2002ರಲ್ಲಿ ಗಲಭೆ ಎದ್ದಿತ್ತು. ನಂತರ ಗಲಭೆಕೋರರಿಗೆ ಮೋದಿ ತಕ್ಕ ಪಾಠ ಕಲಿಸಿದರು. ಅದಾದ ನಂತರ ರಾಜ್ಯದಲ್ಲಿ ಗಲಭೆ ನಡೆದಿದೆಯೇ? ಗುಜರಾತ್ನಲ್ಲಿ ಈವರೆಗೆ ಯಾರೂ ಗಲಭೆ ಮಾಡಲು ಧೈರ್ಯ ಮಾಡಿಲ್ಲ ಎಂದು ಅವರು ಹೇಳಿದರು.
ಗುಜರಾತ್ನಲ್ಲಿ ಈಗ ಶಾಂತಿ ನೆಲೆಸಿದ್ದು, ರಾಜ್ಯ ಅಭಿವೃದ್ಧಿ ಸಾಧಿಸಿದ್ದು, ಸಮೃದ್ಧವಾಗಿದೆ ಎಂದು ಅವರು ಉಲ್ಲೇಖ ಮಾಡಿದರು.
ಈ ಹಿಂದೆ ಬಾಂಬ್ ಸ್ಪೋಟಗಳು ಸಾಮಾನ್ಯವಾಗಿತ್ತು. ಈ ಕುರಿತು ಪತ್ರಕರ್ತರು ವರದಿ ಮಾಡುವುದನ್ನೇ ಮರೆತಿದ್ದರು. ಸರ್ಜಿಕಲ್ ದಾಳಿ ನಡೆಸಿದ ಪ್ರಧಾನಿ ಮೋದಿ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದರು. ಅವರು ದೇಶವನ್ನು ಸುರಕ್ಷಿತವಾಗಿರಿಸಿದರು ಎಂದು ಅಮಿತ್ ಶಾ ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಚಂದ್ರಯಾನ-3 ಯೋಜನೆ ಯಶಸ್ವಿಗೂ ಮೋದಿ ಅವರನ್ನು ಅಮಿತ್ ಶಾ ಶ್ಲಾಘಿಸಿದರು.