಡಚಣೆಗೆ ಬೇಸರ ವ್ಯಕ್ತಪಡಿಸಿದ ಅವರು, ಇದು ರಾಷ್ಟ್ರಪತಿ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ ಎಂದರು.</p>.<p>–––</p>.<p><strong>ಪ್ರಧಾನಿ ಹೇಳಿದ್ದು... </strong></p>.<p>* ವಿರೋಧ ಪಕ್ಷದವಾದ ಕಾಂಗ್ರೆಸ್ಗೆ ಸತತ ಚುನಾವಣಾ ಸೋಲುಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ‘ಮೊಹಬತ್ ಕಿ ದುಕಾನ್’ ಬಗ್ಗೆ ಮಾತನಾಡುವ ಅವರು, ಮೋದಿ ಸಮಾಧಿ ಅಗೆಯುವ ಬಗ್ಗೆ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದು ಚುನಾವಣಾ ಸೋಲುಗಳಿಂದ ಅವರು ಎಷ್ಟು ಹತಾಶರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ</p>.<p>* ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟೂ ಅವರನ್ನು ರಾಹುಲ್ ಗಾಂಧಿಯವರು ದ್ರೋಹಿ ಎಂದು ಕರೆದಿದ್ದಾರೆ. ಇದು ಇಡೀ ಸಿಖ್ ಸಮುದಾಯಕ್ಕೆ ಮಾಡಿದ ಅವಮಾನ </p>.<p>* ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರನ್ನು ರಕ್ಷಿಸುತ್ತಿದೆ. ಈ ಮೂಲಕ ದೇಶದ ಯುವ ಜನರ ಉದ್ಯೋಗದ ಹಕ್ಕುಗಳು ಮತ್ತು ಬುಡಕಟ್ಟು ಜನರ ಭೂಮಿಯನ್ನು ಕಸಿದುಕೊಳ್ಳುತ್ತಿದೆ </p>.<p>* ಪ್ರಧಾನಿ ಹುದ್ದೆಯನ್ನು ಕಾಂಗ್ರೆಸ್ನ ಮೊದಲ ಕುಟುಂಬವು ತನ್ನ ಆಸ್ತಿ ಎಂದು ಭಾವಿಸಿತ್ತು. ಆದರೆ ಬಡ ವ್ಯಕ್ತಿಯೊಬ್ಬರು ಈ ಹುದ್ದೆ ಅಲಂಕರಿಸಿರುವುದು ಮತ್ತು ಉಳಿದಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ</p>.<p>* ಕೋಟ್ಯಂತರ ತಾಯಂದಿರು, ಸಹೋದರಿಯರು ಮತ್ತು ಬಡಜನರ ಆಶೀರ್ವಾದ ಇರುವ ಕಾರಣ, ಕಾಂಗ್ರೆಸ್ನವರಿಗೆ ನನ್ನ ಸಮಾಧಿ ಅಗೆಯಲು ಆಗುವುದಿಲ್ಲ</p>.<p>* 11 ವರ್ಷಗಳಲ್ಲಿ ನನ್ನ ನೇತೃತ್ವದ ಸರ್ಕಾರ ಸಾಕಷ್ಟು ಸಾಧನೆಗಳನ್ನು ಮಾಡಿದೆ. ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ದೇಶ ಬೆಳೆಯುತ್ತಿದೆ. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶದ ಗುರಿಯನ್ನು ಸಾಧಿಸಲಿದೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಭಾರತವು ಜಗತ್ತಿನ ದಕ್ಷಿಣ ಭಾಗದ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದೆ. ಇದರ ಪರಿಣಾಮ ವಿಶ್ವವು ಭಾರತದ ಕಡೆಗೆ ವಾಲುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು. </p>.