<p><strong>ಸಾಗರ್ (ಮಧ್ಯಪ್ರದೇಶ):</strong> ಕಿರುಕುಳ ಪ್ರಕರಣದಲ್ಲಿ ರಾಜಿಯಾಗುವಂತೆ ಒತ್ತಡ ಹೇರಲು, ಕೆಲ ಅಪರಿಚಿತರು ಸೋದರನನ್ನು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದ ದಲಿತ ಯುವತಿ ಅಂಜನಾ ಅಹಿರ್ವಾರ್ ಮಂಗಳವಾರ ಶಂಕಾಸ್ಪದವಾಗಿ ಮೃತಪಟ್ಟಿದ್ದಾರೆ.</p>.<p>ಇದರೊಂದಿಗೆ ಕಿರುಕುಳಕ್ಕೆ ಒಳಗಾಗಿದ್ದ ಯುವತಿ ಸೇರಿದಂತೆ ಆ ಕುಟುಂಬದ ಮೂವರು ಕಳೆದ ಒಂದು ವರ್ಷದಲ್ಲಿ ಮೃತಪಟ್ಟಂತಾಗಿದೆ. ವರ್ಷದ ಹಿಂದೆ ಯುವತಿ ಸಹೋದರ ನಿತಿನ್ನನ್ನು ಅಪರಿಚಿತರು ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಆ ಬಗ್ಗೆ ಯುವತಿ ದೂರು ನೀಡಿದ್ದು ವಿಚಾರಣೆ ನಡೆಯುತ್ತಿದೆ. ಖುರೈ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಘರ್ಷಣೆಯಲ್ಲಿ ಸಂಬಂಧಿ ರಾಜೇಂದ್ರ ಹಲ್ಲೆಗೀಡಾಗಿ ಮೃತಪಟ್ಟಿದ್ದರು. </p>.<p>ದಲಿತ ಯುವತಿ ಸಾವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು, ಗೃಹ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.</p>.<p>ಇಂತಹ ಸ್ಥಿತಿ ಸಾಗರ್ ಅಷ್ಟೇ ಅಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿದೆ. ಕಾನೂನು ಸುವ್ಯವಸ್ಥೆ ಇಲ್ಲಿ ನಗೆಪಾಟಲಾಗಿದೆ. ಕ್ರಿಮಿನಲ್ಗಳಿಗೆ ಪೂರಕವಾದ ವಾತಾವರಣವಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಿತು ಪಟ್ವಾರಿ ಟೀಕಿಸಿದ್ದಾರೆ.</p>.<p>‘ಅಂಜನಾ ಅವರ ಸಹೋದರನನ್ನು ಸಾರ್ವಜನಿವಾಗಿ ಹತ್ಯೆ ಮಾಡಲಾಗಿತ್ತು. ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಈಗ ದಲಿತ ಯುವತಿ ಕೂಡಾ ಶಂಕಾಸ್ಪದವಾಗಿ ಸತ್ತಿದ್ದಾರೆ’ ಎಂದು ಪಟ್ವಾರಿ ಅವರು ಹೇಳಿದ್ದಾರೆ. </p>.<p>ಮಂಗಳವಾರ ತನ್ನ ಮಾವನ ಶವ ಒಯ್ಯುತ್ತಿದ್ದ ಆಂಬುಲೆನ್ಸ್ನಿಂದ ಬಿದ್ದು ಯುವತಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಾವನ ಶವವನ್ನು ಅಂಜನಾ ಆಂಬುಲೆನ್ಸ್ನಲ್ಲಿ ಒಯ್ಯುತ್ತಿದ್ದರು. ಅವರ ಜೊತೆಗೆ ಕುಟುಂಬದ ಇತರ ಸದಸ್ಯರು ಇದ್ದರು. ಒಂದು ಹಂತದಲ್ಲಿ ಬಿದ್ದು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಹಳೆ ದ್ವೇಷದ ಹಿನ್ನೆಲೆಯಲ್ಲಿ ಶನಿವಾರ ಗುಂಪು ಘರ್ಷಣೆ ನಡೆದಿದ್ದು, ಅವರ ಮಾವ ರಾಜೇಂದ್ರ ಅಹಿರವಾರ್ ಅವರನ್ನು ಕೆಲವರು ತೀವ್ರವಾಗಿ ಹಲ್ಲೆ ನಡೆಸಿ ಕೊಂದಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಸಿನ್ಹಾ ತಿಳಿಸಿದ್ದಾರೆ.