<p><strong>ನವದೆಹಲಿ:</strong> ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಭಾರತ ಮತ್ತು ಹಲವು ಆಫ್ರಿಕನ್ ರಾಷ್ಟ್ರಗಳ ನೌಕಾಪಡೆಗಳನ್ನು ಒಳಗೊಂಡ ಆರು ದಿನಗಳ ಬೃಹತ್ ಸಮಾರಾಭ್ಯಾಸವನ್ನು ವೀಕ್ಷಿಸಲು ತಾಂಜಾನಿಯಾಕ್ಕೆ ಐದು ದಿನಗಳ ಪ್ರವಾಸವನ್ನು ಶನಿವಾರ ಕೈಗೊಂಡರು.</p>.<p>ಭಾರತೀಯ ನೌಕಾಪಡೆ ಮತ್ತು ತಾಂಜಾನಿಯಾ ಪೀಪಲ್ಸ್ ಡಿಫೆನ್ಸ್ ಫೋರ್ಸ್ ಆತಿಥ್ಯದಲ್ಲಿ ‘ಆಫ್ರಿಕಾ–ಇಂಡಿಯಾ ಕೀ ಮೆರಿಟೈಮ್ ಎಂಗೇಜ್ಮೆಂಟ್’ (ಎಐಕೆಇವೈಎಂಇ) ನಡೆಯಲಿದೆ. ಈ ನೌಕಾ ಸಮರಾಭ್ಯಾಸ ದಾರ್-ಎಸ್-ಸಲಾಮ್ನಲ್ಲಿ ಭಾನುವಾರ (ಏ.13) ಪ್ರಾರಂಭವಾಗಲಿದೆ. ಸಮರಾಭ್ಯಾಸದಲ್ಲಿ ಭಾರತ, ತಾಂಜಾನಿಯಾ ಜತೆಗೆ ಕೊಮೊರೊಸ್, ಜಿಬೌಟಿ, ಎರಿಟ್ರಿಯಾ, ಕೆನ್ಯಾ, ಮಡಗಾಸ್ಕರ್, ಮಾರಿಷಸ್, ಮೊಜಾಂಬಿಕ್, ಸೀಶೆಲ್ಸ್ ಮತ್ತು ದಕ್ಷಿಣ ಆಫ್ರಿಕಾ ಭಾಗವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಅಡ್ಮಿರಲ್ ತ್ರಿಪಾಠಿ ಅವರು ಏಪ್ರಿಲ್ 12ರಿಂದ 1 ರವರೆಗೆ ತಾಂಜಾನಿಯಾದ ಅಧಿಕೃತ ಭೇಟಿಯಲ್ಲಿದ್ದಾರೆ. ಅವರ ಈ ಭೇಟಿಯು ಭಾರತ ಮತ್ತು ತಾಂಜಾನಿಯಾ ನಡುವಿನ ಕಡಲ ಸಹಕಾರ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ರಕ್ಷಣಾ ಪಾಲುದಾರಿಕೆಯನ್ನು ಹೆಚ್ಚಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ’ ಎಂದು ಭಾರತೀಯ ನೌಕಾಪಡೆಯು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ.</p>.<p>ಅಭಿವೃದ್ಧಿಶೀಲ ರಾಷ್ಟ್ರಗಳನ್ನು ತೊಡಗಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ದೃಷ್ಟಿಕೋನಕ್ಕೆ ಅನುಗುಣವಾಗಿ ಆಫ್ರಿಕಾ ಖಂಡದೊಂದಿಗೆ ಭಾರತದ ಕಡಲ ಭದ್ರತಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವುದು ಈ ಯುದ್ಧಾಭ್ಯಾಸದ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಭಾರತ ಮತ್ತು ಹಲವು ಆಫ್ರಿಕನ್ ರಾಷ್ಟ್ರಗಳ ನೌಕಾಪಡೆಗಳನ್ನು ಒಳಗೊಂಡ ಆರು ದಿನಗಳ ಬೃಹತ್ ಸಮಾರಾಭ್ಯಾಸವನ್ನು ವೀಕ್ಷಿಸಲು ತಾಂಜಾನಿಯಾಕ್ಕೆ ಐದು ದಿನಗಳ ಪ್ರವಾಸವನ್ನು ಶನಿವಾರ ಕೈಗೊಂಡರು.</p>.<p>ಭಾರತೀಯ ನೌಕಾಪಡೆ ಮತ್ತು ತಾಂಜಾನಿಯಾ ಪೀಪಲ್ಸ್ ಡಿಫೆನ್ಸ್ ಫೋರ್ಸ್ ಆತಿಥ್ಯದಲ್ಲಿ ‘ಆಫ್ರಿಕಾ–ಇಂಡಿಯಾ ಕೀ ಮೆರಿಟೈಮ್ ಎಂಗೇಜ್ಮೆಂಟ್’ (ಎಐಕೆಇವೈಎಂಇ) ನಡೆಯಲಿದೆ. ಈ ನೌಕಾ ಸಮರಾಭ್ಯಾಸ ದಾರ್-ಎಸ್-ಸಲಾಮ್ನಲ್ಲಿ ಭಾನುವಾರ (ಏ.13) ಪ್ರಾರಂಭವಾಗಲಿದೆ. ಸಮರಾಭ್ಯಾಸದಲ್ಲಿ ಭಾರತ, ತಾಂಜಾನಿಯಾ ಜತೆಗೆ ಕೊಮೊರೊಸ್, ಜಿಬೌಟಿ, ಎರಿಟ್ರಿಯಾ, ಕೆನ್ಯಾ, ಮಡಗಾಸ್ಕರ್, ಮಾರಿಷಸ್, ಮೊಜಾಂಬಿಕ್, ಸೀಶೆಲ್ಸ್ ಮತ್ತು ದಕ್ಷಿಣ ಆಫ್ರಿಕಾ ಭಾಗವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಅಡ್ಮಿರಲ್ ತ್ರಿಪಾಠಿ ಅವರು ಏಪ್ರಿಲ್ 12ರಿಂದ 1 ರವರೆಗೆ ತಾಂಜಾನಿಯಾದ ಅಧಿಕೃತ ಭೇಟಿಯಲ್ಲಿದ್ದಾರೆ. ಅವರ ಈ ಭೇಟಿಯು ಭಾರತ ಮತ್ತು ತಾಂಜಾನಿಯಾ ನಡುವಿನ ಕಡಲ ಸಹಕಾರ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ರಕ್ಷಣಾ ಪಾಲುದಾರಿಕೆಯನ್ನು ಹೆಚ್ಚಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ’ ಎಂದು ಭಾರತೀಯ ನೌಕಾಪಡೆಯು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ.</p>.<p>ಅಭಿವೃದ್ಧಿಶೀಲ ರಾಷ್ಟ್ರಗಳನ್ನು ತೊಡಗಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ದೃಷ್ಟಿಕೋನಕ್ಕೆ ಅನುಗುಣವಾಗಿ ಆಫ್ರಿಕಾ ಖಂಡದೊಂದಿಗೆ ಭಾರತದ ಕಡಲ ಭದ್ರತಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವುದು ಈ ಯುದ್ಧಾಭ್ಯಾಸದ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>