<p><strong>ನವದೆಹಲಿ</strong>: ‘ಇಂಡಿಯಾ’ ಮೈತ್ರಿಕೂಟವು ಆರಂಭದಲ್ಲಿದ್ದಂತೆ ಈಗ ಬಿರುಸು ಕಾಯ್ದುಕೊಳ್ಳದೇ ಇರಲು, ಕಾಂಗ್ರೆಸ್ ಪಕ್ಷವು ಸದ್ಯ ನಡೆಯುತ್ತಿರುವ ಐದು ರಾಜ್ಯಗಳ ಚುನಾವಣೆಗಳತ್ತಲೇ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದೇ ಕಾರಣ’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.</p>.<p>ಸಿಪಿಐ ಪಕ್ಷ ಗುರುವಾರ ಪಾಟ್ನಾದಲ್ಲಿ ಅಯೋಜಿಸಿದ್ದ ‘ಬಿಜೆಪಿ ಹಠಾವೊ, ದೇಶ್ ಬಚಾವೊ’ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಇಂಡಿಯಾ’ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಸ್ವರ ಮೂಡಿರುವುದನ್ನು ಉಲ್ಲೇಖಿಸಿ ಈ ಮಾತು ಹೇಳಿದರು. </p>.<p>ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ‘ಇಂಡಿಯಾ’ದ ಸದಸ್ಯ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳದ ಕಾಂಗ್ರೆಸ್ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈಚೆಗೆ ಬೇಸರ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ನಿತೀಶ್ ಹೇಳಿಕೆ ಹೊರಬಿದ್ದಿದೆ.</p>.<p>ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ವಿರೋಧಿಸುವ ಪಕ್ಷಗಳು, ‘ಇಂಡಿಯಾ’ ಹೆಸರಿನಲ್ಲಿ ಮೈತ್ರಿಕೂಟವನ್ನು ರಚಿಸಿಕೊಂಡಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಮೈತ್ರಿಕೂಟದಲ್ಲಿ ಗಣನೀಯ ಬೆಳವಣಿಗೆ ಕಂಡುಬಂದಿಲ್ಲ ಎಂದು ನಿತೀಶ್ ಕುಮಾರ್ ಅಭಿಪ್ರಾಯಪಟ್ಟರು.</p><p>ಇತಿಹಾಸಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವವರಿಂದ ದೇಶವನ್ನು ರಕ್ಷಿಸಲು ಒಗ್ಗಟ್ಟು ಕಾಯ್ದುಕೊಳ್ಳಬೇಕು ಎಂದು ನಾವು ಎಲ್ಲ ಪಕ್ಷಗಳ ಮುಖಂಡರ ಜೊತೆಗೆ ಚರ್ಚಿಸಿ, ಆಗ್ರಹಪಡಿಸಿದ್ದೆವು. ಇದೇ ಕಾರಣಕ್ಕೆ ವಿವಿಧೆಡೆ ಸಭೆ ನಡೆದ ಬಳಿಕ ಮೈತ್ರಿಕೂಟ ರಚನೆಯಾಗಿತ್ತು ಎಂದು ಸ್ಮರಿಸಿದರು.</p><p>‘ಈಗ ಕಾಂಗ್ರೆಸ್ಗೆ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ಕುರಿತೇ ಹೆಚ್ಚಿನ ಒಲವಿದೆ. ನಾವು ಕಾಂಗ್ರೆಸ್ ಮುನ್ನಡೆಸಲು ಯತ್ನಿಸುತ್ತಿದ್ದೇವೆ. ಇದನ್ನು ಆ ಪಕ್ಷ ಗಮನಿಸುತ್ತಿಲ್ಲ. ಬಹುಶಃ ಚುನಾವಣೆ ಬಳಿಕ ಕಾಂಗ್ರೆಸ್ ಎಲ್ಲರ ಜೊತೆಗೆ ಮಾತನಾಡಬಹುದು’ ಎಂದೂ ಅಭಿಪ್ರಾಯಪಟ್ಟರು. </p><p>ಕಾಂಗ್ರೆಸ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ಅಖಿಲೇಶ್, ‘2018ರ ಚುನಾವಣೆಯಲ್ಲಿ ಆ ಪಕ್ಷ ಉತ್ತಮ ಸಾಧನೆ ಮಾಡಿರಬಹುದು. ಆದರೆ, ಬಿಜೆಪಿಯು ಹಿಂದಿ ಪ್ರಾಬಲ್ಯದ ರಾಜ್ಯಗಳ ವಿಧಾನಸಭೆ ಚುನಾವಣೆ ಗೆದ್ದರೂ, ಅದರಿಂದ ಹಿಗ್ಗಿಹೋಗಲಿಲ್ಲ’ ಎಂದು ಕಾಂಗ್ರೆಸ್ ಪಕ್ಷಕ್ಕೆ ನೆನಪಿಸಿದ್ದರು.</p><p>‘ಈಗ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿಯೂ ಮೈತ್ರಿಕೂಟದ ಸದಸ್ಯ ಪಕ್ಷಗಳು ಒಟ್ಟಾಗಿಯೇ ಸ್ಪರ್ಧೆ ನಡೆಸಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಅಭಿಪ್ರಾಯಪಟ್ಟರು.</p><p>‘ಇಂಡಿಯಾ’ ಮೈತ್ರಿಕೂಟದ ಕಡೆಯ ಸಭೆಯು ಈ ವರ್ಷದ ಆಗಸ್ಟ್–ಸೆಪ್ಟೆಂಬರ್ ತಿಂಗಳಲ್ಲಿ ಮುಂಬೈನಲ್ಲಿ ನಡೆದಿತ್ತು. ಆ ನಂತರ ಮೈತ್ರಿಕೂಟದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ. </p><p>‘ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಕಾರ್ಯವು ಡಿ.3ರಂದು ನಡೆಯಲಿದ್ದು, ಆ ನಂತರವೇ ಪ್ರಗತಿ ನಿರೀಕ್ಷಿಸಬಹುದು. ಪಾಟ್ನಾ, ನಾಗ್ಪುರ, ಚೆನ್ನೈ, ಗುವಾಹಟಿ ಮತ್ತು ದೆಹಲಿಯಲ್ಲಿ ಮೈತ್ರಿಕೂಟದ ರ್ಯಾಲಿ ಸಂಘಟಿಸುವ ಚಿಂತನೆ ಮುಖಂಡರಲ್ಲಿದೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಇಂಡಿಯಾ’ ಮೈತ್ರಿಕೂಟವು ಆರಂಭದಲ್ಲಿದ್ದಂತೆ ಈಗ ಬಿರುಸು ಕಾಯ್ದುಕೊಳ್ಳದೇ ಇರಲು, ಕಾಂಗ್ರೆಸ್ ಪಕ್ಷವು ಸದ್ಯ ನಡೆಯುತ್ತಿರುವ ಐದು ರಾಜ್ಯಗಳ ಚುನಾವಣೆಗಳತ್ತಲೇ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದೇ ಕಾರಣ’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.</p>.<p>ಸಿಪಿಐ ಪಕ್ಷ ಗುರುವಾರ ಪಾಟ್ನಾದಲ್ಲಿ ಅಯೋಜಿಸಿದ್ದ ‘ಬಿಜೆಪಿ ಹಠಾವೊ, ದೇಶ್ ಬಚಾವೊ’ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಇಂಡಿಯಾ’ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಸ್ವರ ಮೂಡಿರುವುದನ್ನು ಉಲ್ಲೇಖಿಸಿ ಈ ಮಾತು ಹೇಳಿದರು. </p>.<p>ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ‘ಇಂಡಿಯಾ’ದ ಸದಸ್ಯ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳದ ಕಾಂಗ್ರೆಸ್ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈಚೆಗೆ ಬೇಸರ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ನಿತೀಶ್ ಹೇಳಿಕೆ ಹೊರಬಿದ್ದಿದೆ.</p>.