ರೈಲು ಸಂಚಾರದ ವಿಳಂಬ ಮತ್ತು ಜನದಟ್ಟಣೆಯನ್ನು ಅಂದಾಜಿಸಿದ್ದ ರೈಲ್ವೆ ಅಧಿಕಾರಿಗಳು ಅನಗತ್ಯ ಪ್ರಯಾಣವನ್ನು ಕೈಬಿಡುವಂತೆ ಉಪನಗರ ರೈಲು ಬಳಕೆದಾರರಿಗೆ ಸೂಚಿಸಿದ್ದರು. ಈ ಅವಧಿಯಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸುವಂತೆ ಸಾರಿಗೆ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದ್ದರು. ಮನೆಯಿಂದಲೇ ಕೆಲಸ ಮಾಡುವ ಅವಕಾಶ ಹೊಂದಿರುವಂತಹವರು ತಮ್ಮ ಮನೆಗಳಲ್ಲೇ ಕೆಲಸ ಮಾಡುವಂತೆಯೂ, ತಮ್ಮ ನೌಕರರಿಗೆ ಪರ್ಯಾಯ ವಾಹನದ ವ್ಯವಸ್ಥೆ ಮಾಡುವಂತೆಯೂ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಕೋರಿದ್ದರು.