ಮೈಹಾರ್, ಪ್ರಖ್ಯಾತ ಸಂಗೀತ ಪಂಡಿತ ಬಾಬಾ ಅಲ್ಲಾವುದ್ದೀನ್ ಖಾನ್ ಅವರ ತವರೂರಾಗಿದೆ. ಅಲ್ಲಾವುದ್ದೀನ್ ಖಾನ್ ಅವರೇ ಪ್ರಸಿದ್ಧ ಸಂಗೀತ ಶಾಲೆ ‘ಮೈಹಾರ್ ಘರನಾ‘(ಶಾರದಾ ದೇವಿ ದೇವಾಲಯ) ನಿರ್ಮಿಸಿದವರು. ಪಂಡಿತ್ ರವಿಶಂಕರ್ ಅಲ್ಲಾವುದ್ದೀನ್ ಖಾನ್ ಅವರ ಶಿಷ್ಯಂದರಲ್ಲಿ ಒಬ್ಬರಾಗಿದ್ದಾರೆ. ‘ಖಾನ್ ಅವರು ಮಾತೆ ಶಾರದಾದೇವಿಯ ಅಚಲ ಭಕ್ತರಾಗಿದ್ದು, ಪ್ರತಿದಿನ 1,063 ಮೆಟ್ಟಿಲುಗಳನ್ನು ಹತ್ತಿ ಶಾರದಾ ದೇವಿ ಮುಂದೆ ಭಕ್ತಿ ಪೂರ್ವಕವಾಗಿ ಹಾಡುತ್ತಿದ್ದರು‘ ಎಂದು ಅವರ ಶಿಷ್ಯ ಪಂಡಿತ್ ರವಿಶಂಕರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.