ಹಡಗೊಂದರ ಮೇಲೆ ಮಾನವರಹಿತ ವೈಮಾನಿಕ ವ್ಯವಸ್ಥೆಯಿಂದ (ಯುಎಎಸ್) ದಾಳಿ ನಡೆದಿದೆ ಎಂದು ಬ್ರಿಟನ್ನ ಯುನೈಟೆಡ್ ಕಿಂಗ್ಡಮ್ ಮೇರಿಟೈಮ್ ಟ್ರೇಡ್ ಆಪರೇಷನ್ಸ್ ಸಂಸ್ಥೆಯು (ಯುಕೆಎಂಟಿಒ) ಮೊದಲಿಗೆ ವರದಿ ಮಾಡಿತು. ಮುಂಬೈನಲ್ಲಿನ ಕರಾವಳಿ ರಕ್ಷಣಾ ಸಹಯೋಗ ಕೇಂದ್ರವು (ಎಂಆರ್ಸಿಸಿ) ಈ ಕುರಿತು ಮಾಹಿತಿ ಪಡೆಯಿತು. ಮಾಹಿತಿ ದೊರಕುತ್ತಿದ್ದಂತೆ ಭಾರತೀಯ ನೌಕಾಪಡೆಯು ಕರಾವಳಿ ಗಸ್ತು ಯುದ್ಧವಿಮಾನವನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿತು.