<p><strong>ಲಖನೌ:</strong> ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೊತೆಯಾಗಿ ನಡೆಯುತ್ತ ಮಾತಿಗಿಳಿದಿರುವ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿವೆ. ಹೆಗಲ ಮೇಲೆ ಕೈಯಿಟ್ಟಿರುವ ಪ್ರಧಾನಿ ಮೋದಿ, ಅವರ ಮಾತುಗಳಿಗೆ ಯೋಗಿ ಆದಿತ್ಯನಾಥ್ ಕಿವಿಗೊಟ್ಟಿರುವುದನ್ನು ಈ ಫೋಟೊಗಳಲ್ಲಿ ಕಾಣಬಹುದಾಗಿದೆ.</p>.<p>ಉಭಯ ನಾಯಕರ ನಡುವಿನ ಬಾಂಧವ್ಯ, ಬೆಸುಗೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಯೋಗಿ ಆದಿತ್ಯನಾಥ್ ಅವರ ಟ್ವಿಟರ್ ಖಾತೆಯಲ್ಲಿ ಈ ಫೋಟೊಗಳನ್ನು ಹಂಚಿಕೊಳ್ಳಲಾಗಿದ್ದು, 'ನಮ್ಮ ತನು–ಮನವನ್ನು ಅರ್ಪಿಸುವ ಪ್ರಮಾಣದೊಂದಿಗೆ ನಾವು ಮುಂದುವರಿದಿದ್ದೇವೆ. ಹೊಸ ಸೂರ್ಯನನ್ನು ಉದಯಿಸುವ ಬದ್ಧತೆಯೊಂದಿಗೆ, ಆಕಾಶಕ್ಕಿಂತಲೂ ಎತ್ತರಕೆ ಏರುತ್ತ–ಹೊಸ ಭಾರತವನ್ನು ಕಟ್ಟಲು' ಎಂಬರ್ಥದ ಸಾಲುಗಳನ್ನು ಪ್ರಕಟಿಸಿದ್ದಾರೆ.</p>.<p>ಇತ್ತೀಚೆಗೆ ಪೂರ್ವಾಂಚಲ ಎಕ್ಸ್ಪ್ರೆಸ್ವೇ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಗಾವಲು ಪಡೆಯೊಂದಿಗೆ ಮುಂದೆ ಸಾಗಿದರೆ, ಯೋಗಿ ಆದಿತ್ಯನಾಥ್ ಅವರು ಒಂಟಿಯಾಗಿ ನಡೆಯುತ್ತ ಸಾಗುತ್ತಿರುವ ಫೋಟೊ ಚರ್ಚೆಗೆ ಗ್ರಾಸವಾಗಿತ್ತು.</p>.<p>ಹಲವು ರಾಜಕೀಯ ನಾಯಕರು ಆ ಚಿತ್ರವನ್ನು ಟ್ವೀಟಿಸಿ, ವ್ಯಂಗ್ಯವಾಡಿದ್ದರು. ಮುಖ್ಯಮಂತ್ರಿಗೆ ಅವಮಾನ ಮಾಡಲಾಗಿದೆ ಎಂದೆಲ್ಲ ಪ್ರತಿಕ್ರಿಯಿಸಲಾಗಿತ್ತು. ಅವುಗಳಿಗೆ ಉತ್ತರವಾಗಿ ಈ ಚಿತ್ರವನ್ನು ಯೋಗಿ ಆದಿತ್ಯನಾಥ್ ಪ್ರಕಟಿಸಿರುವುದಾಗಿಯೂ ವಿಶ್ಲೇಷಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೊತೆಯಾಗಿ ನಡೆಯುತ್ತ ಮಾತಿಗಿಳಿದಿರುವ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿವೆ. ಹೆಗಲ ಮೇಲೆ ಕೈಯಿಟ್ಟಿರುವ ಪ್ರಧಾನಿ ಮೋದಿ, ಅವರ ಮಾತುಗಳಿಗೆ ಯೋಗಿ ಆದಿತ್ಯನಾಥ್ ಕಿವಿಗೊಟ್ಟಿರುವುದನ್ನು ಈ ಫೋಟೊಗಳಲ್ಲಿ ಕಾಣಬಹುದಾಗಿದೆ.</p>.<p>ಉಭಯ ನಾಯಕರ ನಡುವಿನ ಬಾಂಧವ್ಯ, ಬೆಸುಗೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಯೋಗಿ ಆದಿತ್ಯನಾಥ್ ಅವರ ಟ್ವಿಟರ್ ಖಾತೆಯಲ್ಲಿ ಈ ಫೋಟೊಗಳನ್ನು ಹಂಚಿಕೊಳ್ಳಲಾಗಿದ್ದು, 'ನಮ್ಮ ತನು–ಮನವನ್ನು ಅರ್ಪಿಸುವ ಪ್ರಮಾಣದೊಂದಿಗೆ ನಾವು ಮುಂದುವರಿದಿದ್ದೇವೆ. ಹೊಸ ಸೂರ್ಯನನ್ನು ಉದಯಿಸುವ ಬದ್ಧತೆಯೊಂದಿಗೆ, ಆಕಾಶಕ್ಕಿಂತಲೂ ಎತ್ತರಕೆ ಏರುತ್ತ–ಹೊಸ ಭಾರತವನ್ನು ಕಟ್ಟಲು' ಎಂಬರ್ಥದ ಸಾಲುಗಳನ್ನು ಪ್ರಕಟಿಸಿದ್ದಾರೆ.</p>.<p>ಇತ್ತೀಚೆಗೆ ಪೂರ್ವಾಂಚಲ ಎಕ್ಸ್ಪ್ರೆಸ್ವೇ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಗಾವಲು ಪಡೆಯೊಂದಿಗೆ ಮುಂದೆ ಸಾಗಿದರೆ, ಯೋಗಿ ಆದಿತ್ಯನಾಥ್ ಅವರು ಒಂಟಿಯಾಗಿ ನಡೆಯುತ್ತ ಸಾಗುತ್ತಿರುವ ಫೋಟೊ ಚರ್ಚೆಗೆ ಗ್ರಾಸವಾಗಿತ್ತು.</p>.<p>ಹಲವು ರಾಜಕೀಯ ನಾಯಕರು ಆ ಚಿತ್ರವನ್ನು ಟ್ವೀಟಿಸಿ, ವ್ಯಂಗ್ಯವಾಡಿದ್ದರು. ಮುಖ್ಯಮಂತ್ರಿಗೆ ಅವಮಾನ ಮಾಡಲಾಗಿದೆ ಎಂದೆಲ್ಲ ಪ್ರತಿಕ್ರಿಯಿಸಲಾಗಿತ್ತು. ಅವುಗಳಿಗೆ ಉತ್ತರವಾಗಿ ಈ ಚಿತ್ರವನ್ನು ಯೋಗಿ ಆದಿತ್ಯನಾಥ್ ಪ್ರಕಟಿಸಿರುವುದಾಗಿಯೂ ವಿಶ್ಲೇಷಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>