</p>.<p>ಕಿರುಕುಳದ ದೂರಿಗೆ ಸಂಬಂಧಿಸಿ ರಾಜಿಯಾಗುವಂತೆ ಒತ್ತಡ ಹೇರುವ ಕ್ರಮವಾಗಿ ಈಗ ರಾಜೇಂದ್ರ ಅಹಿರ್ವಾರ್ ಅವರ ಕೊಲೆ ನಡೆದಿದೆಯೇ ಎಂಬ ಪ್ರಶ್ನೆಗೆ, ತನಿಖೆಯಿಂದಲೇ ಈ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ ಎಂದರು. ನಿತಿನ್ ಕೊಲೆ ಪ್ರಕರಣದಲ್ಲಿ ರಾಜೇಂದ್ರ ಸಾಕ್ಷಿಯಾಗಿದ್ದರು.</p>.<p>ಮೃತ ಅಂಜನಾಳ ಸಹೋದರ ನಿತಿನ್ ಅಹಿರ್ವಾರ್ನ ಕೊಲೆ 2023ರ ಆಗಸ್ಟ್ 24ರಂದು ನಡೆದಿತ್ತು. ಅದಕ್ಕೂ ಹಿಂದೆ, ಕೆಲವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಇವರನ್ನು ಬೆಂಬಲಿಸಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಧರಣಿ ನಡೆಸಿದ್ದರು.</p>.<p>‘ಹಿಂದೆ, ಯುವತಿಗೆ ಉದ್ಯೋಗ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ನೀಡಲಿಲ್ಲ. ಆಕೆಯ ಅಣ್ಣನ ಕೊಲೆ ಆರೋಪಿಗಳನ್ನು ಬಂಧಿಸಿಲ್ಲ. ಆಕೆಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು 10 ದಿನದ ಹಿಂದೆ ವಾಪಸ್ ಪಡೆಯಲಾಗಿದೆ’ ಎಂದು ದಿಗ್ವಿಜಯ್ ಸಿಂಗ್ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ್ (ಮಧ್ಯಪ್ರದೇಶ):</strong> ಕಿರುಕುಳ ಪ್ರಕರಣದಲ್ಲಿ ರಾಜಿಯಾಗುವಂತೆ ಒತ್ತಡ ಹೇರಲು, ಕೆಲ ಅಪರಿಚಿತರು ಸೋದರನನ್ನು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದ ದಲಿತ ಯುವತಿ ಅಂಜನಾ ಅಹಿರ್ವಾರ್ ಮಂಗಳವಾರ ಶಂಕಾಸ್ಪದವಾಗಿ ಮೃತಪಟ್ಟಿದ್ದಾರೆ.</p>.<p>ಇದರೊಂದಿಗೆ ಕಿರುಕುಳಕ್ಕೆ ಒಳಗಾಗಿದ್ದ ಯುವತಿ ಸೇರಿದಂತೆ ಆ ಕುಟುಂಬದ ಮೂವರು ಕಳೆದ ಒಂದು ವರ್ಷದಲ್ಲಿ ಮೃತಪಟ್ಟಂತಾಗಿದೆ. ವರ್ಷದ ಹಿಂದೆ ಯುವತಿ ಸಹೋದರ ನಿತಿನ್ನನ್ನು ಅಪರಿಚಿತರು ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಆ ಬಗ್ಗೆ ಯುವತಿ ದೂರು ನೀಡಿದ್ದು ವಿಚಾರಣೆ ನಡೆಯುತ್ತಿದೆ. ಖುರೈ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಘರ್ಷಣೆಯಲ್ಲಿ ಸಂಬಂಧಿ ರಾಜೇಂದ್ರ ಹಲ್ಲೆಗೀಡಾಗಿ ಮೃತಪಟ್ಟಿದ್ದರು. </p>.<p>ದಲಿತ ಯುವತಿ ಸಾವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು, ಗೃಹ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.</p>.