<p><strong>ಹೈದರಾಬಾದ್:</strong> ನ್ಯಾಷನಲ್ ಹೆರಾಲ್ಡ್ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರ ಹೆಸರಿದೆ ಎಂದು ವರದಿಗಳು ತಿಳಿಸಿವೆ. ಇದು, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.</p>.<p>ರೇವಂತ ರೆಡ್ಡಿ ಅವರು ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದಾಗ ‘ಯಂಗ್ ಇಂಡಿಯನ್’ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಹಣ ಕ್ರೋಡೀಕರಿಸಲು ಒತ್ತು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.</p>.<p>ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು, ‘ರೇವಂತ ರೆಡ್ಡಿ ಅವರು ತೆಲಂಗಾಣವನ್ನು ಕಾಂಗ್ರೆಸ್ ಪಕ್ಷದ ಎ.ಟಿ.ಎಂ ಆಗಿ ಪರಿವರ್ತಿಸಿದ್ದಾರೆ’ ಎಂದು ಕಟುವಾಗಿ ಟೀಕಿಸಿದ್ದಾರೆ.</p>.<p>ಭ್ರಷ್ಟಾಚಾರದ ವಿಷಯದಲ್ಲಿ ತೆಲಂಗಾಣ ಸರ್ಕಾರ ರಾಜಿಯಾಗಿದೆ ಎಂದು ಬಿಆರ್ಎಸ್ ಹಲವು ತಿಂಗಳಿಂದ ಮಾಡುತ್ತಿದ್ದ ಆರೋಪ ಈಗಿನ ವರದಿಗಳಿಂದ ಸಾಬೀತಾಗಿದೆ ಎಂದೂ ಹೇಳಿದರು.</p>.<p>ಯಂಗ್ ಇಂಡಿಯನ್ಗೆ 2019ರಿಂದ 2022ರ ಅವಧಿಯಲ್ಲಿ ದೇಣಿಗೆ ಹರಿದುಬರುವಂತೆ ಕ್ರಮವಹಿಸಿದ್ದ ಕಾಂಗ್ರೆಸ್ ನಾಯಕರ ಹೆಸರನ್ನು ಇ.ಡಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ ಎಂದು ವರದಿಗಳು ತಿಳಿಸಿವೆ.</p>.<p>‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಬಗ್ಗೆ ಮೌನವಹಿಸಬಾರದು. ಆರೋಪಪಟ್ಟಿಯಲ್ಲಿ ರೇವಂತ ರೆಡ್ಡಿ ಹೆಸರಿರುವ ಕಾರಣ ಈಗ ಕ್ರಮ ಜರುಗಿಸುವುದೇ ಅಥವಾ ಹಿಂದಿನ ಹಲವು ಹಗರಣಗಳಲ್ಲಿ ರಕ್ಷಿಸಿದಂತೆ ಈಗಲೂ ರಕ್ಷಣೆ ಮಾಡುವುದೇ’ ಎಂದು ಕೆ.ಟಿ.ರಾಮರಾವ್ ಅವರು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ನ್ಯಾಷನಲ್ ಹೆರಾಲ್ಡ್ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರ ಹೆಸರಿದೆ ಎಂದು ವರದಿಗಳು ತಿಳಿಸಿವೆ. ಇದು, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.</p>.<p>ರೇವಂತ ರೆಡ್ಡಿ ಅವರು ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದಾಗ ‘ಯಂಗ್ ಇಂಡಿಯನ್’ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಹಣ ಕ್ರೋಡೀಕರಿಸಲು ಒತ್ತು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.</p>.<p>ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು, ‘ರೇವಂತ ರೆಡ್ಡಿ ಅವರು ತೆಲಂಗಾಣವನ್ನು ಕಾಂಗ್ರೆಸ್ ಪಕ್ಷದ ಎ.ಟಿ.ಎಂ ಆಗಿ ಪರಿವರ್ತಿಸಿದ್ದಾರೆ’ ಎಂದು ಕಟುವಾಗಿ ಟೀಕಿಸಿದ್ದಾರೆ.</p>.<p>ಭ್ರಷ್ಟಾಚಾರದ ವಿಷಯದಲ್ಲಿ ತೆಲಂಗಾಣ ಸರ್ಕಾರ ರಾಜಿಯಾಗಿದೆ ಎಂದು ಬಿಆರ್ಎಸ್ ಹಲವು ತಿಂಗಳಿಂದ ಮಾಡುತ್ತಿದ್ದ ಆರೋಪ ಈಗಿನ ವರದಿಗಳಿಂದ ಸಾಬೀತಾಗಿದೆ ಎಂದೂ ಹೇಳಿದರು.</p>.<p>ಯಂಗ್ ಇಂಡಿಯನ್ಗೆ 2019ರಿಂದ 2022ರ ಅವಧಿಯಲ್ಲಿ ದೇಣಿಗೆ ಹರಿದುಬರುವಂತೆ ಕ್ರಮವಹಿಸಿದ್ದ ಕಾಂಗ್ರೆಸ್ ನಾಯಕರ ಹೆಸರನ್ನು ಇ.ಡಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ ಎಂದು ವರದಿಗಳು ತಿಳಿಸಿವೆ.</p>.<p>‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಬಗ್ಗೆ ಮೌನವಹಿಸಬಾರದು. ಆರೋಪಪಟ್ಟಿಯಲ್ಲಿ ರೇವಂತ ರೆಡ್ಡಿ ಹೆಸರಿರುವ ಕಾರಣ ಈಗ ಕ್ರಮ ಜರುಗಿಸುವುದೇ ಅಥವಾ ಹಿಂದಿನ ಹಲವು ಹಗರಣಗಳಲ್ಲಿ ರಕ್ಷಿಸಿದಂತೆ ಈಗಲೂ ರಕ್ಷಣೆ ಮಾಡುವುದೇ’ ಎಂದು ಕೆ.ಟಿ.ರಾಮರಾವ್ ಅವರು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>