ಕೊಯಮತ್ತೂರಿನಲ್ಲಿ ಸಂಭವಿಸಿದ್ದ ಕಾರು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ, ಕೊಯಮತ್ತೂರಿನ 14 ಸ್ಥಳಗಳಲ್ಲಿ, ತಿರುಚಿನಾಪಳ್ಳಿ, ತೂತ್ತುಕುಡಿ, ದಿಂಡಿಗಲ್, ಮೈಲಾಡುತುರೈ, ಕೃಷ್ಣಗಿರಿ, ಕನ್ಯಾಕುಮಾರಿ, ತೆಂಕಾಸಿ ಹಾಗೂ ಕೇರಳದ ಎರ್ನಾಕುಲಂನ ತಲಾ ಒಂದು ಸ್ಥಳದಲ್ಲಿ ಶೋಧ ನಡೆದಿದೆ. ತಮಿಳುನಾಡಿನ ನೀಲಗಿರಿಯಲ್ಲಿ 2, ತಿರುನೆಲ್ವೇಲಿ– 3, ಚೆನ್ನೈ–3, ತಿರುವಣ್ಣಾಮಲೈನ 2 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ.