ನವದೆಹಲಿ (ಪಿಟಿಐ): ‘ಮುಸ್ಲಿಮರು ಉಪ ರಾಷ್ಟ್ರಪತಿ, ರಾಜ್ಯಪಾಲ, ವಿಶ್ವವಿದ್ಯಾಲಯಗಳ ಕುಲಪತಿಯಂತಹ ಉನ್ನತ ಹುದ್ದೆಗಳನ್ನು ಪಡೆಯುವುದಕ್ಕಾಗಿ ಸಹಿಷ್ಣುತೆಯ ಮುಖವಾಡ ಧರಿಸುತ್ತಾರೆ. ನಿವೃತ್ತಿಯ ನಂತರ ಅಥವಾ ಅಧಿಕಾರಾವಧಿ ಮುಗಿದ ಬಳಿಕ ಇಂತಹವರ ನಿಜ ಬಣ್ಣ ಬಯಲಾಗುತ್ತದೆ’ ಎಂದು ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಬಘೇಲಾ ಮಂಗಳವಾರ ಹೇಳಿದ್ದಾರೆ.