ಜಿಲ್ಲಾ ಮೀಸಲು ಗಾರ್ಡ್ ಹಾಗೂ ಕೋಬ್ರಾ ಪಡೆಗಳು ಕಿಸ್ತರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ನಕ್ಸಲ್ ನಿಗ್ರಹ ಕಾರ್ಯಚರಣೆ ನಡೆಸುವ ವೇಳೆ ಗುಂಡಿನ ಕಾಳಗ ನಡೆದಿದೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಜಿ. ಚವಾಣ್ ಹೇಳಿದ್ದಾರೆ.
ರಾಜ್ಯ ರಾಜಧಾನಿ ರಾಯಪುರದಿಂದ 450 ಕಿ.ಮಿ ದೂರದಲ್ಲಿ ಘಟನೆ ನಡೆದಿದೆ. ಚಕಮಕಿ ಬಳಿಕ ಓರ್ವ ನಕ್ಸಲ್ನ ಮೃತದೇಹ ಹಾಗೂ ಕೆಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.