<p><strong>ಪಥೋರ್ಗಡ್:</strong> ಉತ್ತರಾಖಂಡದ ಗಡಿ ಭಾಗದ 52 ಹಳ್ಳಿಗಳ ಜನರು ಸೌರ ಶಕ್ತಿಯನ್ನೇ ಅವಲಂಬಿಸಿದ್ದು, ಅವರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಉತ್ತರಾಖಂಡ ವಿದ್ಯುತ್ ನಿಗಮವು (ಯುಪಿಸಿಎಲ್) ಈ ಗ್ರಾಮಗಳನ್ನು ರಾಷ್ಟ್ರೀಯ ವಿದ್ಯುತ್ ಸಂಪರ್ಕ ಜಾಲಕ್ಕೆ ಸೇರಿಸಿದೆ.</p><p>ದರ್ಮ ಕಣಿವೆಯ 20 ಗ್ರಾಮಗಳು, ವ್ಯಾಸ್ ಕಣಿವೆಯ 18, ಜೋಹರ್ ಕಣಿವೆಯ 14 ಗ್ರಾಮಗಳು ಈ ವ್ಯಾಪ್ತಿಗೆ ಸೇರಲಿವೆ ಎಂದು ಯುಪಿಸಿಎಲ್ನ ರುದ್ರಪುರ ವಲಯದ ಮುಖ್ಯ ಎಂಜಿನಿಯರ್ ನರೇಂದ್ರ ಸಿಂಗ್ ತೊಲಿಯಾ ತಿಳಿಸಿದ್ದಾರೆ.</p><p>ಈ 52 ಗ್ರಾಮಗಳು ಭಾರತ ಮತ್ತು ಚೀನಾ ಗಡಿ ಭಾಗದಲ್ಲಿವೆ. ಕಿರು ಸೌರ ವಿದ್ಯುತ್ ಉತ್ಪಾದನಾ ಯೋಜನೆಗಳ ಮೂಲಕ ಈ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಇದನ್ನು ಉತ್ತರಾಖಂಡದ ನವೀಕರಿಸಬಹುದಾದ ವಿದ್ಯುತ್ಚ್ಛಕ್ತಿ ಅಭಿವೃದ್ಧಿ ಏಜೆನ್ಸಿಯು ನಿರ್ವಹಿಸುತ್ತಿದೆ.</p><p>‘ನೂತನ ಯೋಜನೆಗೆ ಕೇಂದ್ರ ಸರ್ಕಾರವು ₹131.43 ಕೋಟಿ ನೀಡಿದೆ. ಟೆಂಡರ್ ಕರೆಯಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಯೋಜನೆ ಮೂಲಕ ಗಡಿಭಾಗದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗೂ ಪ್ರಯೋಜನವಾಗಲಿದೆ’ ಎಂದು ನರೇಂದ್ರ ಸಿಂಗ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಥೋರ್ಗಡ್:</strong> ಉತ್ತರಾಖಂಡದ ಗಡಿ ಭಾಗದ 52 ಹಳ್ಳಿಗಳ ಜನರು ಸೌರ ಶಕ್ತಿಯನ್ನೇ ಅವಲಂಬಿಸಿದ್ದು, ಅವರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಉತ್ತರಾಖಂಡ ವಿದ್ಯುತ್ ನಿಗಮವು (ಯುಪಿಸಿಎಲ್) ಈ ಗ್ರಾಮಗಳನ್ನು ರಾಷ್ಟ್ರೀಯ ವಿದ್ಯುತ್ ಸಂಪರ್ಕ ಜಾಲಕ್ಕೆ ಸೇರಿಸಿದೆ.</p><p>ದರ್ಮ ಕಣಿವೆಯ 20 ಗ್ರಾಮಗಳು, ವ್ಯಾಸ್ ಕಣಿವೆಯ 18, ಜೋಹರ್ ಕಣಿವೆಯ 14 ಗ್ರಾಮಗಳು ಈ ವ್ಯಾಪ್ತಿಗೆ ಸೇರಲಿವೆ ಎಂದು ಯುಪಿಸಿಎಲ್ನ ರುದ್ರಪುರ ವಲಯದ ಮುಖ್ಯ ಎಂಜಿನಿಯರ್ ನರೇಂದ್ರ ಸಿಂಗ್ ತೊಲಿಯಾ ತಿಳಿಸಿದ್ದಾರೆ.</p><p>ಈ 52 ಗ್ರಾಮಗಳು ಭಾರತ ಮತ್ತು ಚೀನಾ ಗಡಿ ಭಾಗದಲ್ಲಿವೆ. ಕಿರು ಸೌರ ವಿದ್ಯುತ್ ಉತ್ಪಾದನಾ ಯೋಜನೆಗಳ ಮೂಲಕ ಈ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಇದನ್ನು ಉತ್ತರಾಖಂಡದ ನವೀಕರಿಸಬಹುದಾದ ವಿದ್ಯುತ್ಚ್ಛಕ್ತಿ ಅಭಿವೃದ್ಧಿ ಏಜೆನ್ಸಿಯು ನಿರ್ವಹಿಸುತ್ತಿದೆ.</p><p>‘ನೂತನ ಯೋಜನೆಗೆ ಕೇಂದ್ರ ಸರ್ಕಾರವು ₹131.43 ಕೋಟಿ ನೀಡಿದೆ. ಟೆಂಡರ್ ಕರೆಯಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಯೋಜನೆ ಮೂಲಕ ಗಡಿಭಾಗದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗೂ ಪ್ರಯೋಜನವಾಗಲಿದೆ’ ಎಂದು ನರೇಂದ್ರ ಸಿಂಗ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>