<p><strong>ಹೈದರಾಬಾದ್</strong>: ಕಳೆದ ಆರು ದಶಕಗಳಿಂದ ದೇಶದ ಪ್ರಭಾವಿ ನಕ್ಸಲ್ ಮುಖಂಡರಾಗಿದ್ದ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್ಜಿ (ದೇವ್ ಜಿ) ಇಂದು ತೆಲಂಗಾಣದ ಉನ್ನತ ಪೊಲೀಸ್ ಅಧಿಕಾರಿಗಳ ಎದುರು ಶರಣಾಗಲಿದ್ದಾರೆ.</p><p>ಇಂದು ಸಂಜೆ ತೆಲಂಗಾಣ ರಾಜ್ಯ ಪೊಲೀಸ್ ಕಚೇರಿಯಲ್ಲಿ ಶರಣಾಗತಿಯ ಔಪಚಾರಿಕ ಪ್ರಕ್ರಿಯೆಗಳನ್ನು ಪೊಲೀಸರು ಪೂರೈಸಲಿದ್ದಾರೆ. ಹಲವು ದಶಕಗಳ ಬಳಿಕ ಹೊರಜಗತ್ತಿಗೆ ದೇವ್ಜಿ ಕಾಣಿಸಿಕೊಳ್ಳುತ್ತಿದ್ದಾರೆ.</p><p>ದೇವ್ಜಿ ಶರಣಾಗತಿಯನ್ನು ದೇಶದಲ್ಲಿ ನಕ್ಸಲ್ ಚಟುವಟಿಕೆ ಅಂತ್ಯಗೊಳ್ಳುವ ನಿರ್ಣಾಯಕ ಹಂತ ಎಂದೇ ವಿಶ್ಲೇಷಿಸಲಾಗಿದೆ. </p><p>ಶರಣಾಗತಿಯ ಕುರಿತು ತೆಲಂಗಾಣ ಡಿಜಿಪಿ ಶಿವಧರ್ ರೆಡ್ಡಿ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅದರಲ್ಲಿ ತೆಲಂಗಾಣದ ನಕ್ಸಲ್ ಚಳವಳಿಯ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.</p><p>ನಕ್ಸಲ್ ಮುಖಂಡರಾದ ಮಲ್ಲ ರಾಜಿ ರೆಡ್ಡಿ ಅಲಿಯಾಸ್ ಸಂಗ್ರಾಮ್, ನರಸಿಂಹ ರೆಡ್ಡಿ ಅಲಿಯಾಸ್ ಗಂಗಣ್ಣ ಮತ್ತು ಇತರೆ 16 ಮಂದಿ ನಕ್ಸಲರೊಂದಿಗೆ ದೇವ್ಜಿ ಶರಣಾಗಿರುವುದನ್ನು ತೆಲಂಗಾಣ ಪೊಲೀಸರ ವಿಶೇಷ ಗುಪ್ತಚರ ಘಟಕವು ‘ಪ್ರಜಾವಾಣಿ‘ಗೆ ಖಚಿತಪಡಿಸಿದೆ.</p><p>‘ದೇವ್ಜಿ ಮತ್ತು ತಂಡ ಎರಡು ದಿನಗಳ ಹಿಂದೆ ಆಸಿಫಾಬಾದ್ ಕಾಡಿನಿಂದ ಹೊರಬಂದು ಪೊಲೀಸರ ಮುಂದೆ ಶರಣಾಗಿದ್ದಾರೆ. ಶೀಘ್ರದಲ್ಲೇ ಶರಣಾಗತಿಯನ್ನು ಅಧಿಕೃತಗೊಳಿಸಿ, ಸಾರ್ವಜನಿಕವಾಗಿ ಪ್ರಕಟಿಸಲಾಗುವುದು’ ಎಂದು ಮೂಲಗಳು ತಿಳಿಸಿದ್ದವು. </p><p>ಆಪರೇಷನ್ ಬ್ಲ್ಯಾಕ್ ಫಾರೆಸ್–2 ಕಾರ್ಯಾಚರಣೆಗಾಗಿ ತೆಲಂಗಾಣ–ಛತ್ತೀಸಗಢ ಗಡಿಯಲ್ಲಿ ಅಪಾರ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡ ಬೆನ್ನಲ್ಲೇ ದೇವ್ಜಿ ಶರಣಾಗತಿ ನಡೆದಿದೆ. </p><p>2010ರಲ್ಲಿ ತಾಡ್ಮೆಟ್ಲಾದಲ್ಲಿ (ದಂತೆವಾಡ) 76 ಮಂದಿ ಸಿಆರ್ಪಿಎಫ್ ಸಿಬ್ಬಂದಿ ಹತ್ಯೆಗೆ ಕಾರಣವಾದ ಗೆರಿಲ್ಲಾ ದಾಳಿಯ ಹಿಂದಿನ ಸೂತ್ರಧಾರ ದೇವ್ಜಿ ಎನ್ನಲಾಗುತ್ತದೆ. ದೇಶವನ್ನು ನಕ್ಸಲ್ ಮುಕ್ತ ಎಂದು ಘೋಷಿಸಲು ಕೇಂದ್ರ ಸರ್ಕಾರ ಮಾರ್ಚ್ 31ರ ಗಡುವು ನಿಗದಿಪಡಿಸಿದೆ.</p>.ಮಹಾರಾಷ್ಟ್ರ: ಇಬ್ಬರು ನಕ್ಸಲರ ಹತ್ಯೆ, ಭದ್ರತಾ ಸಿಬ್ಬಂದಿ ಹುತಾತ್ಮ.