<p>ರಾಷ್ಟ್ರಪತಿ ಅವರ ಭಾಷಣದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, ‘ಜಗತ್ತು ದಕ್ಷಿಣದ ಬಗ್ಗೆ ಮಾತನಾಡುತ್ತಿದ್ದು, ಭಾರತವು ದಕ್ಷಿಣದ ಗಟ್ಟಿಧ್ವನಿಯಾಗಿ ಬೆಳೆದಿದೆ’ ಎಂದು ಪ್ರತಿಪಾದಿಸಿದರು. </p>.<p>ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಈ ವೇಳೆ ಘೋಷಣೆಗಳನ್ನು ಕೂಗಿದರು. ಅದರ ನಡುವೆಯೇ ಪ್ರಧಾನಿ ಉತ್ತರ ನೀಡಲು ಆರಂಭಿಸಿದರು. </p>.<p>ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ, ‘ನೀವು ಕುಳಿತಲ್ಲಿನಿಂದಲೇ ಘೋಷಣೆಗಳನ್ನು ಕೂಗಬಹುದು’ ಎಂದು ಮೋದಿ ಹೇಳಿದರು. ಆದರೆ ವಿರೋಧ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು. </p>.<p>ಕೋವಿಡ್ ಬಳಿಕ ಜಗತ್ತು ಹೊಸ ದಿಕ್ಕಿನತ್ತ ಸಾಗುತ್ತಿದೆ. ಅದನ್ನು ಸ್ವತಂತ್ರವಾಗಿ ವಿಶ್ಲೇಷಿಸಿದರೆ, ವಿಶ್ವವು ಭಾರತದ ಕಡೆಗೆ ವಾಲುತ್ತಿದೆ ಎಂದು ಹೇಳಬಹುದು ಎಂದರು. </p>.<p>ವಿವಿಧ ದೇಶಗಳ ಜತೆ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದ ಅವರು, ‘ಕೆಲ ದಿನಗಳಲ್ಲಿ ನಾವು ಒಂಬತ್ತು ಪ್ರಮುಖ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಇದರಲ್ಲಿ ಐರೋಪ್ಯ ಒಕ್ಕೂಟದ (ಇ.ಯು) ಜತೆಗಿನ ಒಪ್ಪಂದವು ‘ಎಲ್ಲ ಒಪ್ಪಂದಗಳ ತಾಯಿ’ಯಾಗಿದೆ’ ಎಂದು ಬಣ್ಣಿಸಿದರು. </p>.<p>ಭಾರತ– ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಇದರಿಂದ ಭಾರತೀಯ ಯುವ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಅವರು ಹೇಳಿದರು. </p>.<p>‘ಇ.ಯು ಜತೆ ಭಾರತದ ಒಪ್ಪಂದ ಮಾಡಿಕೊಂಡಾಗ ಜಗತ್ತಿನಲ್ಲಿ ಸ್ಥಿರತೆಯ ವಿಶ್ವಾಸ ಮೂಡಿತು. ಬಳಿಕ ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ವಿಶ್ವಕ್ಕೆ ಹೆಚ್ಚಿನ ವಿಶ್ವಾಸ ಮೂಡಿದೆ’ ಎಂದು ಅವರು ತಿಳಿಸಿದರು. </p>.<p><strong>ವಿರೋಧ ಪಕ್ಷಗಳ ವಿರುದ್ಧ ಟೀಕೆ: </strong></p>.<p>‘ವಿರೋಧ ಪಕ್ಷದ ಸದಸ್ಯರು ಸುಸ್ತಾಗಿ ಸಭಾತ್ಯಾಗ ಮಾಡಿದ್ದಾರೆ. ಆದರೆ ಅವರು ಇದಕ್ಕೆ ಒಂದು ದಿನ ಉತ್ತರಿಸಬೇಕಾಗುತ್ತದೆ. ಯಾವುದೇ ದೇಶಗಳು ನಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಾರದ ಹಂತಕ್ಕೆ ಅವರು ಭಾರತವನ್ನು ಹೇಗೆ ತಂದರು ಎಂಬುದನ್ನು ಹೇಳಬೇಕಾಗುತ್ತದೆ’ ಎಂದರು. </p>.<p>ಕಾಂಗ್ರೆಸ್ ನೇತೃತ್ವದಲ್ಲಿದ್ದ ಹಿಂದಿನ ಸರ್ಕಾರಗಳು ಭಾರತದ ಪ್ರತಿಷ್ಠೆಯನ್ನು ನಾಶಮಾಡಿವೆ ಎಂದೂ ದೂರಿದರು. </p>.<p>ಲೋಕಸಭೆಯಲ್ಲಿ ವಿರೋಧ ಪಕ್ಷಗಳಿಂದ ಉಂಟಾದ ಅಡಚಣೆಗೆ ಬೇಸರ ವ್ಯಕ್ತಪಡಿಸಿದ ಅವರು, ಇದು ರಾಷ್ಟ್ರಪತಿ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ ಎಂದರು.</p>.<p>–––</p>.<p><strong>ಪ್ರಧಾನಿ ಹೇಳಿದ್ದು... </strong></p>.<p>* ವಿರೋಧ ಪಕ್ಷದವಾದ ಕಾಂಗ್ರೆಸ್ಗೆ ಸತತ ಚುನಾವಣಾ ಸೋಲುಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ‘ಮೊಹಬತ್ ಕಿ ದುಕಾನ್’ ಬಗ್ಗೆ ಮಾತನಾಡುವ ಅವರು, ಮೋದಿ ಸಮಾಧಿ ಅಗೆಯುವ ಬಗ್ಗೆ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದು ಚುನಾವಣಾ ಸೋಲುಗಳಿಂದ ಅವರು ಎಷ್ಟು ಹತಾಶರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ</p>.<p>* ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟೂ ಅವರನ್ನು ರಾಹುಲ್ ಗಾಂಧಿಯವರು ದ್ರೋಹಿ ಎಂದು ಕರೆದಿದ್ದಾರೆ. ಇದು ಇಡೀ ಸಿಖ್ ಸಮುದಾಯಕ್ಕೆ ಮಾಡಿದ ಅವಮಾನ </p>.<p>* ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರನ್ನು ರಕ್ಷಿಸುತ್ತಿದೆ. ಈ ಮೂಲಕ ದೇಶದ ಯುವ ಜನರ ಉದ್ಯೋಗದ ಹಕ್ಕುಗಳು ಮತ್ತು ಬುಡಕಟ್ಟು ಜನರ ಭೂಮಿಯನ್ನು ಕಸಿದುಕೊಳ್ಳುತ್ತಿದೆ </p>.<p>* ಪ್ರಧಾನಿ ಹುದ್ದೆಯನ್ನು ಕಾಂಗ್ರೆಸ್ನ ಮೊದಲ ಕುಟುಂಬವು ತನ್ನ ಆಸ್ತಿ ಎಂದು ಭಾವಿಸಿತ್ತು. ಆದರೆ ಬಡ ವ್ಯಕ್ತಿಯೊಬ್ಬರು ಈ ಹುದ್ದೆ ಅಲಂಕರಿಸಿರುವುದು ಮತ್ತು ಉಳಿದಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ</p>.<p>* ಕೋಟ್ಯಂತರ ತಾಯಂದಿರು, ಸಹೋದರಿಯರು ಮತ್ತು ಬಡಜನರ ಆಶೀರ್ವಾದ ಇರುವ ಕಾರಣ, ಕಾಂಗ್ರೆಸ್ನವರಿಗೆ ನನ್ನ ಸಮಾಧಿ ಅಗೆಯಲು ಆಗುವುದಿಲ್ಲ</p>.<p>* 11 ವರ್ಷಗಳಲ್ಲಿ ನನ್ನ ನೇತೃತ್ವದ ಸರ್ಕಾರ ಸಾಕಷ್ಟು ಸಾಧನೆಗಳನ್ನು ಮಾಡಿದೆ. ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ದೇಶ ಬೆಳೆಯುತ್ತಿದೆ. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶದ ಗುರಿಯನ್ನು ಸಾಧಿಸಲಿದೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>