<p><strong>ತಿರುವನಂತಪುರ</strong>: ಭಗವಾನ್ ಕೃಷ್ಣನ ವರ್ಣಚಿತ್ರ ರಚನೆಯಲ್ಲಿ ಖ್ಯಾತಿ ಗಳಿಸಿರುವ ಮತ್ತು ಕೃಷ್ಣನ ಕಲಾಕೃತಿಯನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆ ನೀಡಿ ಅವರ ಪ್ರಶಂಸೆ ಗಳಿಸಿದ್ದ ಕೇರಳದ ಮುಸ್ಲಿಂ ಮಹಿಳೆಯೊಬ್ಬರು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದ ಪ್ರಕರಣ ಎದುರಿಸುತ್ತಿದ್ದಾರೆ.</p>.<p>ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದ ಮುಂದೆ ಭಗವಾನ್ ಕೃಷ್ಣನ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿರುವ ದೃಶ್ಯವನ್ನು ವಿಡಿಯೊ ಮಾಡಿರುವುದಕ್ಕೆ ಪೊಲೀಸರು ಅವರ ವಿರುದ್ಧ ಇಂತಹ ಆರೋಪದ ಪ್ರಕರಣ ದಾಖಲಿಸಿದ್ದಾರೆ. </p>.<p>ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯ ಜಸ್ನಾ ಸಲೀಂ, ಕೇರಳ ಹೈಕೋರ್ಟ್ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿ ‘ನಾಡಾ ಪಂಡಲ್’ನಲ್ಲಿ (ದೇವಾಲಯದ ಪೀಠ) ವಿಡಿಯೊ ಮಾಡಿರುವ ಆರೋಪದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಜಸ್ನಾ ಇತ್ತೀಚೆಗೆ ದೇವಾಲಯದ ಪೀಠದಲ್ಲಿ ಭಗವಾನ್ ಕೃಷ್ಣನ ವಿಗ್ರಹಕ್ಕೆ ಹಾರ ಹಾಕುವ ವಿಡಿಯೊ ಚಿತ್ರೀಕರಿಸಿದ್ದಾರೆ. ಈ ಸಂಬಂಧ ದೇವಾಲಯದ ಅಧಿಕಾರಿಗಳು ಆಕೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದ ಮತ್ತು ನ್ಯಾಯಾಂಗ ನಿಂದನೆಯ ಆರೋಪದ ಪ್ರಕರಣವನ್ನು ಜಸ್ನಾ ವಿರುದ್ಧ ಗುರುವಾಯೂರ್ ದೇವಾಲಯದ ಪೊಲೀಸರು ದಾಖಲಿಸಿಕೊಂಡಿದ್ದಾರೆ.</p>.<p>ಜಸ್ನಾ ಈ ಹಿಂದೆ ದೇವಾಲಯದೊಳಗೆ ಹುಟ್ಟುಹಬ್ಬದ ಕೇಕ್ ಕತ್ತರಿಸುವ ವಿಡಿಯೊ ಪೋಸ್ಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆನಂತರ ದೇವಾಲಯದೊಳಗೆ ವಿಡಿಯೊ ಚಿತ್ರೀಕರಣಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು.</p>.<p>ಕಳೆದ ಹತ್ತು ವರ್ಷಗಳಿಂದ ಭಗವಾನ್ ಕೃಷ್ಣನ ವರ್ಣಚಿತ್ರಗಳನ್ನು ರಚಿಸುತ್ತಿರುವ ಜಸ್ನಾ, ಮುಸ್ಲಿಮರು ಮತ್ತು ಹಿಂದೂ ಸಂಘಟನೆಗಳೆರಡರಿಂದಲೂ ತೀವ್ರ ಪ್ರತಿರೋಧಗಳನ್ನು ಎದುರಿಸುತ್ತಿದ್ದಾರೆ. ಆದರೆ, ಆಕೆ ರಚಿಸಿರುವ ವರ್ಣಚಿತ್ರಗಳು ಕಲಾಸಕ್ತರ ಗಮನಸೆಳೆದಿವೆ. ಗುರುವಾಯೂರು ದೇವಾಲಯ ಸೇರಿ ಅನೇಕ ದೇವಾಲಯಗಳಲ್ಲಿ ಆಕೆ ಬಿಡಿಸಿರುವ ವರ್ಣಚಿತ್ರಗಳನ್ನು ಹಾಕಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಭಗವಾನ್ ಕೃಷ್ಣನ ವರ್ಣಚಿತ್ರ ರಚನೆಯಲ್ಲಿ ಖ್ಯಾತಿ ಗಳಿಸಿರುವ ಮತ್ತು ಕೃಷ್ಣನ ಕಲಾಕೃತಿಯನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆ ನೀಡಿ ಅವರ ಪ್ರಶಂಸೆ ಗಳಿಸಿದ್ದ ಕೇರಳದ ಮುಸ್ಲಿಂ ಮಹಿಳೆಯೊಬ್ಬರು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದ ಪ್ರಕರಣ ಎದುರಿಸುತ್ತಿದ್ದಾರೆ.</p>.<p>ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದ ಮುಂದೆ ಭಗವಾನ್ ಕೃಷ್ಣನ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿರುವ ದೃಶ್ಯವನ್ನು ವಿಡಿಯೊ ಮಾಡಿರುವುದಕ್ಕೆ ಪೊಲೀಸರು ಅವರ ವಿರುದ್ಧ ಇಂತಹ ಆರೋಪದ ಪ್ರಕರಣ ದಾಖಲಿಸಿದ್ದಾರೆ. </p>.<p>ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯ ಜಸ್ನಾ ಸಲೀಂ, ಕೇರಳ ಹೈಕೋರ್ಟ್ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿ ‘ನಾಡಾ ಪಂಡಲ್’ನಲ್ಲಿ (ದೇವಾಲಯದ ಪೀಠ) ವಿಡಿಯೊ ಮಾಡಿರುವ ಆರೋಪದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಜಸ್ನಾ ಇತ್ತೀಚೆಗೆ ದೇವಾಲಯದ ಪೀಠದಲ್ಲಿ ಭಗವಾನ್ ಕೃಷ್ಣನ ವಿಗ್ರಹಕ್ಕೆ ಹಾರ ಹಾಕುವ ವಿಡಿಯೊ ಚಿತ್ರೀಕರಿಸಿದ್ದಾರೆ. ಈ ಸಂಬಂಧ ದೇವಾಲಯದ ಅಧಿಕಾರಿಗಳು ಆಕೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದ ಮತ್ತು ನ್ಯಾಯಾಂಗ ನಿಂದನೆಯ ಆರೋಪದ ಪ್ರಕರಣವನ್ನು ಜಸ್ನಾ ವಿರುದ್ಧ ಗುರುವಾಯೂರ್ ದೇವಾಲಯದ ಪೊಲೀಸರು ದಾಖಲಿಸಿಕೊಂಡಿದ್ದಾರೆ.</p>.<p>ಜಸ್ನಾ ಈ ಹಿಂದೆ ದೇವಾಲಯದೊಳಗೆ ಹುಟ್ಟುಹಬ್ಬದ ಕೇಕ್ ಕತ್ತರಿಸುವ ವಿಡಿಯೊ ಪೋಸ್ಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆನಂತರ ದೇವಾಲಯದೊಳಗೆ ವಿಡಿಯೊ ಚಿತ್ರೀಕರಣಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು.</p>.<p>ಕಳೆದ ಹತ್ತು ವರ್ಷಗಳಿಂದ ಭಗವಾನ್ ಕೃಷ್ಣನ ವರ್ಣಚಿತ್ರಗಳನ್ನು ರಚಿಸುತ್ತಿರುವ ಜಸ್ನಾ, ಮುಸ್ಲಿಮರು ಮತ್ತು ಹಿಂದೂ ಸಂಘಟನೆಗಳೆರಡರಿಂದಲೂ ತೀವ್ರ ಪ್ರತಿರೋಧಗಳನ್ನು ಎದುರಿಸುತ್ತಿದ್ದಾರೆ. ಆದರೆ, ಆಕೆ ರಚಿಸಿರುವ ವರ್ಣಚಿತ್ರಗಳು ಕಲಾಸಕ್ತರ ಗಮನಸೆಳೆದಿವೆ. ಗುರುವಾಯೂರು ದೇವಾಲಯ ಸೇರಿ ಅನೇಕ ದೇವಾಲಯಗಳಲ್ಲಿ ಆಕೆ ಬಿಡಿಸಿರುವ ವರ್ಣಚಿತ್ರಗಳನ್ನು ಹಾಕಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>