ನಕ್ಸಲ್ ಕರಪತ್ರ ಹಂಚಿದ ಪ್ರಕರಣ: ನಕ್ಸಲ್ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಕಳೆದ ಆರು ದಶಕಗಳಿಂದ ದೇಶದ ಪ್ರಭಾವಿ ನಕ್ಸಲ್ ಮುಖಂಡರಾಗಿದ್ದ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್ಜಿ (ದೇವ್ ಜಿ) ಇಂದು ತೆಲಂಗಾಣದ ಉನ್ನತ ಪೊಲೀಸ್ ಅಧಿಕಾರಿಗಳ ಎದುರು ಶರಣಾಗಲಿದ್ದಾರೆ.</p><p>ಇಂದು ಸಂಜೆ ತೆಲಂಗಾಣ ರಾಜ್ಯ ಪೊಲೀಸ್ ಕಚೇರಿಯಲ್ಲಿ ಶರಣಾಗತಿಯ ಔಪಚಾರಿಕ ಪ್ರಕ್ರಿಯೆಗಳನ್ನು ಪೊಲೀಸರು ಪೂರೈಸಲಿದ್ದಾರೆ. ಹಲವು ದಶಕಗಳ ಬಳಿಕ ಹೊರಜಗತ್ತಿಗೆ ದೇವ್ಜಿ ಕಾಣಿಸಿಕೊಳ್ಳುತ್ತಿದ್ದಾರೆ.</p><p>ದೇವ್ಜಿ ಶರಣಾಗತಿಯನ್ನು ದೇಶದಲ್ಲಿ ನಕ್ಸಲ್ ಚಟುವಟಿಕೆ ಅಂತ್ಯಗೊಳ್ಳುವ ನಿರ್ಣಾಯಕ ಹಂತ ಎಂದೇ ವಿಶ್ಲೇಷಿಸಲಾಗಿದೆ. </p><p>ಶರಣಾಗತಿಯ ಕುರಿತು ತೆಲಂಗಾಣ ಡಿಜಿಪಿ ಶಿವಧರ್ ರೆಡ್ಡಿ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅದರಲ್ಲಿ ತೆಲಂಗಾಣದ ನಕ್ಸಲ್ ಚಳವಳಿಯ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.</p><p>ನಕ್ಸಲ್ ಮುಖಂಡರಾದ ಮಲ್ಲ ರಾಜಿ ರೆಡ್ಡಿ ಅಲಿಯಾಸ್ ಸಂಗ್ರಾಮ್, ನರಸಿಂಹ ರೆಡ್ಡಿ ಅಲಿಯಾಸ್ ಗಂಗಣ್ಣ ಮತ್ತು ಇತರೆ 16 ಮಂದಿ ನಕ್ಸಲರೊಂದಿಗೆ ದೇವ್ಜಿ ಶರಣಾಗಿರುವುದನ್ನು ತೆಲಂಗಾಣ ಪೊಲೀಸರ ವಿಶೇಷ ಗುಪ್ತಚರ ಘಟಕವು ‘ಪ್ರಜಾವಾಣಿ‘ಗೆ ಖಚಿತಪಡಿಸಿದೆ.</p><p>‘ದೇವ್ಜಿ ಮತ್ತು ತಂಡ ಎರಡು ದಿನಗಳ ಹಿಂದೆ ಆಸಿಫಾಬಾದ್ ಕಾಡಿನಿಂದ ಹೊರಬಂದು ಪೊಲೀಸರ ಮುಂದೆ ಶರಣಾಗಿದ್ದಾರೆ. ಶೀಘ್ರದಲ್ಲೇ ಶರಣಾಗತಿಯನ್ನು ಅಧಿಕೃತಗೊಳಿಸಿ, ಸಾರ್ವಜನಿಕವಾಗಿ ಪ್ರಕಟಿಸಲಾಗುವುದು’ ಎಂದು ಮೂಲಗಳು ತಿಳಿಸಿದ್ದವು. </p><p>ಆಪರೇಷನ್ ಬ್ಲ್ಯಾಕ್ ಫಾರೆಸ್–2 ಕಾರ್ಯಾಚರಣೆಗಾಗಿ ತೆಲಂಗಾಣ–ಛತ್ತೀಸಗಢ ಗಡಿಯಲ್ಲಿ ಅಪಾರ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡ ಬೆನ್ನಲ್ಲೇ ದೇವ್ಜಿ ಶರಣಾಗತಿ ನಡೆದಿದೆ. </p><p>2010ರಲ್ಲಿ ತಾಡ್ಮೆಟ್ಲಾದಲ್ಲಿ (ದಂತೆವಾಡ) 76 ಮಂದಿ ಸಿಆರ್ಪಿಎಫ್ ಸಿಬ್ಬಂದಿ ಹತ್ಯೆಗೆ ಕಾರಣವಾದ ಗೆರಿಲ್ಲಾ ದಾಳಿಯ ಹಿಂದಿನ ಸೂತ್ರಧಾರ ದೇವ್ಜಿ ಎನ್ನಲಾಗುತ್ತದೆ. ದೇಶವನ್ನು ನಕ್ಸಲ್ ಮುಕ್ತ ಎಂದು ಘೋಷಿಸಲು ಕೇಂದ್ರ ಸರ್ಕಾರ ಮಾರ್ಚ್ 31ರ ಗಡುವು ನಿಗದಿಪಡಿಸಿದೆ.</p>.ಮಹಾರಾಷ್ಟ್ರ: ಇಬ್ಬರು ನಕ್ಸಲರ ಹತ್ಯೆ, ಭದ್ರತಾ ಸಿಬ್ಬಂದಿ ಹುತಾತ್ಮ.ನಕ್ಸಲ್ ಕರಪತ್ರ ಹಂಚಿದ ಪ್ರಕರಣ: ನಕ್ಸಲ್ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>