<p>ಇಂತಹ ಸ್ಥಿತಿ ಸಾಗರ್ ಅಷ್ಟೇ ಅಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿದೆ. ಕಾನೂನು ಸುವ್ಯವಸ್ಥೆ ಇಲ್ಲಿ ನಗೆಪಾಟಲಾಗಿದೆ. ಕ್ರಿಮಿನಲ್ಗಳಿಗೆ ಪೂರಕವಾದ ವಾತಾವರಣವಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಿತು ಪಟ್ವಾರಿ ಟೀಕಿಸಿದ್ದಾರೆ.</p>.<p>‘ಅಂಜನಾ ಅವರ ಸಹೋದರನನ್ನು ಸಾರ್ವಜನಿವಾಗಿ ಹತ್ಯೆ ಮಾಡಲಾಗಿತ್ತು. ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಈಗ ದಲಿತ ಯುವತಿ ಕೂಡಾ ಶಂಕಾಸ್ಪದವಾಗಿ ಸತ್ತಿದ್ದಾರೆ’ ಎಂದು ಪಟ್ವಾರಿ ಅವರು ಹೇಳಿದ್ದಾರೆ. </p>.<p>ಮಂಗಳವಾರ ತನ್ನ ಮಾವನ ಶವ ಒಯ್ಯುತ್ತಿದ್ದ ಆಂಬುಲೆನ್ಸ್ನಿಂದ ಬಿದ್ದು ಯುವತಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಾವನ ಶವವನ್ನು ಅಂಜನಾ ಆಂಬುಲೆನ್ಸ್ನಲ್ಲಿ ಒಯ್ಯುತ್ತಿದ್ದರು. ಅವರ ಜೊತೆಗೆ ಕುಟುಂಬದ ಇತರ ಸದಸ್ಯರು ಇದ್ದರು. ಒಂದು ಹಂತದಲ್ಲಿ ಬಿದ್ದು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಹಳೆ ದ್ವೇಷದ ಹಿನ್ನೆಲೆಯಲ್ಲಿ ಶನಿವಾರ ಗುಂಪು ಘರ್ಷಣೆ ನಡೆದಿದ್ದು, ಅವರ ಮಾವ ರಾಜೇಂದ್ರ ಅಹಿರವಾರ್ ಅವರನ್ನು ಕೆಲವರು ತೀವ್ರವಾಗಿ ಹಲ್ಲೆ ನಡೆಸಿ ಕೊಂದಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಸಿನ್ಹಾ ತಿಳಿಸಿದ್ದಾರೆ.</p>.<p>ಕಿರುಕುಳದ ದೂರಿಗೆ ಸಂಬಂಧಿಸಿ ರಾಜಿಯಾಗುವಂತೆ ಒತ್ತಡ ಹೇರುವ ಕ್ರಮವಾಗಿ ಈಗ ರಾಜೇಂದ್ರ ಅಹಿರ್ವಾರ್ ಅವರ ಕೊಲೆ ನಡೆದಿದೆಯೇ ಎಂಬ ಪ್ರಶ್ನೆಗೆ, ತನಿಖೆಯಿಂದಲೇ ಈ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ ಎಂದರು. ನಿತಿನ್ ಕೊಲೆ ಪ್ರಕರಣದಲ್ಲಿ ರಾಜೇಂದ್ರ ಸಾಕ್ಷಿಯಾಗಿದ್ದರು.</p>.<p>ಮೃತ ಅಂಜನಾಳ ಸಹೋದರ ನಿತಿನ್ ಅಹಿರ್ವಾರ್ನ ಕೊಲೆ 2023ರ ಆಗಸ್ಟ್ 24ರಂದು ನಡೆದಿತ್ತು. ಅದಕ್ಕೂ ಹಿಂದೆ, ಕೆಲವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಇವರನ್ನು ಬೆಂಬಲಿಸಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಧರಣಿ ನಡೆಸಿದ್ದರು.</p>.<p>‘ಹಿಂದೆ, ಯುವತಿಗೆ ಉದ್ಯೋಗ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ನೀಡಲಿಲ್ಲ. ಆಕೆಯ ಅಣ್ಣನ ಕೊಲೆ ಆರೋಪಿಗಳನ್ನು ಬಂಧಿಸಿಲ್ಲ. ಆಕೆಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು 10 ದಿನದ ಹಿಂದೆ ವಾಪಸ್ ಪಡೆಯಲಾಗಿದೆ’ ಎಂದು ದಿಗ್ವಿಜಯ್ ಸಿಂಗ್ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>