ಅಪಘಾತ ಸಂಭವಿಸಿದ ವೇಳೆ ವಾಹನಗಳ ಸಂಚಾರ ವ್ಯತ್ಯಯವಾಗದಂತೆ ಜಾಗ್ರತೆವಹಿಸಬೇಕು. ಹೆದ್ದಾರಿ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡವು ರಸ್ತೆ ಸಂಚಾರ ಪರಿಕರಗಳನ್ನು ಬಳಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಸ್ಥಳೀಯ ಪೊಲೀಸರು, ತುರ್ತುಸೇವಾ ವಿಭಾಗ ಹಾಗೂ ಸ್ಥಳೀಯ ಆಡಳಿತದ ನೆರವಿನೊಂದಿಗೆ ಇದನ್ನು ಕಾರ್ಯಗತಗೊಳಿಸಬೇಕು ಎಂದು ಸೂಚಿಸಿದೆ.