ಈ ಹಿಂದೆ 2010 ಮತ್ತು 2013ರಲ್ಲಿ ಚೀನಾ ಭಾರತದ ಮೇಲೆ 600 ಬಾರಿ ದಾಳಿ ನಡೆಸಿದಾಗ ಯುಪಿಎ ಸರ್ಕಾರ ಏನು ಮಾಡಿತ್ತು ಎಂದು ಜೆ.ಪಿ ನಡ್ಡಾ ಸರಣಿ ಟ್ವೀಟ್ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಿ.ಚಿದಂಬರಂ, ‘ಯುಪಿಎ ಸರ್ಕಾರವಿದ್ದಾಗ ಚೀನಾ ದಾಳಿ ನಡೆಸಿತ್ತು. ಆದರೆ, ಆಗ ಭಾರತದ ಯಾವುದೇ ಭೂಪ್ರದೇಶವನ್ನು ವಶಕ್ಕೆ ಪಡೆಯುವಲ್ಲಿ ಚೀನಾ ಸಫಲವಾಗಿಲ್ಲ. ಅಲ್ಲದೇ ಯಾವುದೇ ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿಲ್ಲ’ ಎಂದಿದ್ದಾರೆ.