ಪುಣೆಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಅಖಿಲೇಶ್ ಕುಮಾರ್ ರಾಣಾ ಅವರು ಸೋಮವಾರ ಶ್ರಮಿಕ ರೈಲಿನಲ್ಲಿಗೊಂಡಾ ಜಿಲ್ಲೆಗೆ ಮರಳುವಾಗ ಅನಾರೋಗ್ಯಪೀಡಿತರಾದರು. ಸತ್ನಾ ಜಿಲ್ಲೆಯ ಮಜ್ಗಾವಾ ರೈಲ್ವೆ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.