<p>ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ವಿರೋಧಿಸುವ ಪಕ್ಷಗಳು, ‘ಇಂಡಿಯಾ’ ಹೆಸರಿನಲ್ಲಿ ಮೈತ್ರಿಕೂಟವನ್ನು ರಚಿಸಿಕೊಂಡಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಮೈತ್ರಿಕೂಟದಲ್ಲಿ ಗಣನೀಯ ಬೆಳವಣಿಗೆ ಕಂಡುಬಂದಿಲ್ಲ ಎಂದು ನಿತೀಶ್ ಕುಮಾರ್ ಅಭಿಪ್ರಾಯಪಟ್ಟರು.</p><p>ಇತಿಹಾಸಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವವರಿಂದ ದೇಶವನ್ನು ರಕ್ಷಿಸಲು ಒಗ್ಗಟ್ಟು ಕಾಯ್ದುಕೊಳ್ಳಬೇಕು ಎಂದು ನಾವು ಎಲ್ಲ ಪಕ್ಷಗಳ ಮುಖಂಡರ ಜೊತೆಗೆ ಚರ್ಚಿಸಿ, ಆಗ್ರಹಪಡಿಸಿದ್ದೆವು. ಇದೇ ಕಾರಣಕ್ಕೆ ವಿವಿಧೆಡೆ ಸಭೆ ನಡೆದ ಬಳಿಕ ಮೈತ್ರಿಕೂಟ ರಚನೆಯಾಗಿತ್ತು ಎಂದು ಸ್ಮರಿಸಿದರು.</p><p>‘ಈಗ ಕಾಂಗ್ರೆಸ್ಗೆ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ಕುರಿತೇ ಹೆಚ್ಚಿನ ಒಲವಿದೆ. ನಾವು ಕಾಂಗ್ರೆಸ್ ಮುನ್ನಡೆಸಲು ಯತ್ನಿಸುತ್ತಿದ್ದೇವೆ. ಇದನ್ನು ಆ ಪಕ್ಷ ಗಮನಿಸುತ್ತಿಲ್ಲ. ಬಹುಶಃ ಚುನಾವಣೆ ಬಳಿಕ ಕಾಂಗ್ರೆಸ್ ಎಲ್ಲರ ಜೊತೆಗೆ ಮಾತನಾಡಬಹುದು’ ಎಂದೂ ಅಭಿಪ್ರಾಯಪಟ್ಟರು. </p><p>ಕಾಂಗ್ರೆಸ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ಅಖಿಲೇಶ್, ‘2018ರ ಚುನಾವಣೆಯಲ್ಲಿ ಆ ಪಕ್ಷ ಉತ್ತಮ ಸಾಧನೆ ಮಾಡಿರಬಹುದು. ಆದರೆ, ಬಿಜೆಪಿಯು ಹಿಂದಿ ಪ್ರಾಬಲ್ಯದ ರಾಜ್ಯಗಳ ವಿಧಾನಸಭೆ ಚುನಾವಣೆ ಗೆದ್ದರೂ, ಅದರಿಂದ ಹಿಗ್ಗಿಹೋಗಲಿಲ್ಲ’ ಎಂದು ಕಾಂಗ್ರೆಸ್ ಪಕ್ಷಕ್ಕೆ ನೆನಪಿಸಿದ್ದರು.</p><p>‘ಈಗ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿಯೂ ಮೈತ್ರಿಕೂಟದ ಸದಸ್ಯ ಪಕ್ಷಗಳು ಒಟ್ಟಾಗಿಯೇ ಸ್ಪರ್ಧೆ ನಡೆಸಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಅಭಿಪ್ರಾಯಪಟ್ಟರು.</p><p>‘ಇಂಡಿಯಾ’ ಮೈತ್ರಿಕೂಟದ ಕಡೆಯ ಸಭೆಯು ಈ ವರ್ಷದ ಆಗಸ್ಟ್–ಸೆಪ್ಟೆಂಬರ್ ತಿಂಗಳಲ್ಲಿ ಮುಂಬೈನಲ್ಲಿ ನಡೆದಿತ್ತು. ಆ ನಂತರ ಮೈತ್ರಿಕೂಟದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ. </p><p>‘ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಕಾರ್ಯವು ಡಿ.3ರಂದು ನಡೆಯಲಿದ್ದು, ಆ ನಂತರವೇ ಪ್ರಗತಿ ನಿರೀಕ್ಷಿಸಬಹುದು. ಪಾಟ್ನಾ, ನಾಗ್ಪುರ, ಚೆನ್ನೈ, ಗುವಾಹಟಿ ಮತ್ತು ದೆಹಲಿಯಲ್ಲಿ ಮೈತ್ರಿಕೂಟದ ರ್ಯಾಲಿ ಸಂಘಟಿಸುವ ಚಿಂತನೆ ಮುಖಂಡರಲ್ಲಿದೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>